Headlines

ಸತೀಶ್ ಗೆ‌ ಮಹತ್ವದ ಜವಾಬ್ದಾರಿ ಕೊಟ್ಟ ಸಿಎಂ.

ಬೆಳಗಾವಿ. ರಾಜ್ಯದ ನಿಗಮ ಮಂಡಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ‌ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯವರು ೧೧ ಜನರ ಕಮಿಟಿ ನೇಮಕ ಮಾಡಿದ್ದಾರೆ..

ಈ ಕಮಿಟಿ ಯಲ್ಲಿ ಬೆಳಗಾವಿ ಜಿಲ್ಲೆಯಿಂದ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಸ್ಥಾನ ಗಿಟ್ಡಿಸಿಕೊಂಡಿದ್ದಾರೆ.

ಗೃಹ ಸಚಿವ ಡಾ.‌ಜಿ.ಪರಮೇಶ್ವರ ಕಮಿಟಿ ಅಧ್ಯಕ್ಷರಾಗಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ, ಸತೀಶ್ ಜಾರಕಿಹೊಳಿ, ಸಂತೋಷ ಲಾಡ್, ಶರಣಪ್ರಕಾಶ್ ಪಾಟೀಲ, ಜಿ.ಸಿ‌ ಚಂದ್ರಶೇಖರ, ಡಾ. ರೂಪಕಲಾ ಎಂ. ರಿಜ್ವಾನ್ ಅರ್ಷದ, ವಿ.ಆರ್. ಸುದರ್ಶನ್ ಮತ್ತು ಕೆ.‌ಹರೀಶ ಕುಮಾರ ಈ ಪಟ್ಟಿಯಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!