Headlines

ಕನ್ನಡಿಗರಿಗೆ ಜೈಲು ‘ಭಾಗ್ಯ’ ಕರುಣಿಸಿದ ಕಾಂಗ್ರೆಸ್ ಸರ್ಕಾರ..!

ಬೆಂಗಳೂರು. ಕನ್ನಡ ಕನ್ನಡ ಎಂದು ಬೀದಿಗಿಖಿದ ಕನ್ನಡ ಹೋರಾಟಗಾರರನ್ಬು ಜೈಲಿಗಟ್ಟುವ ಕೆಲಸವನ್ನು ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ.

ವಾಣಿಜ್ಯ ಮಳಿಗೆಗಳ ಮುಂದೆ ಕನ್ನಡ ಫಲಕ ಬೇಕು ಎನ್ನುವ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಆಂಗ್ಲ ಫಲಕವನ್ನು ಕಿತ್ತೊಗೆಯುವ ಕೆಲಸವನ್ನು ಕನ್ನಡ ಕಲಿಗಳು ಮಾಡಿದ್ದರು.

ಆ ಹೋರಾಟಕ್ಕೆ ಮುಂದಾಗಿದ್ದ ಕರವೇ ಅಧ್ಯಕ್ಷ ಟಿ.ಎ.‌ನಾರಾಯಣಗೌಡ ಸೇರಿದಂತೆ 6 ಕ್ಕೂ ಹೆಚ್ಚು ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಜೆ ಕಳಿಸಿದ್ದಾರೆ.

ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಹಾಕುವಂತೆ ಒತ್ತಾಯಿಸಿ ಬುಧವಾರ ನಾರಾಯಣ ಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೇವನಹಳ್ಳಿ ಸಾದಹಳ್ಳಿ ಗೇಟ್​ನಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಘಟನಾವಳಿಗಳಿಗೆ ಸಂಬಂಧಿಸಿದಂತೆ ನಾರಾಯಣ ಗೌಡ ಸೇರಿದಂತೆ 6 ಜನರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

subscribe e belagavi.

ಪಿಎಸ್‌ಐ ಲಿತೀನ್ ಎಂಬವರು ದೂರಿನನ್ವಯ ನ್ಯಾಷನಲ್ ಹೈವೇ ಅಥಾರಿಟಿ ಆ್ಯಕ್ಟ್, IPC ಸೆಕ್ಷನ್‌ಗಳಾದ 283, 188, 427, 341, 188, 283ರಡಿ ಎಫ್‌ಐಆರ್ ದಾಖಲಾಗಿದೆ. ನಾರಾಯಣ ಗೌಡ, ಜಗದೀಶ್ , ಸುರೇಶ್ ಬಿ.ಕೆ.ನಾರಾಯಣ ಸ್ವಾಮಿ , ಬಿ.ಟಿ.ಅನಿಲ್ ಕುಮಾರ್ ಹಾಗು ಅಂಬರೀಶ್ ಅವರನ್ನು ಬಂಧಿಸಲಾಗಿದೆ

ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರವೇ ಮುಖಂಡರ ವಿರುದ್ಧ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ, ಪೊಲೀಸ್​ ಕಾನ್ಸ್‌ಟೆಬಲ್ ಮೇಲೆ ಉಗಿದಿರುವುದು, ಹೆದ್ದಾರಿ ತಡೆ ಮತ್ತು ಗಲಾಟೆ ಕುರಿತಂತೆ ಮೂರು ಪ್ರಕರಣಗಳು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!