Headlines

ಕೋರೆ- ಶೆಟ್ಟರ್ ಭೆಟ್ಟಿ ಮಾತು ಕತೆ ‘ನಿಗೂಢ’

ಬೆಳಗಾವಿ.

ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿದಿದ್ದರೂ ಕೂಡ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.‌ಪ್ರಭಾಕರ ಕೋರೆ ಯಾಕೋ ಏನೋ ಅಂತರ ಕಾಯ್ದುಕೊಂಡಿದ್ದರು.

ಶೆಟ್ಟರ್ ಅವರ ಜೊತೆ ಪ್ರಚಾರಕ್ಕೆ ಹೋಗುವುದಿರಲಿ ಎಲ್ಲಿಯೂ ಅವರ ಸುತ್ತಮುತ್ತ ಸಹ ಕಾಣಿಸಿಕೊಳ್ಳಲಿಲ್ಲ. ಇದು ಸಹಜವಾಗಿ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿತ್ತು.

ಶೆಟ್ಟರ್ ಅವರು ಬೆಳಗಾವಿಯಲ್ಲಿ ಪ್ರಥಮ‌ಸುದ್ದಿಗೋಷ್ಠಿ ನಡೆಸುವುದಕ್ಕೂ ಮುನ್ನ ಬಿಹೆಪಿ ಟಿಕೆಟ್ ಆಕಾಂಕ್ಷಿಯಲ್ಲಿ ಒಬ್ಬರಾಗಿದ್ದ ಮಹಾಂತೇಶ ಕವಟಗಿಮಠರ‌ ಮನೆಗೆ ಹೋಗಿ ಮಾತುಕತೆ ನಡೆಸಿದ್ದರು. ಹೀಗಾಗಿ ಕವಟಗಿಮಠರು ಪತ್ರಿಕಾಗೋಷ್ಠಿಗೆ ತಡವಾಗಿ ಆಗಮಿಸಿದ್ದರು. ಆದರೆ ಡಾ. ಕೋರೆ ಮಾತ್ರ ಬರಲೇ ಇಲ್ಲ.

ಹೀಗಾಗಿ ಇಂದು ಬೆಳಗಿನ‌ ಜಾವ ಚಾಯ್ ಪೇ ಚರ್ಚಾ ಎನ್ನುವಂತೆ ಶೆಟ್ಟರ್ ಅವರು ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ ಅವರೊಂದಿಗೆ ಬೆಳಗಾವಿಯ‌ ಕ್ಯಾಂಪ್ ಪ್ರದೇಶದಲ್ಲಿರುವ ಕೋರೆ ಅವರ‌‌ ನಿವಾಸಕ್ಕೆ ದೌಡಾಯಿಸಿದ್ದರು

ಈ ಸಂದರ್ಭದಲ್ಲಿ ಏನು ಮಾತುಕತೆ ಆಯಿತು ಎನ್ನುವುದು ಗೊತ್ತಾಗಿಲ್ಲ. ಆದರೆ ಕೋರೆ ಅವರು‌ ಸ್ವಲ್ಪ‌ ಮಟ್ಟಿಗೆ ಗಂಭೀರವಾಗಿಯೇ ಇದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!