ಕಿತ್ತೂರು ಉತ್ಸವ ಬಹಿಷ್ಕರಿಸ್ತೇವೆ- ವಂಶಸ್ಥರು.

ಉತ್ಸವ ಬಹಿಷ್ಕರಿಸುವ ತೀರ್ಮಾನ ಪ್ರಕಟಿಸಿದ ವಂಶಸ್ಥರು
ಚೆನ್ನಮ್ಮಾಜೀಯ ವಂಶಸ್ಥರಿಗೆ ಜಿಲ್ಲಾಡಳಿತದಿಂದ ಅಪಮಾನ – ದೂರು.

ಬೆಳಗಾವಿ,
ವೀರರಾಣಿ ಕಿತ್ತೂರು ಉತ್ಸವಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನ ಹಿಂದೆಯೇ ಚನ್ನಮ್ಮನ ವಂಶಸ್ಥರಿಗೆ ಜಿಲ್ಲಾಡಳಿತ ಅಪಮಾನ ಮಾಡಿದೆ ಎನ್ನುವ ಕೂಗು ಹೊರಬಿದ್ದಿದೆ,
ಬೆಳಗಾವಿಯಲ್ಲಿಂದು ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥ ಉದಯ ದೇಸಾಯಿ ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಿತ್ತುರು ಉತ್ಸವದಲ್ಲಿ ಕಳೆದ 2014ರಿಂದ ನಮಗೆ ಆಮಂತ್ರಣ ಬರುತ್ತಿತ್ತು, ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಹೆಸರುಗಳನ್ನು ಮುದ್ರಿಸಿ ಮೊದಲ ದಿನವೇ ನಮಗೆ ಸತ್ಕಾರ ಸಹ ಮಾಡುತ್ತಿದ್ದರು,

ಆದರೆ, ಈ ವರ್ಷ ಬೆಳಗಾವಿ ಜಿಲ್ಲಾಡಳಿತದಿಂದ ನಮಗೆ ಈವರೆಗೆ ಯಾವುದೇ ಆಮಂತ್ರಣ ಬಂದಿಲ್ಲ. ಅಷ್ಟೇ ಅಲ್ಲ ಸಮಾರೋಪ ಸಮಾರಂಭದಲ್ಲಿ ಚೆನ್ನಮ್ಮಾಜೀ ವಂಶಸ್ಥರು ಆಮಂತ್ರಣ ಅಂತಾ ಮುದ್ರಣ ಮಾಡಿದ್ದಾರೆ, ಯಾರ ಹೆಸರು ಉಲ್ಲೇಖಿಸಿಲ್ಲ. ಈ ಮೂಲಕ ರಾಣಿಚೆನ್ನಮ್ಮಾಜೀ ವಂಶಸ್ಥರಿಗೆ ಬೆಳಗಾವಿ ಜಿಲ್ಲಾಡಳಿತ ಅಪಮಾನ ಮಾಡಿದೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಸೇರಿದಂತೆ ಕಿತ್ತೂರು ರಾಣಿ ಚೆನ್ನಮ್ಮನ 11ತಲೆಮಾರಿನ ವಂಶಸ್ಥರಿದ್ದೇವೆ. ಆಮಂತ್ರಣ ಕೊಡದಿರುವ ಬಗ್ಗೆ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಗಮನಕ್ಕೆ ತರಲಾಗಿದೆ
ಪ್ರತಿವರ್ಷದಂತೆ ಹೆಸರು ಕೊಟ್ಟು ಮನವಿ ಕೊಟ್ಟ ಬಂದಿದ್ದೇವೆ ಈವರೆಗೆ ನಮಗೆ ಆಮಂತ್ರಣ ಪತ್ರಿಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು,
ಇನ್ನು ಮುಂದೆ ಜಿಲ್ಲಾಡಳಿತ ಆಮಂತ್ರಣ ಕೊಟ್ಟರೂ ನಾವು ಯಾರು ಕಿತ್ತೂರು ಉತ್ಸವ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲ್ಲ ಎಂದು ವಂಶಸ್ಥರು ಸ್ಪಷ್ಟಪಡಿಸಿದ್ದಾರೆ,
ಸಮಾರೋಪ ನಡೆಯುವ ಅ.25ರಂದು ಹೋಗದೇ ಬಹಿಷ್ಕರಿಸಲು ತೀಮರ್ಾನ ಮಾಡಿದ್ದೇವೆ
ದಸರಾ ಉತ್ಸವದಲ್ಲಿ ಮೈಸೂರು ಒಡೆಯರಿಗೆ ಸಿಗುವ ಎಳ್ಳಷ್ಟು ಗೌರವ ನಮಗೆ ಸಿಗುತ್ತಿಲ್ಲ
ಇದು ನಮಗೆ ಅಷ್ಟೇ ಅಲ್ಲದೇ ರಾಜ್ಯದ 06ಕೋಟಿ ಜನರಿಗೆ ಮಾಡಿರುವ ಅಪಮಾನ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ,

0

Leave a Reply

Your email address will not be published. Required fields are marked *

error: Content is protected !!