

ಟಿಳಕವಾಡಿ ಠಾಣೆ ವ್ಯಾಪ್ತಿ ಗಣೇಶ ಮಂಡಳಗಳ ಸಭೆ.
ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಪಿಐ ದಯಾನಂದ ಶೇಗುಣಸಿ ಮನವಿ.
ರಸ್ತೆ ದುರಸ್ತಿಗೆ ಅಗತ್ಯ ಕ್ರಮ.-ವಾಣಿ ಜೋಶಿ
ಬೆಳಗಾವಿ.
ಗಣೇಶೋತ್ಸವ ಹಿನ್ನೆಯೆಲ್ಲಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣೇಶ ಮಂಡಳಗಳ ಸಭೆಗಳು ನಡೆಯುತ್ತಿವೆ,

ಇಂದು ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ ಮಂಡಳಗಳ ಮತ್ತು ಶಾಂತಿ ಸಮಿತಿ ಸಭೆ ನಡೆಯಿತು.

ಟಿಳಕವಾಡಿ ಪೊಲೀಸ್ ಇನ್ಸಪೆಕ್ಟರ್ ದಯಾನಂದ ಶೇಗುಣಸಿ ಅವರು ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿದರು.

ಮಹಾನಗರ ಪಾಲಿಕೆಯ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ ಮಾತನಾಡಿ ಗಣೇಶ ಹಬ್ಬದೊಳಗೆ ರಸ್ತೆ ಮಧ್ಯದಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ಬು ಮುಚ್ವುವ ಕೆಲಸ ಮಾಡಲಾಗುತ್ತಿದೆ ಎಂದರು.
ನಗರಸೇವಕರಾದ ಅಭಿಜಿತ್ ಜವಳಕರ, ನಿತಿನ್ ಜಾಧವ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.