ಬೆಳಗಾವಿ: “
ವಿದ್ಯಾರ್ಥಿ ಜೀವನ ಬಹಳ ಪ್ರಮುಖವಾದ ಘಟವಾಗಿದೆ. ಈ ಹಂತದಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಜೀವನವನ್ನು ಇತರರಿಗೆ ಮಾದರಿಯಾಗುವಂತೆ ರೂಪಿಸಿಕೊಳ್ಳುವಲ್ಲಿ ಬದ್ಧರಾಗಬೇಕು ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.

ಇಲ್ಲಿನ ಬಿಮ್ಸ ಕಾಲೇಜನಲ್ಲಿ ಆಯೋಜಿಸಲಾದ ಗುರುವಾರ ಬೆಳಗಾವಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಹಾಗೂ ಬಿಳ್ಕೋಡಿಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾಜದ ಅಭಿವೃದ್ಧಿಗೆ ಶಿಕ್ಷಣದ ಪಾತ್ರ ಬಹುಮುಖ್ಯವಾಗಿದೆ. ಎಲ್ಲ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಕಲಿತು ಹೆಚ್ಚಿನ ಸಾಧನೆಗಳನ್ನು ಮಾಡಬೇಕೆಂದು ಎಂದು ಹೇಳಿದರು.
ಈ ವೇಳೆ ಬಿಮ್ಸ್ ಕಾಲೇಜ ಅರೆವೈದ್ಯಕೀಯ ವಿದ್ಯಾರ್ಥಿಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪದವಿ ಪ್ರದಾನ ಮಾಡಿದರು.
ಈ ವೇಳೆ ಬಿಮ್ಸ ಬೆಳಗಾವಿಯ ನಿರ್ದೇಶಕರಾದ ಡಾ ಅಶೋಕ್ ಕುಮಾರ್ ಶೆಟ್ಟಿ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ ಈರಣ್ಣ ಪಲ್ಲೆದ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ರಾದ ವಿಠ್ಠಲ್ ಶಿಂಧೆ ಮತ್ತು ಅರೆವೈದ್ಯಕೀಯ ಸಂಯೋಜಕರಾದ ಡಾ ಎಂ.ಎಸ್.ಶೇಖನ್ನವರು , ವಿಜಯಲಕ್ಷ್ಮಿದೊಡಮನಿ ಉಪಸ್ಥಿತರಿದ್ದರು.