ಹೊಟೇಲ್ ನಲ್ಲಿ ಗಲಾಟೆ: ಯುವಕನಿಗೆ
ಚಾಕುವಿನಿಂದ ಇರಿದ ಬಿಎಸ್ ಎಫ್ ಯೋಧ…!
ಬೆಳಗಾವಿ:
ಬಿಲ್ ಕೊಡುವ ವಿಚಾರಕ್ಕೆ ಓನರ್ ಹಾಗೂ ಗ್ಯಾಂಗ್ವಾಡಿ ಹುಡುಗರ ಮಧ್ಯೆ ನಡೆದಿದ್ದ ಗಲಾಟೆ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಬಿಎಸ್ ಎಫ್ ಯೋಧನೊಬ್ಬ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.

ನಗರದ ಎಪಿಎಂಸಿಯಲ್ಲಿರುವ ಆಯಿ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಬಿಎಸ್ಎಫ್ ಯೋಧನ ಪರುಶರಾಮ ರಾಮಗೊಂಡನವರ ಎಂಬಾತನನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.