ದಂಡ ವಿಧಿಸಿದ ಮಹಾನಗರ ಪಾಲಿಕೆ. ಪಾಲಿಕೆ ಆಯುಕ್ತರ ದಿಟ್ಟ ನಿರ್ಧಾರ.
ಬುದ್ದಿ ಹೇಳಿದರೂ ಸುಧಾರಿಸದ ಕಂಪನಿ.
ಕಳಪೆ ಕಾಮಗಾರಿಯ ಆರೋಪ
ಬೆಳಗಾವಿ.
ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸದವರಿಗೆ ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸುವ ಕೆಲಸವನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಮಾಡಿದ್ದಾರೆ.
ಬೆಳಗಾವಿಗೆ ನಿರಂತರ ಕುಡಿಯುವ ನೀರು ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿಗೆ ಮಹಾನಗರ ಪಾಲಿಕೆಯು ಬರೊಬ್ಬರಿ 21 ಕೋಟಿ 46 ಲಕ್ಷ ರೂ ದಂಡ ವಿಧಿಸಿದೆ.

ನಿಗದಿತ ಅವಧಿಯಲ್ಲಿ ಗುರಿಸಾಧನೆ ಮಾಡದೇ ಇರುವುದು ಸೇರಿದಂತೆ ಕಳಪೆ ಮಟ್ಟದ ಕಾಮಗಾರಿಯ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಈ ಮಹತ್ವದ ನಿಧರ್ಾರ ಮಾಡಿದ್ದಾರೆ, ಅಷ್ಟೇ ಅಲ್ಲ ಸಂಬಂಧಿಸಿದ ಕಂಪನಿಗೆ ಕಾರಣ ಸಮೇತ ಉಲ್ಲೇಖಿಸಿ ಪತ್ರವನ್ನು ಕಳೆದ ದಿ 12 ರಂದು ರವಾನಿಸಿದ್ದಾರೆ