Headlines

ಕುಡಿದ ಮತ್ತಿನಲ್ಲಿ ವಿದ್ಯುತ್ ಕಂಬವೇರಿದ ಭೂಪ..!

ಹೆಸ್ಕಾಂ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ವಿದ್ಯುತ್ ಕಂಬವೇರಿದ್ದ ವ್ಯಕ್ತಿ ರಕ್ಷಣೆ

ಬೆಳಗಾವಿ,

: ಹೆಸ್ಕಾಂ ಸಿಬ್ಬಂದಿ ಸಮಯ ಪ್ರಜ್ಞೆ ಮರೆದು, ವಿದ್ಯುತ್ ಕಂಬ ಏರಿದ್ದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಶುಕ್ರವಾರ ಕಾಪಾಡಿದ್ದಾರೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ, ನಗರದ ತಿಲಕ್ ಚೌಕ್‌ನ ಹತ್ತಿರದ ಜೋಡಿ ವಿದ್ಯುತ್ ಕಂಬಗಳ ಮೇಲೆ ಕುಳಿತಿದ್ದ.

ದೈನಂದಿನ ಕರ್ತವ್ಯ ನಿರ್ವಹಣೆಗೆ ಆಗಮಿಸಿದ್ದ ಹೆಸ್ಕಾಂ ಸಿಬ್ಬಂದಿ (ಲೈನ್ ಮ್ಯಾನ್) ಇದನ್ನು ಗಮನಿಸಿ ಕೂಡಲೇ ಎಚ್ಚೆತ್ತುಕೊಂಡು, ಕಚೇರಿಗೆ ಕರೆ ಮಾಡಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ, ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಸಲು ಅನುವು ಮಾಡಿಕೊಟ್ಟರು.

ಹೆಸ್ಕಾಂ ಸಿಬ್ಬಂದಿಯ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!