ಗೃಹ ಮಂತ್ರಿ ಉತ್ತರ ಏನಿರಬಹುದು?

ವಿಧಾನಸಭೆ. ಬೆಳಗಾವಿ.ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸ್ ಕ್ರಮದ ಬಗ್ಗೆ ಇಂದು ಸದನದಲ್ಲಿ ಗೃಹಸಚಿವರು ಉತ್ತರ ನೀಡಲಿದ್ದಾರೆ ಕಳೆದ ದಿನ ಸದನದಲ್ಲಿಯೇ ಬಿಜೆಪಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಹೆಸರು ಉಲ್ಲೇಖಿಸಿ ವಿವರವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ ಪೊಲೀಸರ ಲೋಪವನ್ನು ದಾಖಲೆ ಸಮೇತ ಪ್ರಸ್ತಾಪ‌ಮಾಡಿ ಸಿಪಿಐ ಸೇರಿದಂತೆ ಇನ್ನೂ ಇಬ್ಬರ ಅಮಾನತ್ ಗೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಖುವ…

Read More

ಅಭಯ ಓಕೆ.. ಆಸೀಫ್ ಯಾಕೆ?

ಸದನದಲ್ಲೂ ಅಭಯ ಅಬ್ಬರ, ಟಿಳಕವಾಡಿ ಸಿಪಿಐ ಅಮಾನತ್ ಗೆ ಪಟ್ಟು. ಶಾಸಕ ಆಸೀಫ್ ಶೇಠಗೆ ಮಾತನಾಡಲು ಅವಕಾಶ ನೀಡದ ಸಭಾಧ್ಯಕ್ಷ ಖಾದರ್. ಬೆಳಗಾವಿ. ವಿಧಾನ ಸಭೆಯಲ್ಲಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಪೊಲೀಸರ ವರ್ತನೆ ಬಗ್ಗೆ ಮಾತನಾಡುತ್ತಿದ್ದರು. ಈ‌ ಸಂದರ್ಭದಲ್ಲಿ ಪೊಲೀಸ್ ಕ್ರಮವನ್ನು‌ ಸಮರ್ಥಿಸಿಕೊಳ್ಳಲು ಶಾಸಕ ಆಸೀಫ್ ಶೇಠ ಎದ್ದು ನಿಂತರು. ಆದರೆ ಇದನ್ಬು ಗಮನಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ಅವರು, ನೀವು ಅದರ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ. ಗೃಹ ಮಂತ್ರಿಗಳು ಉತ್ತರ ಕೊಡ್ತಾರೆ.‌ನೀವು ಬೇಡ…

Read More

CPI ಅಮಾನತ್ ಗೆ ಪಟ್ಡು- ಗೃಹ ಸಚಿವರಿಂದ 7 ರಂದು ಉತ್ತರ

ವಿಧಾನಸಭೆ. ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ‌ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಟಿಳಕವಾಡಿ ಸಿಪಿಐ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಶಾಸಕ ಅಭಯ ಪಾಟೀಲ ಒತ್ತಾಯಿಸಿದರು. ಸದನದಲ್ಲಿಂದು ಗಮನ ಸೆಳೆಯುವ ಸೂಚನೆ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಶಾಸಕ ಅಭಯ ಪಾಟೀಲ ಮಾಡಿದರು. ಟಾವರ್ ಅಳವಡಿಸುವ ಸಂಬಂಧ ನಡೆದ ಗಲಾಟೆಯಲ್ಲಿ ಗಾಯಗೊಂಡ ನಗರಸೇವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.‌ಆದರೆ ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಮತ್ತಿಬ್ಬರು ಪೊಲೀಸರು ಆಸ್ಪತ್ರೆಯಲ್ಲಿ ಒತ್ತಾಯಪೂರ್ವಕವಾಗಿ ಡಿಸ್ಚಾರ್ಜ ಸಮರಿ ತೆಗೆದುಕೊಂಡು…

Read More

ಬೆಳಗಾವಿ ಪೊಲೀಸ್ ವಿರುದ್ಧ ಹಕ್ಕುಚ್ಯುತಿ!

ಬೆಳಗಾವಿ.‌ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿ ಮತ್ತು ಮೇಯರ್ ಅವಮಾನದ ಬಗ್ಗೆ ಅಧಿವೇಶನದಲ್ಲಿ ಹಕ್ಕು ಚ್ಯುತಿ ಬರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ಹಕ್ಕುಚ್ಯುತಿ ಮಂಡಿಸುವ ತಯಾರಿ ನಡೆಸಿದ್ದಾರೆಂದು ಗೊತ್ತಾಗಿದೆ. ಬಹುಶಃ ಇವತ್ತೇ ಹಕ್ಕುಚ್ಯುತಿ ಪ್ರಸ್ತಾಪ ವಾಗುವ ಸಾಧ್ಯತೆಗಳಿವೆ.

Read More
error: Content is protected !!