ಬೆಳಗಾವಿಯಲ್ಲಿ ವಿಸರ್ಜನೆಯದ್ದೇ ಸಮಸ್ಯೆ..!

ಬೆಳಗಾವಿ, ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಅಂತಿಮ ಸಿದ್ಧತೆ ಗಳು ನಡೆದ. ಬೆನ್ನ ಹಿಂದೆಯೇ ಜಿಲ್ಲಾಡಳಿತಕ್ಕೆ ವಿಸರ್ಜನೆ ಹೊಂಡದ ಸಮಸ್ಯೆ ಕಾಡತೊಡಗಿದೆ.

ಬೆಳಗಾವಿ‌ನಗರದಲ್ಲಿ ಈ ಬಾರಿ ಸುಮಾರು‌ ಮೂರುನೂರಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳಿವೆ. ಗಮನಿಸಬೇಕಾದ ಸಂಗತಿ ಎಂದರೆ ಅವುಗಳ ಎತ್ತರ ಕಳೆದ ಬಾರಿಗಿಂತ ಎತ್ತರವಾಗಿವೆ.

ಕಳೆದ ವಾರಿ ವಿಸರ್ಜನೆ ವೇಳೆ ಬಹಳಷ್ಟು ತೊಂದರೆ ಆಗಿತ್ತು. ಈಗ ಮೂರ್ತಿಗಳು ಎತ್ತರ ಆಗಿದ್ದರಿಂದ ಮತ್ತದೇ ಸಮಸ್ಯೆ ಬರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಅವರು ಜಿಲ್ಲಾಧಿಕಾರಿ ನಿತೇಶ ಪಾಟೀಲರೊಂದಿಗೆ‌ ಚರ್ಚೆ ನಡೆಸಿದರು.

ಅಷ್ಟೇ ಅಲ್ಲ‌ ಕೊನೆಗಳಿಗೆಯಲ್ಲಿ ವಿಸರ್ಜನೆಗೆ ಆಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಪರ್ಯಾಯ ಹೊಂಡವನ್ನು ನೋಡಬೇಕು ಎಂದು ಅವರು ಮನವಿ ಮಾಡಿಕೊಂಡರು.

ಶಾಸಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ತಕ್ಷಣ ಪಾಲಿಕೆ‌ ಆಯುಕ್ತ ಅಶೋಕ‌ ದುಡಗುಂಟಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಪರ್ಯಾಯ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

0

Leave a Reply

Your email address will not be published. Required fields are marked *

error: Content is protected !!