ಕೆಲವರಿಗೆ ಚುನಾವಣೆ ಬಂದಾಗ ಸ್ವಾಭಿಮಾನ ನೆನಪಾಗುತ್ತದೆ..!

ಹೆಬ್ಬಾಳಕರಗೆ ಟಾಂಗ್ ಕೊಟ್ಟ ಬಾಲಚಂದ್ರ
ಕೆಲವರಿಗೆ ಚುನಾವಣೆ ಬಂದಾಗ ಸ್ವಾಭಿಮಾನ ನೆನಪಾಗುತ್ತದೆ..!

ಬೆಳಗಾವಿ.
ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುವ ಆರೋಪದಲ್ಲಿ ಅರ್ಥವೇ ಇಲ್ಲ. ಅದಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ, ಹೀಗಾಗಿ ಅದು ಈಗ ಮುಗಿದ ಅಧ್ಯಾಯ ಎಂದು ಅರಭಾವಿ ಶಾಸಕರೂ ಆಗಿರುವ ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು,
ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಬೆಳಗಾವಿಗರು ಟಿಕೆಟ್ ಕೇಳಿದ್ದರಿಂದ ಹೊಗಿನವರು ಎನ್ನುವ ವಿಚಾರ ಪ್ರಸ್ತಾಪ ಆಗಿತ್ತು. ಬಾಡಿಗೆ ಮನೆ ಮಾಡಿ ಎಷ್ಟೋ ಜನ ಇರುತ್ತಾರೆ. ಕಾಂಗ್ರೆಸ್ ಆರೋಪ ಮಾಡಬೇಕು ಅಂತ ಏನಾದರು ಮಾಡುತ್ತಿದೆ, ಅದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು,


ಚುನಾವಣೆ ಬಂದಾಗ ಸ್ವಾಭಿಮಾನ ಮತ್ತೊಂದು ನೆನಪಾಗುತ್ತವೆ. ಯಾರೇ ಚುನಾವಣೆಗೆ ನಿಂತರೂ ಇದನ್ನು ಹೇಳುತ್ತಾರೆ. ಅದು ತಪ್ಪು ಅಂತಾ ಹೇಳೋಕೂ ಆಗೋದಿಲ್ಲ. ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುವುದನ್ನು ಜನ ಮರೆತಿದ್ದಾರೆ. ಚುನಾವಣೆ ಅಷ್ಟೋತ್ತಿಗೆ ಪೂತರ್ಿ ಮರೆತು, ಬೆಳಗಾವಿ ಜನ ಅವರನ್ನು ಸ್ವೀಕರಿಸುತ್ತಾರೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ ವೇಳೆ ಸೇರಿದ್ದ ಜನಸ್ತೋಮವನ್ನು ಗಮನಿಸಿದರೆ ಮೋದಿ ಅಲೆ ಮೋದಿ ಅಲೆ ಯಾವ ಪ್ರಮಾಣದಲ್ಲಿದೆ ಎನ್ನುವುದು ಗೊತ್ತಾಗುತ್ತದೆ ಎಂದರು,

ಎಲ್ಲಾ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ. ಹಾಗಾಗಿ, ಹೆಚ್ಚಿನ ಮತಗಳ ಅಂತರದಿಂದ ಶೆಟ್ಟರ್ ಗೆಲ್ಲುತ್ತಾರೆ ಎಂದು ಬಾಲಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Oplus_0


ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಅಸ್ತ್ರ ಪ್ರಯೋಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಾಲಚಂದ್ರ ಜಾರಕಿಹೊಳಿ, ಚುನಾವಣೆ ಬಂದಾಗ ಇದೆಲ್ಲ ಸ್ವಾಭಾವಿಕ.. ಜನ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೋದಿ ಫೆಸ್ ವ್ಯಾಲ್ಯೂ ಜಾಸ್ತಿ ಇದೆ. ಇದೆಲ್ಲ ವಕರ್್ ಔಟ್ ಆಗಲ್ಲ ಎಂದು ಸಮರ್ಥಿಸಿಕೊಂಡರು.
ಶಾಸಕ ಯತ್ನಾಳ್ ಸಿಎಂ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಅವರು, ಯತ್ನಾಳ ಸಿಎಂ ಆದರೆ ಒಳ್ಳೆಯದು. ಉತ್ತರ ಕನರ್ಾಟಕದವರು ಸಿಎಂ ಆದರೆ ಒಳ್ಳೆಯದು, ನಾನು ಖುಷಿ ಪಡುತ್ತೇನೆ ಮತ್ತು ಸ್ವಾಗತಿಸುತ್ತೇನೆ ಎಂದರು.
ಸತೀಶ ಜಾರಕಿಹೊಳಿ ವಿರುದ್ಧ ಯತ್ನಾಳ ಟೀಕೆಗೆ ಅದಕ್ಕೆ ಅವರೇ ಉತ್ತರ ಕೊಡುತ್ತಾರೆ ಎಂದು ಅವರು ತಿಳಿಸಿದರು,
ದೇಶದಲ್ಲಿ ಎನ್ಡಿಎ ಅತಿಹೆಚ್ಚು ಸ್ಥಾನ ಗೆಲ್ಲಲ್ಲಿದೆ. ದಿ. ಸುರೇಶ ಅಂಗಡಿ ಮಂತ್ರಿ ಆಗಿದ್ದರಿಂದ ಎಷ್ಟೊಂದು ಕೆಲಸಗಳು ಆಗಿವೆ. ಜಗದೀಶ್ ಶೆಟ್ಟರ್ ಗೆದ್ದು ಕೇಂದ್ರ ಮಂತ್ರಿ ಆದರೆ ಒಳ್ಳೆಯದು. ಅದರಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಚುನಾವಣೆಯನ್ನು ಸಿರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಹಾಗಂತಾ ಜಿದ್ದಿಗೆ ಬಿದ್ದು ಯಾರದೋ ಜೊತೆ ಕುಸ್ತಿ ಹಿಡಿದು ಮಾಡುತ್ತಿಲ್ಲ. ನಮ್ಮ ಚುನಾವಣೆ ಹೇಗೆ ಆರಾಮವಾಗಿ, ಶಾಂತಿ, ಸಂಯಮದಿಂದ ಮಾಡುತ್ತೇವೋ, ಅದೇ ರೀತಿ ಮತ ನೀಡುವಂತೆ ಜನರ ಬಳಿ ಕೇಳಿಕೊಳ್ಳುತ್ತಿದ್ದೇವೆೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು,.
ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ. ಅಲ್ಲಿ ಅವರು ಓಡಾಡುತ್ತಿದ್ದಾರೆ. ಚಿಕ್ಕೋಡಿಗೆ ಪ್ರಚಾರಕ್ಕೆ ನಮ್ಮನ್ನು ಕರೆದಿಲ್ಲ. ನಾವು ಬೆಳಗಾವಿ ಲೋಕಸಭೆಯಲ್ಲಿ ಬಹಳ ಬ್ಯುಜಿ ಇದ್ದೇವೆ. ಇಲ್ಲಿ ಕೆಲಸ ಬಹಳ ಇದೆ. ಅಲ್ಲಿ ಅವರು ಪ್ರಚಾರ ಮಾಡುತ್ತಿದ್ದಾರೆ ಎಂದರು,
ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸಕರ್ಾರ ಪತನ ಗೋವಾ ಸಿಎಂ ಹೇಳಿಕೆಗೆ ನಾವು ಈಗ ಅದನ್ನು ಹೇಳಲು ಆಗೋದಿಲ್ಲ. ಅವರು ಮುಖ್ಯಮಂತ್ರಿ ಇದ್ದವರು, ಅವರಿಗೆ ಗೊತ್ತಿದ್ದಷ್ಟು ನಮಗೆ ಗೊತ್ತಿರುವುದಿಲ್ಲ. ಸಮೀಕ್ಷೆಯಲ್ಲಿ ಬಂದಂತೆ 25 ಸ್ಥಾನ ಗೆದ್ದರೆ, ಆಗ ಕಾಂಗ್ರೆಸ್ ಶಾಸಕರಿಗೆ ಮುಂದೆ ಭವಿಷ್ಯ ಹೇಗೆ ಎಂಬ ವಿಚಾರ ಬರಬಹುದು ಎಂದರು.
ಗ್ಯಾರಂಟಿ ವಕರ್ೌಟ್ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ, ಯಾವುದೇ ಒಂದು ಸಕರ್ಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ವಿರೋಧಿ ಅಲೆ ಸೃಷ್ಟಿಯಾಗುತ್ತದೆ. ಆದರೆ, ಈ ಸಕರ್ಾರಕ್ಕೆ ಒಂದೇ ವರ್ಷದಲ್ಲಿ ಇಷ್ಟೊಂದು ವಿರೋಧಿ ಅಲೆ ಎದ್ದಿದೆ. ಹಾಗಾಗಿ, ಗ್ಯಾರಂಟಿ ವಕರ್ೌಟ್ ಆಗೋದಿಲ್ಲ. ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದು, ರಾಜ್ಯದ ಒಳ್ಳೆಯ ಭವಿಷ್ಯವಿದೆ ಎಂದರು

0

Leave a Reply

Your email address will not be published. Required fields are marked *

error: Content is protected !!