SP ಅಧಿಕಾರ ಸ್ವೀಕಾರ
ಬೆಳಗಾವಿ.ಬೆಳಗಾವಿ ಜಿಲ್ಲೆಯ ನೂತನ ಎಸ್ಪಿಯಾಗಿ ಭೀಮಾಶಂಕರ ಗುಳೇದ ಅಧಿಕಾರ ಸ್ವೀಕರಿಸಿದರು. ಸಂಜೀವಕುಮಾರ ಪಾಟೀಲರು ಅಧಿಕಾರ ಹಸ್ತಾಂತರಿಸಿದರು.
ಬೆಳಗಾವಿ.ಬೆಳಗಾವಿ ಜಿಲ್ಲೆಯ ನೂತನ ಎಸ್ಪಿಯಾಗಿ ಭೀಮಾಶಂಕರ ಗುಳೇದ ಅಧಿಕಾರ ಸ್ವೀಕರಿಸಿದರು. ಸಂಜೀವಕುಮಾರ ಪಾಟೀಲರು ಅಧಿಕಾರ ಹಸ್ತಾಂತರಿಸಿದರು.
ʻವಡೋದರದ ಭಾರತೀಯ ರೈಲ್ವೆ ಗತಿ ಶಕ್ತಿ ವಿಶ್ವವಿದ್ಯಾಲಯ & ಏರ್ಬಸ್ ಸಂಸ್ಥೆ ಏರೋಸ್ಪೇಸ್ ಬೋಧನೆ ಮತ್ತು ಸಂಶೋಧನೆಗಾಗಿ ಒಡಂಬಡಿಕೆ ಒಪ್ಪಂದಕ್ಕೆಸಹಿʼ • ʻಈ ಒಡಂಬಡಿಕೆ ಒಪ್ಪಂದದಿಂದ ವಿದ್ಯಾರ್ಥಿಗಳ ಉದ್ಯಮಕ್ಕೆ ಸಿದ್ಧರಾಗಲು ನೆರವಾಗಲಿದೆʼ – ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ • 15,000 ವಿದ್ಯಾರ್ಥಿಗಳಿಗೆ ಏರ್ಬಸ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ದೊರಕಲಿವೆ • “ಈ ಗತಿ ಶಕ್ತಿ ವಿಶ್ವವಿದ್ಯಾಲಯು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳ ಮೇಲೆ ಹೆಚ್ಚು ಗಮನಹರಿಸಲಿದೆ. ಅವುಗಳಲ್ಲಿ ರೈಲ್ವೆ, ಹಡಗು, ಬಂದರು, ಹೆದ್ದಾರಿ, ರಸ್ತೆಗಳು, ಜಲಮಾರ್ಗ ಮತ್ತು…
ಬೆಳಗಾವಿ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಾಂಕೇತಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಪಡೆಯಲು ಕಳೆದ 3 ವರ್ಷಗಳಿಂದ 2 ಮೀಸಲಾತಿ ಹೋರಾಟ ಮಾಡುತ್ತಾ ಬರುತ್ತೇದ್ದೇವೆ .ಹಿಂದಿನ ಸರ್ಕಾರ 2 ಮೀಸಲಾತಿ ಬದಲಾಗಿ 2 ಡಿ ಮೀಸಲಾತಿ ನೀಡಿತ್ತು ಆದರೆ ಬಜೆಟ್ ಮುಗಿದು 2 ತಿಂಗಳು ಆದ್ರೂ ಸಿಎಂ…
ಬೆಳಗಾವಿ: ಬೆಳಗಾವಿ ಜಿಲ್ಲೆಯ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಧಾರವಾಡ-ಮೈಸೂರು ಏಕ್ಸಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಗುರುವಾರ ಸೆ-07 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ರೈಲು ಸಂಖ್ಯೆ 17302 ಬೆಳಗಾವಿಯಿಂದ ರಾತ್ರಿ 07.45 ಗಂಟೆಗೆ ಹೊರಟು ಮರುದಿನ ಮುಂಜಾನೆ 07.10 ಕ್ಕೆ ಮೈಸೂರಿಗೆ ತಲುಪಲಿದೆ. ರೈಲು ಸಂಖ್ಯೆ 17301 ಮೈಸೂರಿನಿಂದ ರಾತ್ರಿ 10.30 ಗಂಟೆಗೆ ಹೊರಟು…
ಗೋಕಾಕ : ಕಹಾಮ ಹಾಗೂ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ಬೆಳಗಾವಿಯಲ್ಲಿ ರೈತರ ಮಕ್ಕಳ ಶಿಕ್ಷಣಕ್ಕಾಗಿ ವಸತಿ ನಿಲಯವನ್ನು ನಿರ್ಮಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಕೆ ಮಾಡುವ ರೈತರ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕಹಾಮ ನಿರ್ದೇಶಕ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಜಿಲ್ಲಾ ಹಾಲು ಒಕ್ಕೂಟದಿಂದ ಜರುಗಿದ ವಿವಿಧ ಫಲಾನುಭವಿಗಳಿಗೆ 6.40 ಲಕ್ಷ ರೂ.ಗಳ ಚೆಕ್ಗಳನ್ನು ವಿತರಿಸಿ ಮಾತನಾಡಿದ ಅವರು, ಕೇವಲ ರೈತರ ಮಕ್ಕಳಿಗಾಗಿಯೇ…
ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಈಗ ವಿಘ್ನನಿವಾರಕ ಗಣೇಶನ ಸ್ವಾಗತಕ್ಕೆ ಅದ್ದೂರಿ ಸಿದ್ಧತೆಗಳು ಜೋರಾಗಿ ನಡೆದಿವೆ. ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಝೆಗಳು ಜಂಟಿಯಾಗಿ ಎಲ್ಲ ಸಿದ್ಧತೆಗಳನ್ನು ಮಾಡುತ್ತಿವೆ. ಕಳೆದ ದಿನವಷ್ಟೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟೀಯಾಗಿ ಗಣೇಶ ಸಂಚರಿಸುವ ಮಾರ್ಗವನ್ನು ಪರಿಶೀಲಿಸಿದ್ದರು. ಮತ್ತೊಂದೆಡೆ ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ನಗರಸೇವಕರ ಉಪಸ್ಥಿತಿ ಯಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಇಂದು ಬೆಳಿಗ್ಗೆ ಕೂಡ ಮೇಯರ್ ಶೋಭಾ ಸೋಮನ್ನಾಚೆ,…
ತಾರಕ್ಕೇರಿದ ವರ್ಗಾವಣೆ ವಿಷಯ. ಪತ್ರಗಳ ಮೇಲೆ ಶಿಫಾರಸ್ಸುಗಳು.ಅವರನ್ನು ಬಿಟ್ಟು ಇವರಿಗೆ ಕೊಡಿ . ಇಬ್ಬರ ಜಗಳದಲ್ಲಿ ಮೂರನೇಯವರ ಪ್ರವೇಶ ಪಾಲಿಕೆಯಲ್ಲಿ ವರ್ಗಾವಣೆ ಕಥೆನೇ ರಣರೋಚಕ. ಇಲ್ಲಿ ವರ್ಗಾವಣೆಗೂ “ತೆರಿಗೆ” ಬೆಳಗಾವಿ. ಸರ್ಕಾರ ಬದಲಾದಂತೆಲ್ಲಾ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಸಹಜವಾಗಿ ನಡೆಯುತ್ತದೆ. ಆದರೆ ಜಿಲ್ಲೆಯಲ್ಲಿ ಒಬ್ಬರೇ ಸಚಿವರಿದ್ದರೆ ಅಧಿಕಾರಿಗಳ ವರ್ಗಾವಣೆ ಸುದ್ದಿನೇ ಅಲ್ಲ. ಆದರೆ ಇಬ್ವರು ಪ್ರಭಾವಿ ಸಚಿವರಿದ್ದರೆ ಸಹಜವಾಗಿ ‘ಭಿನ್ನ’ ಅಭಿಪ್ರಾಯ ಬರುವುದು ಸಹಜ ಮತ್ತು ಸ್ವಾಭಾವಿಕ. ಆದರೆ ವರ್ಗಾವಣೆಯಲ್ಲೂ ಸಿಕ್ಕಾಪಟ್ಟೆ ತೆರಿಗೆ ವಸೂಲಿ ಕೆಲಸ ಈಗ…
ಬೆಳಗಾವಿ.ನೈರುತ್ಯ ರೇಲ್ವೆ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ಪ್ರಸಾದ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ಮಹಾನಗರ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಅವರು ಕಳೆದ ಹಲವು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿ ಕೊಂಡಿದ್ದಾರೆ. 2025 ಜನೇವರಿ 1 ರವೆರೆಗೆ ಚಾಲ್ತಿಯಲ್ಲಿರುತ್ತದೆ.
ಬೆಳಗಾವಿ. ಗಡಿನಾಡ ಬೆಳಗಾವಿ ಗಣೇಶೋತ್ಸವ ಸಂದರರ್ಭದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಪಾಲಿಕೆಯ ಮೇಯರ್ ಶೋಭಾ ಸೋಮನ್ನಾಚೆ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆಯಲ್ಲಿ ಕಳೆದ ದಿನ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಗಣೇಶ ಉತ್ಸವ ಸಂದರ್ಭದಲ್ಲಿ ಪಾಲಿಕೆಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಸ್ವಚ್ಚತೆ ಸೇರಿದಂತೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ಅಡ್ಡಲಾಗಿ ಬಂದಿರುವ. ಟೊಂಗೆ, ವಾಯರ್ ಗಳನ್ನು ತೆರವು ಮಾಡಬೇಕು ಎಂದರು. ಅಷ್ಟೇ ಅಲ್ಲ ರಸ್ತೆ ಮಧ್ಯದಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ವುವ ಕೆಲಸವನ್ಬು ತ್ವರಿತವಾಗಿ…