‘
ಬೆಳಗಾವಿ.
ನಿರೀಕ್ಷಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಬಿಜೆಪಿ ಹಿಡಿತದಲ್ಲಿರುವ ವಿಧಾನಸಭೆ ಕ್ಷೇತ್ರಗಳನ್ನೇ ಟಾಗರ್ೆಟ್ ಮಾಡಿಕೊಂಡು ಮತಬೇಟೆ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಗೋಕಾಕ ಮತ್ತು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿಯೇ ತಮ್ಮ ಪುತ್ರ ಮೃನಾಲ್ ಪರ ಮತಯಾಚನೆ ನಡೆಸಿದ್ದಾರೆ.
ಆದರೆ ಹೆಬ್ಬಾಳಕರ ಅವರ ಈ ಹೈಸ್ಪೀಡ್ ಓಟಕ್ಕೆ ಬ್ರೆಕ್ ಹಾಕಲು ಬಿಜೆಪಿಯ ಜಾರಕಿಹೊಳಿ ಸಹೋದರರು ಇಂದು ಪ್ರಯತ್ನ ನಡೆಸಿದರು, ಸಚಿವೆ ಹೆಬ್ಬಾಳಕರ ಅವರು ಎಷ್ಟೇ ಎಂತಹುದೇ ರಾಜಕಾರಣ ಮಾಡಿದರೂ ಕೂಡ ಈ ಎರಡೂ ಕ್ಷೇತ್ರದಿಂದ ಅತ್ಯಧಿಕ ಮತಗಳು ಬಿಜೆಪಿಗೆ ಬರುವಂತೆ ಮಾಡುವ ಎಲ್ಲ ರೀತಿಯ ಕಸರತ್ತು ನಡೆಸಿದರು,

ಈ ಹಿನ್ನೆಲೆಯಲ್ಲಿ ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಮತ್ತು ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಿದರು, ಈ ಸಮಾವೇಶದಲ್ಲಿ ದೊಡ್ಡ ಮಟ್ಟದ ಜನರನ್ನು ಸೇರಿಸುವ ಮೂಲಕ ತಮ್ಮ ಹಿಡಿತ ಎಷ್ಟಿದೆ ಎನ್ನುವ ಸಂದೇಶವನ್ನು ಈ ಮೂಲಕ ರವಾನಿಸಿದರು,
ಗಮನಿಸಬೇಕಾದ ಸಂಗತಿ ಎಂದರೆ, ಈ ಬಾರಿ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರು ಎಲ್ಲಿಯೂ ಹೆಬ್ಬಾಳಕರ ಅವರನ್ನೇ ಗುರಿಯಾಗಿಟ್ಟುಕೊಂಡು ಎಲ್ಲಿಯೂ ಹರಿತವಾದ ಮಾತುಗಳನ್ನ ಆಡಲಿಲ್ಲ.

ಪ್ರತಿ ಬಾರಿ ಅಂತಹ ಟೀಕೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಲಾಭ ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿತ್ತು, ಈ ಬಾರಿ ಅದಕ್ಕೆ ರಮೇಶ ಜಾರಕಿಹೊಳಿ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎನ್ನುವುದು ವಿಶೇಷ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರೂ ಸಹ ಸಹೋದರ ರಮೇಶಗೆ ಈ ನಿಟ್ಟಿನಲ್ಲಿ ಸೂಚನೆ ಕೂಡ ಕೊಟ್ಟಿದ್ದಾರೆಂದು ಗೊತ್ತಾಗಿದೆ. ಹೀಗಾಗಿ ರಮೇಶ ಜಾರಕಿಹೊಳಿ ಯಾವುದೇ ಮಾಧ್ಯಮದವರ ಕೈಗೆ ಸಿಗುತ್ತಿಲ್ಲ. ತಮ್ಮ ಕ್ಷೇತ್ರ ಸೇರಿದಂತೆ ತಮ್ಮ ಹಿಡಿತವಿರುವ ಕ್ಷೇತ್ರಗಳಲ್ಲಿ ಸಂಚಾರ ನಡೆಸಿದ್ದು ಗೊತ್ತಾಗುತ್ತಿದೆ,
ಜಿದ್ದಿಗೆ ಬಿದ್ದ ಹೆಬ್ಬಾಳಕರ…!
ಇದೆಲ್ಲದರ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೂ ಸಹ ಇವೆರಡೂ ಕ್ಷೇತ್ರದಿಂದ ಹೆಚ್ಚಿನ ಮತಗಳನ್ನು ಪಡೆದುಕೊಂಡೇ ತೀರಬೇಕು ಎನ್ನುವ ಹಠಕ್ಕೆ ಬಿದ್ದಂತೆ ಕಾಣುತ್ತಿದೆ,
ಸಧ್ಯ ಅವರು ಈ ಕ್ಷೇತ್ರದಲ್ಲಿ ನಡೆಸುತ್ತಿರುವ ಸಂಚಾರ ಇದಕ್ಕೆ ಸಾಕ್ಷಿ, ಮೂಲಗಳ ಪ್ರಕಾರ ಈ ತಾಲೂಕಿನಲ್ಲಿ ಸಚಿವೆಹೆಬ್ಬಾಳಕರ ಅವರು ಪಂಚಮಸಾಲಿ ಟ್ರಂಪ ಕಾರ್ಡನ್ನು ಉಪಯೋಗಿಸುತ್ತಿದ್ದಾರೆಂದು ಹೇಳಲಾಗುತ್ತಿದೆ, ಜಾರಕಿಹೊಳಿ ಅವರನ್ನು ಯಾವಾಗಲೂ ವಿರೋಧ ಮಾಡುತ್ತಲೇ ಬಂದಿರುವವವರನ್ನೇ ಸೆಳೆದುಕೊಂಡು ಮತಬೇಟೆ ನಡೆಸಿದ್ದಾರೆ, ಆದರೆ ಇದೆಲ್ಲ ಎಷ್ಟರ ಮಟ್ಟಿಗೆ ಸಾಧ್ಯ ಎನ್ನುವುದನ್ನು ಕಾಲವೇ ಹೇಳಬೇಕು,