ಬೆಂಗಳೂರು
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಡೆಸುತ್ತಿರುವ ವಿದ್ಯಾವಾಸಿನಿ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಕಳೆದ ದಿ.18 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎವಿ ಚಂದ್ರಶೇಖರ್ ಮತ್ತು ಜೆ ಫ್ರಾಗ್ ಕಂಪನಿಯ ಆರ್ ಎನ್ ಡಿ ಯ ಮುಖ್ಯಸ್ಥ ಪ್ರಸನ್ನ ರಾಘವೇಂದ್ರ ಅವರು ಭೇಟಿ ನೀಡಿದರು.

ನಿವೃತ್ತ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ಅವರು ವಿದ್ಯಾರ್ಥಿ ನಿಲಯಕ್ಕೆ ನಾಲ್ಕು ವಾಟರ್ ಫಿಲ್ಟರ್ ಗಳನ್ನು ಕೊಡುಗೆಯಾಗಿ ನೀಡಿದ್ದನ್ನು ಚಾಲನೆಗೊಳಿಸಿದರು ಮತ್ತು 10 ಲ್ಯಾಪ್ಟಾಪ್ ಗಳನ್ನು ಬಡ ವಿದ್ಯಾರ್ಥಿಗಳಿಗೆ ನೀಡಿದರು.

ಪ್ರಸನ್ನ ರಾಘವೇಂದ್ರ ಅವರು ವಿದ್ಯಾರ್ಥಿ ನಿಲಯಕ್ಕೆ ನಾಲ್ಕು ವಾಷಿಂಗ್ ಮಷೀನ್ ನೀಡುವುದಾಗಿ ವಾಗ್ದಾನ ಮಾಡಿದರು.

ಈ ಕಾರ್ಯಕ್ರಮದ ನೇತೃತ್ವವನ್ನು ವಸತಿ ನಿಲಯದ ಮುಖ್ಯಸ್ಥರು ಮತ್ತು ಇನ್ಫೋಸಿಸ್ ಕಂಪನಿಯ ನಿರ್ದೇಶಕ ಕೃಷ್ಣ ಸ್ವಾಮಿ ವಹಿಸಿದ್ದರು.