ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಆರೋಪ ಮತ್ತು ಪ್ರತ್ಯಾರೋಪಗಳೇ ಸದ್ದು ಮಾಡುತ್ತಿವೆ.
ಕಳೆದ ದಿನವಷ್ಟೇ ಸಫಾಯಿ ಕರ್ಮಚಾರಿ ಸಂಘಟನೆಯವರು ಕೆಲವರ ವಿರುದ್ಧ ಗಂಭೀರ ಆರೋಪ ಹೊರೆಸಿ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಅದರ ಬಗ್ಗೆ ಪಾಲಿಕೆ ಆಯುಕ್ತರು ಯಾವ ರೀತಿಯ ತನಿಖೆ ಮಾಡುತ್ತಾರೆ ಎನ್ಬುವುದು ಗೊತ್ತಾಗಿಲ್ಲ.
ಇದೆಲ್ಲ ಒಂದು ಕಡೆ ನಡೆಯುತ್ತಿರುವಾಗಲೇ ಶುಕ್ರವಾರ ಕೆಲವರು ಪಾಲಿಕೆಯ ಬಚ್ಚಲಪುರಿ ಎಂಬುವರ ವಿರುದ್ಧ ವಡ್ಡರ ಭೋವಿ ಯುವಕ ಸಂಘ ಆಯುಕ್ತರಿಗೆ, ಜಿಲ್ಲಾಧಿಕಾರಿ ಮತ್ತು, ಲೋಕಾಯುಕ್ತರಿಗೆ, ದೂರು ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಗಳಿಗೂ ಸಹ ಪತ್ರವನ್ನು ಕಳಿಸಿದ್ದಾಗಿ ತಿಳಿಸಲಾಗಿದೆ.
ಅಚ್ಚರಿಯ ಸಂಗತಿ ಎಂದರೆ, ಕಳೆದ ದಿನ e belagavi.com ಈ ಬಗ್ಗೆ ಸಫಾಯಿ ಕರ್ಮಚಾರಿ ಸಂಘಟನೆಯವರು ನೀಡಿದ ಮನವಿ ಪತ್ರವನ್ನು ಉಕ್ಲೇಖಿಸಿ ವರದಿ ಪ್ರಕಟಿಸಿತ್ತು. ಹೀಗಾಗಿ ವರದಿ ಪ್ರಕಟಿಸಿದ ಇ ಬೆಳಗಾವಿ ವಿರುದ್ಧವೂ ಕ್ರಮ ವಾಗಬೇಕು ಎಂದು ಪ್ರತಿಭಟನೆಯಲ್ಲಿದ್ದ ಕೆಲವರು ಆಗ್ರಹಿಸಿದ್ದಾರೆ.
ಇ ಬೆಳಗಾವಿ ಸ್ಪಷ್ಟನೆ.
ಯಾವುದೇ ವರದಿಯನ್ನು ಪ್ರಕಟಿಸಿದರೆ ಯಾರ ಮುಲಾಜು ಇಲ್ಲದೆ ಪ್ರಕಟಿಸುವ ಕೆಲಸವನ್ನು ಇ ಬೆಳಗಾವಿ ಮಾಡುತ್ತ ಬಂದಿದೆ. ಇದೇ ಕಾರಣದಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಇ ಬೆಳಗಾವಿ ಅತೀ ಹೆಚ್ವಿನ ವೀಕ್ಷಕರನ್ನು ಹೊಂದಿದೆ ಎಂದು ತಿಳಿಸಲು ಹೆಮ್ನೆ ಆಗುತ್ತಿದೆ.

ಇ ಬೆಳಗಾವಿ ಯಾವಾಗಲೂ ಸುದ್ದಿಗೆ ಆಧ್ಯತೆ ಕೊಡುತ್ತ ಬಂದಿದೆ ಅದರ ಹಿಂದೆ ಯಾರಿದ್ದಾರೆ? ಎನು ಮಾಡ್ತಿದ್ದಾರೆ ಎನ್ನುವುದರ ಬಗ್ಗೆ ಚಿಂತೆ ಮಾಡುವುದಿಲ್ಲ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ಅನಾಮಧೇಯ ಕರೆ ಮಾಡಿ ಬೆದರಿಸುವ ಪ್ರಯತ್ನ ಮಾಡಿದರು. ಆದರೆ ಇ ಬೆಳಗಾವಿ ಅಂತಹ ಕರೆಗಳ ಆಡಿಯೊ ಸೇರಿದಂತೆ ಸಮಗ್ರ ದಾಖಲೆ ಇಟ್ಟುಕೊಂಡಿದೆ. ಮೇಲಾಗಿ ಅಂತಹ ಬೆದರಿಕೆಗಳಿಗೆ ಬಗ್ಗುವ ಪ್ರಮೇಯವೇ ಬರುವುದಿಲ್ಲ. ಆದರೆ ಹೋರಾಟಗಾರರ ಹೋರಾಟಕ್ಕೆ ಗೌರವ ಕೊಡುವ ಕೆಲಸವನ್ನು ಇ ಬೆಳಗಾವಿ ಮಾಡುತ್ತ ಬಂದಿದೆ. ಮಾಡುತ್ತಲೇ ಇರುತ್ತದೆ.
ಬಚ್ಚಲಪುರಿ ಅವರು ಪಾಲಿಕೆಯಲ್ಲಿ ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ.ಆದ್ದರಿಂದ ಅವರ ವಿರುದ್ಧ ಕ್ರಮತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಮನವಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.