Headlines

ಬೆಳಗಾವಿ-ಮೈಸೂರು ರೇಲ್ವೆಗೆ ಚಾಲನೆ

ಬೆಳಗಾವಿ. ಇನ್ನು‌ಮುಂದೆ ಮೈಸೂರಿಗೆ ರೈಲಿನ ಮೂಲಕ ಹೋಗಬೇಕೆನ್ನುವವರು ಪ್ರಯಾಸ ಪಡಬೇಕಾದ ಅವಶ್ಯಕತೆಯಿಲ್ಲ. ಸಂಸದೆ ಮಂಗಲಾ ಅಂಗಡಿ ಅವರ ಪ್ರಯತ್ನದ ಫಲವಾಗಿ ಇಂದಿನಿಂದ ಬೆಳಗಾವಿ ಮೈಸೂರು ನಡುವೆ ರೈಲು ಸಂಚಾರ‌ ಆರಂಭವಾಗಲಿದೆ. ಇಂದು ದಿ.‌26 ರಂದು ಸಂಜೆ 7.15.ಕ್ಕೆ ಸಂಸದರು ಬೆಳಗಾವಿ ರೈಲು ನಿಲ್ದಾಣದಲ್ಲಿ ಈ ರೈಲಿಗೆ ಹಸಿರು‌ ನಿಶಾನೆ ತೋರಿಸಲಿದ್ದಾರೆ.

Read More

ಜನತಾದರ್ಶನದಲ್ಲಿ ಸಂಸದರನ್ನು ಎಳೆದಾಡಿದ ಎಸ್ಪಿ

ಕೋಲಾರ, ಜನತಾದರ್ಶನದಿಂದ ಸಂಸದರನ್ನೇ ಎಳೆದಾಡಿದ ಎಸ್ಪಿ ಹೊರಗೆ ಹಾಕಿದ ಘಟನೆ ನಡೆದಿದೆ. ಶಾಸಕರು ಮತ್ತು ಸಂಸದ ಮುನಿಸ್ವಾಮಿ ಅವರ ನಡುವೆ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಎಸ್ಪಿ ಯವರು ಆವೇಶಭರಿತವಾಗಿ ಮಾತನಾಡಿದ್ದಲ್ಲದೇ ಅವರನ್ನು ಎಳೆದಾಡಿ ಹೊರಗೆ ಹಾಕುವ ಕೆಲಸ ಮಾಡಿದರು.

Read More

ಬೆಳಗಾವಿಗೆ ಹೊಸ ಯೋಜನೆ- ಚರ್ಚೆ

ಹುಕ್ಕೇರಿ : ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸೋಮವಾರ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಇಲಾಖೆಯ ಆರ್ಕಿಟೆಕ್ಚರ್ ವಿಭಾಗ ಹಾಗೂ ಮುಖ್ಯ ಅಭಿಯಂತರರ ಕಚೇರಿಗೆ ಭೇಟಿ ನೀಡಿ ಬೆಳಗಾವಿಯ ಹೊಸ ಯೋಜನೆಗಳ ಕುರಿತು ಸುಧೀರ್ಘ ಚರ್ಚೆ ನಡೆಸಿದರು. ಸಚಿವ ಜಾರಕಿಹೊಳಿ ಅವರು ಆರ್ಕಿಟೆಕ್ಚರ್ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ವಿವಿಧ ಯೋಜನೆಗಳ ಮಾಹಿತಿ ಪಡೆದರು. ಇಲಾಖೆಯ ವಿವಿಧ ಹೊಸ ಯೋಜನೆಗಳು ಮತ್ತು ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣ ನವೀಕರಣ, ಹೊಸದಾಗಿ ನಿರ್ಮಿಸಲು…

Read More

ಗಣೇಶ ದರ್ಶನಕ್ಕೆ ಬೈಕ ಹತ್ತಿದ ಶಾಸಕ

ಬೆಳಗಾವಿ.ಕಿರಿಯರಲ್ಲಿ ಹಿರಿಯ ರಾಜಕಾರಣಿ ಎನಿಸಿಕೊಂಡು ವಿನೂತನ ಕಾರ್ಯಗಳ ಮೂಲಕ ಸೈ ಎನಿಸಿಕೊಂಡವರು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಒಬ್ಬರು, ತಮ್ಮ ಅಧಿಕಾರಾವಧಿಯಲ್ಲಿ ಎಂದಿಗೂ ಹೈಟೆಕ್ ರಾಜಕಾರಣ ಮಾಡದೇ ಕ್ಷೇತ್ರದ ಜನರ ಮಧ್ಯದಲ್ಲಿದ್ದು ಮುನ್ನಡೆದವರಲ್ಲಿ ಇವರು ಮೊದಲಿಗರು ಎನ್ನಬಹುದು ,ಈಗ ವಿಶೇಷವಾಗಿ ಬೆಳಗಾವಿ ಗಣೇಶ ದರ್ಶನಕ್ಕೆ ಅವರು ಕಾರ್ಯಕರ್ತನ ಬೈಕ್ ಏರಿ ಹೊರಟಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಛತ್ತೀಸಗಡ ಚುನಾವಣೆ ಉಸ್ತುವಾರಿ ಜವಾಬ್ದಾರಿ ಮಧ್ಯೆಯೇ‌ ಬಿಡುವು ಮಾಡಿಕೊಂಡ ಅಭಯ ಪಾಟೀಲರು, ಗಣೇಶ ಹಬ್ಬದ ಸಂದರ್ಭದಲ್ಲಿ…

Read More
error: Content is protected !!