ಬೆಳಗಾವಿ. ಮಂಡ್ಯ ಜಿಲ್ಲೆಯ ಕೆರಗೋಡುವಿನಲ್ಲಿ ಉಲ್ಭಣಿಸಿದ ಧ್ವಜ ವಿವಾದ ಗಡಿನಾಡ ಬೆಳಗಾವಿ ಜಿಲ್ಲೆಯ ಎಂಕೆ ಹುಬ್ಬಳ್ಳಿ ಯಲ್ಲಿ ಹುಟ್ಟಿಕೊಂಡಿದೆ.

ಎಂ.ಕೆ.ಹುಬ್ಬಳ್ಳಿ ಪಟ್ಟಣದ ಸಂಬಣ್ಣವರ ಓಣಿಯಲ್ಲಿರುವ ಹಳೆಯ ಹನುಮಾನ ದೇವಸ್ಥಾನ ಎದುರಿಗಿರುವ ಧ್ವಜಕಂಬದಲ್ಲಿ ಹಾರಾಡುತ್ತಿದ್ದ ಧ್ವಜವನ್ನು ಪೊಲೀಸರು ತೆಗೆದು ಹಾಕಿದ್ದರು ಎನ್ನಲಾಗಿದೆ.
ಕಳೆದ ೧೫ ದಿನಗಳಿಂದ ಈ ವಿವಾದ ನಡೆದೇ ಇತ್ತು. ಅದು ಒಂದು ರೀತಿಯಲ್ಲಿಬೂದಿ ಮುಚ್ವಿದ ಕೆಂಡವಾಗಿತ್ತು

ಹೀಗಾಗಿ ಅದೇ ಧ್ವಜಕಂಬದಲ್ಲಿ ಮರು ಧ್ವಜ ಸ್ಥಾಪನೆಮಾಡುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಸಾಗಿ ಧ್ವಜ ಹಚ್ಚುವ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.
ಈ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳದಲ್ಲಿ ಬಿಗಿ ಪೊಲೀಸ ಬಂದೋಬಸ್ತಿ ಮಾಡಲಾಗಿದೆ
0