ರಸ್ತೆ ಅಪಘಾತ-ಆಟೋ ಚಾಲಕ ಸಾವು

ಬೆಳಗಾವಿ: ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡದಲ್ಲಿ ಹಿರೇಬಾಗೇವಾಡಿ ಗ್ರಾಮದ ಆಟೋ ಚಾಲಕ ಅಮಿನ್ ಯರಗಟ್ಟಿ (45) ಮೃತಪಟ್ಟಿದ್ದಾನೆತರಕಾರಿ ತುಂಬಿಕೊಂಡು ಬೆಳಗಾವಿ ನಗರಕ್ಕೆ ಬರುತ್ತಿದ್ದ ಆಟೋಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಾಗ ಈ ದುರ್ಘಟನೆ ಸಂಭವಿಸಿದೆ. ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ., ಸ್ಥಳಕ್ಕೆ ಪೊಲೀಸರು ಭೆಟ್ಟಿ ನೀಡಿದ್ದಾರೆ.,

Read More

ಬೆಂಕಿಯಲ್ಲೂ ಕಾಗೆ ಹಾರಿಸಿದವರು…!

ಬೆಳಗಾವಿ ತಾಲೂಕಿನ ನಾವಗೆ ಬಳಿಯ ಖಾಸಗಿ ಕಾರ್ಖಾನೆ ಬೆಂಕಿ ದುರಂತ. ಬೆಂಕಿಯ ಸತ್ಯವನ್ನು ಮರೆಮಾಚಿದರೇ? ಮೃತ ಕಾರ್ಮಿಕನ ಕಟುಂಬಕ್ಕೆ ಸಾಂತ್ವನ ಕೂಡ ಹೇಳಿಲ್ಲವಂತೆ. ಆ ಬೆಂಕಿ ಹತ್ತಿದ್ದು ಹೇಗೆ? ಶಾರ್ಟ ಸರ್ಕ್ಯೂಟ್ ಕಥೆ ಕಟ್ಟಿದರಾ? ಆ ಡಬ್ಬಿಯಲ್ಲಿ ಕೆಮಿಕಲ್ ಬಿದ್ದಿದ್ದು ಇದಕ್ಕೆ ಕಾರಣನಾ? ಮಾಲೀಕನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪಿಟ್ಟಿಕೇಸ್. ಗೆಸ್ಟ್ ಹೌಸದಲ್ಲಿ ಇರುವ ಮಾಲೀಕ. ಬೆಳಗಾವಿ.ಹಲವಾರು ಬಡ ಕುಟುಂಬಗಳನ್ನು ಬೀದಿಗೆ ತಳ್ಳಿರುವ ತಾಲೂಕಿನ ನಾವಗೆ ಬಳಿಯ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸತ್ಯವನ್ನು ಮರೆಮಾಚಲಾಗುತ್ತಿದೆಯೇ?ಇಲ್ಲಿ ಘಟನೆಗೆ…

Read More

ನಾಗದೇವತೆಗೆ ಹಾಲೆರೆದ ಬಾಲಚಂದ್ರ ಜಾರಕಿಹೊಳಿ

ಎನ್ಎಸ್ಎಫ್ ಕಚೇರಿಯಲ್ಲಿ ನಾಗಪ್ಪ ( ನಾಗ ದೇವತೆ) ನಿಗೆ ಹಾಲೇರೆದ ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ರಾವಣ ಮಾಸದಲ್ಲಿ ಆರಂಭವಾಗುವ ನಾಗರ ಪಂಚಮಿ ಎಲ್ಲ ಹಬ್ಬ-ಹರಿ ದಿನಗಳಿಗೆ ಮುನ್ನುಡಿ- ಬಾಲಚಂದ್ರ ಜಾರಕಿಹೊಳಿ ಗೋಕಾಕ- ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬವಾಗಿರುವ ನಾಗರ ಪಂಚಮಿ ಹಬ್ಬದ ಹಿಂದಿನ ದಿನ ಸಹೋದರಿಯರು ನಾಗ ದೇವತೆಗೆ ಪ್ರಾರ್ಥಿಸಿಕೊಂಡು ತಮ್ಮ ಸಹೋದರರಿಗೆ ರಕ್ಷಣೆ ಸಿಗಲೆಂದು ಹರಕೆ ಹೊರುವ ಪ್ರತೀತಿ ಇಂದಿಗೂ ಪ್ರಸ್ತುತವಿದೆ ಎಂದು ಅರಭಾವಿ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.ಗುರುವಾರ ಸಂಜೆ ತಮ್ಮ…

Read More

ಶವವನ್ನು ಕೈಚೀಲದಲ್ಲಿಟ್ಟು ಕೊಟ್ಟರು..

ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ. ತಂದೆಗೆ ಮಗನ ಶವವನ್ನು ಕೈಚೀಲದಲ್ಲಿ ತುಂಬಿ ಕೊಟ್ಟರು. ಆಸ್ಪತ್ರೆ ಯವರು ಮಾನವೀಯತೆ ಮರೆತರಾ? ಶವವನ್ನು ಒಂದು ಬಾಕ್ಸ್ ನಲ್ಲಿಟ್ಡುಕೊಡಬೇಕು ಎನ್ನುವ ಬುದ್ದಿ ಬರಲಿಲ್ಲವೇ? ಬೆಂಕಿಯ ಕೆನ್ಮಾಲೆಯಲ್ಲಿ ಪುತ್ರನನ್ನು ಕಳೆದುಕೊಂಡ ತಂದೆಗೆ ಮರ್ಮಾಘಾತ. ಬಡಪಾಯಿ ತಂದೆ ಪರಿಸ್ಥಿತಿ ಹೇಗಾಗಿರಬಹುದು? ಕೈಚೀಲದಲ್ಲಿ ಶವವಿಟ್ಡುಕೊಟ್ಟವರನ್ನು ಮನೆಗಟ್ಟುವ ಕೆಲಸ ಮಾಡಬೇಕು. ಬೆಳಗಾವಿ ಗಡಿನಾಡ ಬೆಳಗಾವಿಯಲ್ಲಿ ನಡೆಯಬಾರದ ದುರ್ಘಟನೆಯೊಂದು ನಡೆದು ಹೋಗಿದೆ. ಅಷ್ಟೇ ಅಲ್ಲ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗೂ ಕುಂದಾನಗರಿ ಬೆಳಗಾವಿ ಸಾಕ್ಷಿಯಾಗಿದೆ. ಮಗನ ಶವದ ಚೀಲವನ್ನು…

Read More

ಕನ್ನಡ ಬಾವುಟಕ್ಕೆ ಪೊಲೀಸರೇ ಅಡ್ಡಿ.?

ಬೆಳಗಾವಿ. ಕರ್ನಾಟಕದ ಗಂಡು ಮೆಟ್ಟಿದ ನಾಡು ಎಂದು‌ಕರೆಯಿಸಿಕೊಳ್ಖುವ ಈ ಕನ್ನಡ ನೆಲದಲ್ಲಿ ಈಗ ಪೊಲೀಸರು ವಿರೋಧ ವ್ಯಕ್ತಪಡಿಸುತ್ತುದ್ದಾರೆಯೇ? ಉಚಗಾವಿ ಗ್ರಾಮದಲ್ಲಿ ಕಳೆದ ಎರಡು ವರ್ಷದಿಂದ ಕನ್ನಡ ಬಾವುಟ ಹಾರಿಸಬೇಕು ಎನ್ನುವ ಮನವಿಗೆ ಅಲ್ಲಿನ ಪಂಚಾಯತಿಯವರು ಅನುಮತಿ ನೀಡಲಿಲ್ಕ.ಈಗ ಶಾಂತಿ ಕದಡುವ ನೆಪವಿಟ್ಟುಕೊಂಡು ನಾಡದ್ರೋಹಿಗಳ ತಾಳಕ್ಕೆ ತಕ್ಕಂತೆ ಪೊಲೀಸ ಇಲಾಖೆ ಕುಣಿಯುತ್ತಿದೆ. ಹೀಗಾಗಿ ಕನ್ನಡಿಗರ ಆಸೆಗೆ ತಣ್ಣೀರು ಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಉಚಗಾವಿಯಲ್ಲಿ ರಾಯಣ್ಣ ಪುತ್ಥಳಿ ಕನ್ನಡ ಭಾವುಟ ಹಾರಿಸಲು ಅನುಮತಿ ಸಿಗದ ಪೊಲೀಸರ ಕ್ರಮದ ವಿರುದ್ಧ ಕನ್ನಡಪರ…

Read More

ಶಿವಸಾಗರ ಕಾರ್ಖಾನೆ-ಶೇರುದಾರರಿಗೆ ವಂಚನೆ- ದೂರು

ರಾಮದುರ್ಗ ಠಾಣೆಯಲ್ಲಿ‌ FIR ದಾಖಲು ಶೇರು ಹಣ ಸ್ವಂತಕ್ಕೆ ಬಳಸಿದ ಆರೋಪ.. ಮೂವರ ವಿರುದ್ಧ ದೂರು.ಬೆಳಗಾವಿ ರಾಮದುರ್ಗದ ಶಿವಸಾಗರ ಸಕ್ಕರೆ ಕಾರ್ಖಾನೆ ಯಿಂದ ಶೇರುದಾರರಿಗೆ ಬರಬೇಕಾಗಿದ್ದ ಸುಮಾರು 52 ಕೋಟಿ ರೂ ಗೂ ಅಧಿಕ ಮೊತ್ತದ ದುರುಪಯೋಗ ಮಾಡಿಕೊಂಡ ದೂರು ಈಗ ರಾಮದುರ್ಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಗಂಗಾರಾಮ ಭೀಮಪ್ಪಾ ಬಂಡಿವಡ್ಡರ ಎಂಬುವರು ಈ ಕುರಿತಂತೆ ಕಾರ್ಖಾನೆಯ ಮೂವರ ವಿರುದ್ಧ ನ್ಯಾಯಕೋರಿ ಪೊಲೀಸ್ ಠಾಣೆಗೆದೂರು ನೀಡಿದ್ದಾರೆ, ಪೊಲೀಸರು ಎಫ್ಐಆರ್ ದಾಖಲು ಮಾಡಿ ವಿಚಾರಣೆ ನಡೆಸಿದ್ದಾರೆ. ಸಾಂಗಲಿಯ…

Read More

ಸವದತ್ತಿಗೂ ರೈಲು ಸಂಪರ್ಕ ಬೇಕು..

ಸಂಸದ ಜಗದೀಶ್ ಶೆಟ್ಟರ್ ಮನವಿ ಕೇಂದ್ರ ಸಚಿವರಿಗೆ ಪತ್ರ ಕೊಟ್ಟ ಸಂಸದ , ಶೆಟ್ಡರ್ ಮನವಿಗೆ ಸ್ಪಂದಿಸಿದ ಸಚಿವರು ಬೆಳಗಾವಿ ಜಿಲ್ಲೆಯಲ್ಲಿ “ಕೃಷಿ ಸಿಂಚಾಯಿ ಯೋಜನೆ” ( ಹರ ಖೇತ ಕೋ ಪಾನಿ HKKP – SMI ) ಯೋಜನೆಯಡಿ ಕಾಮಗಾರಿಗಳ ಪ್ರಾರಂಭಕ್ಕೆ ತಯಾರಿಸಿದ ಸುಮಾರು ರೂ.122.75 ಕೋಟಿ ಅಂದಾಜು ಮೊತ್ತದ ಪ್ರಸ್ತಾವನೆಗೆ ಅನುಮೋದನೆ ಕೋರಿ ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಮನವಿ ಕಳುಹಿಸಿದ್ದು, ಅದಕ್ಕೆ ಶೀಘ್ರ ಅನುಮೋದನೆ ಸೂಚಿಸುವಂತೆ ಕೋರಿ ಬೆಳಗಾವಿ…

Read More

ನಾವಗೆ -ಆರಿದ ಬೆಂಕಿ, ಇಳಿಯದ ತಾಪ

ಬೆಳಗಾವಿ. ಕಳೆದ ದಿನ ರಾತ್ರಿ ಹೊತ್ತು ನಾವಗೆ ಬಳಿ ಖಾಸಗಿ ಕಾರ್ಖಾನೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಯಶಸ್ವಿಯಾಗಿದೆ. ಈ ಘಟನೆಯಲ್ಲಿ ಯಲ್ಲಪ್ಪ ಎನ್ನುವ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇನ್ನೂ ಕೆಲವರು ಸುಟ್ಟ ಗಾಯಗಳಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿ ಮೃತನ‌ ಕುಟುಂಬಕ್ಕೆ ಕಾರ್ಖಾನೆ ಮಾಲಿಕ 10 ಲಕ್ಷ ರೂ ಪರಿಹಾರ ಮತ್ತು ಒಬ್ಬರಿಗೆ ನೌಕರಿ‌ಕೊಡುವ ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.

Read More

ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಮಹಿಳೆಯರ ದಾರುಣ ಸಾವು

ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಮಹಿಳೆಯರ ದಾರುಣ ಸಾವು ದೇವಸ್ಥಾನ ಸ್ವಚ್ಛಗೊಳಿಸಿ ವಾಪಸ್ ಬರುವಾಗ ವಿದ್ಯುತ್ ಸ್ಪರ್ಶ ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ವಿದ್ಯುತ್ ತಗುಲಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಸುಳೇಭಾವಿ ಗ್ರಾಮದ ಸವಿತಾ ಫಕೀರಪ್ಪ ಒಂಟಿ(34) ಹಾಗೂ ಕಲಾವತಿ ಮಾರುತಿ ಬಿದರವಾಡಿ(41) ಎಂಬ ಮಹಿಳೆಯರು ಮೃತಪಟ್ಟಿದ್ದಾರೆ. ದೇವಸ್ಥಾನದಲ್ಲಿ ಮಹಿಳಾ ಸಂಘದ ವಾರದ ಸಭೆ ನಡೆಸಿದ ಬಳಿಕ ದೇವಸ್ಥಾನವನ್ನು ಎಲ್ಲ ಮಹಿಳೆಯರು ಸ್ವಚ್ಛಗೊಳಿಸಿದ್ದರು. ದೇವಸ್ಥಾನವನ್ನು ನೀರಿನಿಂದ…

Read More

ಸ್ಥಳೀಯ ಸಂಸ್ಥೆಗಳ‌ ಮೀಸಲಾತಿ ಪ್ರಕಟ

ಬೆಂಗಳೂರು. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪಟ್ಟಿಯನ್ನು ಸರ್ಕಾರ‌ ಇಂದು ಪ್ರಕಟಿಸಿದೆ. 61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ ವಿವರ ಇಂತಿದೆ.

Read More
error: Content is protected !!