ಸದನದಲ್ಲಿ ಸವದಿ, ಅಭಯ ಅದ್ಭುತ ಮಾತು..!

ಸುವರ್ಣಸೌಧ.ಬೆಳಗಾವಿ

ಚಳಿಗಾಲ ಅಧಿವೇಶನ ಮುಕ್ತಾಯ ಹಂತ ತಲುಪಿಸಾಗ ಸರ್ಕಾರ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದ್ದವು.

ಕಾಂಗ್ರೆಸ್ ಶಾಸಕ ಲಜ್ಷ್ಮಣ ಸವದಿ ಕಬ್ಬು ಬೆಳೆಗಾರರ ಸಮಸ್ಯೆಗಳು ಮತ್ತು ಕಾರ್ಖಾನೆಗಳು ತೂಕದಲ್ಲಿ ಮಾಡುತ್ತಿರುವ ವಂಚನೆಗಳ ಬಗ್ಗೆ ಸುಧೀರ್ಘ ವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳ ಗ್ಯಾಲರಿ ಬಿಕೋ ಎನ್ನುತ್ತಿತ್ತು. ಸಚಿವರ ಹಾಜರಿ ಕೂಡ ಅಷ್ಟಕಷ್ಟೆ ಇತ್ತು. ಇದು ಸಹಜವಾಗಿ ಸವದಿಯವ ಪಿತ್ತ ನೆತ್ತಿಗೇರುವಂತೆ ಮಾಡಿತು ಅಧಿಕಾರಿಗಳೇನ್ ಇಸ್ಪೀಟ್ ಆಡೋಕೆ ಹೋಗಿದ್ದಾರಾ ಎಂದು ಪ್ರಶ್ನೆ ಮಾಡಿದರು.

ಇನ್ನು ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯ ಬಂದಾಗ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಅತ್ಯಂತ ಗಂಭೀರವಾಗಿ ಮಾತನಾಡಿದ್ದಲ್ಲದೆ ವಾಸ್ತವತೆಯನ್ನು ತೆರೆದಿಟ್ಟರು.

ಇಲ್ಲಿ ಅಭಯ ಪಾಟೀಲರ ಮಾತನ್ನು ಇಡೀ ಸದನ ಶಾಂತವಾಗಿ ಆಲಿಸಿತು. ಅಷ್ಟೇ ಇಲ್ಲ ಈ ಸಂದರ್ಭದಲ್ಲಿ ಕೂಡ ಸದನದಲ್ಲಿ ಮಂತ್ರಿಗಳ ಹಾಜರಾತಿ ಕೊರತೆ ಕಂಡು ಬಂದಿತು. ಅಣದಿಕಾರಿಗಳೂ ಗೈರಾಗಿದ್ದರು. ಇದೆಲ್ಲವನ್ನು ಗಮನಿಸಿದ ಶಾಸಕ ಅಭಯ ಪಾಟೀಲರು ತಮ್ಮದೇ ಆದ ಗೌಡಕಿ‌ ಶೈಲಿಯಲ್ಲಿ ಎಲ್ಲರನ್ಬು ತರಾಟೆಗೆ ತೆಗೆದುಕೊಂಡರು.

ಹಾಗಿದ್ದರೆ ಅವರ ವಾಕ್ ಚಾತುರ್ಯ ಹೇಗಿತ್ತು ಗೊತ್ತಾ?

ಇದು ಟೂರಿಂಗ್ ಟಾಕೀಜ್ ಅಗಿದೆ..!

ಬೆಳಗಾವಿ -ಬೆಳಗಾವಿಯಲ್ಲಿ ಸುವರ್ಣಸೌಧ ಆದಾಗಿನಿಂದ ಗಡಿನಾಡಿಗೆ ಅನ್ಯಾಯ ಆಗುತ್ತಲೇ ಇದೆ. ಇದೊಂಥರಾ ಟೂರಿಂಗ್ ಟಾಕೀಜ್ ಆಗಿದೆ ಎಂದು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದರು.


ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವ ಬದಲು ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿ ಇದನ್ನು ಮಿನಿ ವಿಧಾಸೌದ ಮಾಡಿದ್ದಾರೆ. ಬೆಳಗಾವಿಯ ಸುವರ್ಣಸೌಧ ಭೂತ ಬಂಗಲೆಯಾಗಿದೆ. ಇದೊಂದು ಟೂರೀಂಗ್ ಟಾಕೀಸ್ ಆಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.


ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸಮ್ಮೇಳನಗಳು ಬೆಳಗಾವಿಯಲ್ಲಿ ನಡೆಯಬೇಕು. ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು,ಇಲ್ಲಿ ಸಮೀತಿಗಳ ಸಭೆಗಳು ನಡೆಯಬೇಕು, ಸಚಿವ ಸಂಪುಟದ ಸಭೆಗಳನ್ನು ಆಗಾಗ್ಗೆ ಇಲ್ಲಿ ನಡೆಸಿ ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದರು.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ದಕ್ಷಿಣ ಕರ್ನಾಟಕದ ಶೇ 60 ರಷ್ಟು ಶಾಸಕರು ಮಾತ್ರ ಭಾಗವಹಿಸುತ್ತಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದೆ. ನಾಲ್ಕು ಜನ ಮಂತ್ರಿಗಳನ್ನು ಬಿಟ್ಟರೆ ಉಳಿದವರು ಗೈರಾಗಿದ್ದಾರೆ. ಉತ್ತರ ಕರ್ನಾಟಕದ ಇವರಿಗೆ ಎಷ್ಟು ಕಾಳಜಿ ಇದೆ ನೋಡಿ ಎಂದರು. ಕಾಟಾಚಾರಕ್ಕೆ ಚರ್ಚೆ ಮಾಡಿ ನಮಗೆ ಲಾಲಿಪಾಪ್ ಕೊಡಬೇಡಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದು ಅಭಯ ಪಾಟೀಲ ಒತ್ತಾಯಿಸಿದರು.

ಉದ್ಯಮ ಬೆಳೆಯಬೇಕು
ಬೆಳಗಾವಿಯಲ್ಲಿ ಉದ್ಯಮಗಳು ಬೆಳೆಯಬೇಕು, ಐಟಿ ಪಾರ್ಕ್ ನಿರ್ಮಾಣ ಆಗಬೇಕು, ಮಂಜೂರಾಗಿರುವ ಕಿದ್ವಾಯಿ ಆಸ್ಪತ್ರೆಯ ಕಾಮಗಾರಿ ಆರಂಭಿಸಬೇಕು, ಬೆಳಗಾವಿಯ ಕ್ರಿಕೆಟ್ ಸ್ಟೇಡಿಯಂ ಮೇಲ್ದರ್ಜೆರಿಸಿ ಇಲ್ಲಿ ಐಪಿಎಲ್ ಮ್ಯಾಚ್ ಗಳು ನಡೆಯುವಂತೆ ಅಭಿವೃದ್ಧಿ ಪಡಿಸಬೇಕು ಎಂದರು.
ಬೆಳಗಾವಿಯ ಡ್ರಿನೇಜ್ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು, ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಬೆಳಗಾವಿಯಲ್ಲಿ ಸ್ಪೋರ್ಟ್ಸ್ ಕ್ಲಬ್ ನಿರ್ಮಾಣಕ್ಕೆ 60 ಎಕರೆ ಭೂಮಿ ಗುರುತಿಸಲಾಗಿದ್ದು ಸರ್ಕಾರ ಇದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಅಭಯ ಪಾಟೀಲ ಹೇಳಿದರು. ಬೆಳಗಾವಿಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರು.

ಎಂಬಿಪಿ ಭರವಸೆ..


ಇದಕ್ಕೆ ಸ್ಪಂದಿಸಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಬೆಳಗಾವಿಯ ಫೌಂಡ್ರಿ ಉದ್ಯಮ ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದೆ.ಇದನ್ನು ಇನ್ನಷ್ಟು ಅಭಿವೃದ್ಧಿ ಆಗಬೇಕು ಎನ್ನುವದು ಸರ್ಕಾರದ ಆಶಯ ಆಗಿದೆ. ಅದಕ್ಕಾಗಿ ಸೂಕ್ತ ಜಾಗೆಯನ್ನು ಗುರುತಿಸುವಂತೆ ನಾನು ಅಭಯ ಪಾಟೀಲ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಕಣಗಲಾ ಹತ್ತಿರ ನಾವು ನಿರ್ಮಿಸಿದ ಕೈಗಾರಿಕಾ ಪ್ರದೇಶಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಕಣಗಲಾದಲ್ಲಿ ಎರಡನೇಯ ಕೈಗಾರಿಕಾ ಪ್ರದೇಶ ನಿರ್ಮಿಸಲು ನಿರ್ಧರಿಸಿದ್ದೇವೆ.ಬೆಳಗಾವಿಯಲ್ಲಿ ಪಾರ್ಕ ನಿರ್ಮಿಸುತ್ತೇವೆ. ಬೆಳಗಾವಿಯ ಉದ್ಯಮ ವಲಯ ಬೆಳೆಯಬೇಕು ಎನ್ನುವದು ನಮ್ಮ ಆಶಯವಾಗಿದೆ ಎಂದು ಎಂ.ಬಿ ಪಾಟೀಲ ಹೇಳಿದರು

Leave a Reply

Your email address will not be published. Required fields are marked *

error: Content is protected !!