Headlines

ರಸ್ತೆ ಕಹಾನಿ ತೆರೆದಿಟ್ಟ ಶಾಸಕ ಅಭಯ

ಅಭಯ ಪಾಟೀಲ ಮಾತಿಗೆ ತಲೆದೂಗಿದ ಪಾಲಿಕೆ ಸಭೆ. ಆರಂಭದಲ್ಲಿ‌ ಏರಿದ ಧ್ವನಿಯಲ್ಲಿ ಮಾತಾಡಿದ ಶಾಸಕ ಆಸೀಫ್. ನಂತರ ಶಾಸಕರ ಮಾತಿಗೆ ಸಮ್ಮತಿ. ಅಧಿಕಾರಿಗಳ ಬೆಂಬಲಕ್ಕೆ ನಿಂತ ಶಾಸಕರು. ಕ್ಷೇತ್ರದ ಜನರ ಅನುಕೂಲಕ್ಕೆ ರಸ್ತೆ‌ ನಿರ್ಮಾಣ. ಕ್ಷೇತ್ರದ ಜನರ ಹಿತಕ್ಕೆ ಬದ್ಧ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ. ಬೆಳಗಾವಿ. ಆ ಡಬಲ್ ರೋಡ ಕಹಾನಿಯನ್ನು ಎಳೆ ಎಳೆಯಾಗಿ‌ ಅತ್ಯಂತ ಕರಾರುವಕ್ಕಾಗಿ ದಾಖಲೆ ಸಮೇತ ಬಿಚ್ಚಿಟ್ಟ ಶಾಸಕ ಅಭಯ ಪಾಟೀಲರ ಮಾತಿಗೆ ಇಂದು‌ ನಡೆದ ಪಾಲಿಕೆ ಸಭೆ ಸಂಪೂರ್ಣ ಸಹಮತ…

Read More

ಬೆಳಗಾವಿಗೆ ಇಂದು ಬಿಜೆಪಿರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಳಗಾವಿ: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅ.10ರಂದು ಬೆಳಿಗ್ಗೆ 11 ಗಂಟೆಗೆ ನಗರಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಅವರು, ಮಧ್ಯಾಹ್ನ 2 ಗಂಟೆಗೆ ಬೆಳಗಾವಿ ನಗರಕ್ಕೆ ಆಗಮಿಸಿ ಖಾಸಗಿ ಹೊಟೇಲ್ದಲ್ಲಿ ನಡೆಯುವ ಭಾರತೀಯ ಜನತಾ ಪಾರ್ಟಿ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ಗ್ರಾಮಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

CONGRESS MLA ವಿರುದ್ಧ ಅತ್ಯಾಚಾರ ಕೇಸ್..!?

ಬೆಂಗಳೂರು : ರೈತ ಮುಖಂಡೆಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಈಗ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಮೇಲೆ ಬಂದಿದ್ದು FIR ಕೂಡ ದಾಖಲಾಗಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಶಾಸಕ‌ವಿನಯ ಕುಲಕರ್ಣಿ ಅದೇ ಠಾಣೆಯಲ್ಲಿ ಪ್ರತಿ ದೂರು ಸಲ್ಲಿಸಿದ್ದಾರೆ. ಈಗ ಸಂತ್ರಸ್ತೆ ಮಹಿಳೆ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ.. ಶಾಸಕ ವಿನಯ್ ಕುಲಕರ್ಣಿ ಅವರು 2022 ರಿಂದ ನನಗೆ ಪರಿಚಯ. ಆಗಾಗ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ…

Read More

ಹೈಕೋರ್ಟ್ ನಲ್ಲಿ ಡಾ.ಕಿರಣ ನಾಯ್ಕ ಗೆಲುವು.

ಹೈ ಕೋರ್ಟ್ ನಲ್ಲಿ ಡಾ‌. ಕಿರಣ ನಾಯ್ಕ ಜಯಶಾಲಿ: ಮತ್ತೆ ಕಮಾಂಡೆಂಟ್ ಹುದ್ದೆಗೆ ಕೋರ್ಟ್ ಅದೇಶ ಬೆಳಗಾವಿ: ಬೆಳಗಾವಿಯ ಜಿಲ್ಲಾ ಕಮಾಂಡೆಂಟ್ ಆಗಿದ್ದ ಡಾ. ಕಿರಣ್ ಆರ್ ನಾಯ್ಕ ಅವರ ಮೇಲೆ ಸುಳ್ಳು ಆರೋಪದಡಿ ಸೇವೆಯಿಂದ ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಅಮಾನತ್ತು ಮಾಡಿತು, ಇದನ್ನು ಪ್ರಶ್ನಿಸಿ ಡಾ. ಕಿರಣ ನಾಯ್ಕ ಅವರು ಹೈ ಕೋರ್ಟ್ ಮೆಟ್ಟಿಲೇರಿದರು. ಓಈಗ ಅವರ ಮೇಲೆ ಇದ್ದ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಿ, ಮರು ನೇಮಕಕ್ಕೆ ಹೈ ಕೋರ್ಟ್ ಮಹತ್ವದ…

Read More

ಅತ್ಯಾಚಾರಿಗೆ 20 ವರ್ಷ ಜೈಲು ಶಿಕ್ಷೆ

ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ೨೦ ವರ್ಷಗಳಕಠಿಣ ಶಿಕ್ಷೆ ಹಾಗೂ ೧೦ ಸಾವಿರ ರೂ. ಗಳ ದಂಡ ವಿಧಿಸಿ ಬೆಳಗಾವಿ ಜಿಲ್ಲಾ ಪೋಕ್ಸೋನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.೨೦೧೭ರಲ್ಲಿ ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಗಂಗಪ್ಪಾ ಕಲ್ಲಪ್ಪಾ ಕೋಲಕಾರ ಸಾವತಿಗಡೋಳ್ಳಿ ತಾ ಕಿತ್ತೂರ ಶಿಕ್ಷೆಗೊಳಗಾದ ಆರೋಪಿ. ಪ್ರೀತಿಸುವುದಾಗಿ ಹೇಳಿ ಮದುವೆಯಾಗುವ ಭರವಸೆ ನೀಡಿದ ಆರೋಪಿ ತನ್ನ ಮೋಟಾರ್ ಬೈಕಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಹಾರುಗೊಪ್ಪ, ಮಹಾರಾಷ್ಟ್ರದ ತಾಸಂಗಾದ, ಖಾನಾಪುರ, ಹುಬ್ಬಳ್ಳಿ…

Read More

ಕತ್ತಿಗೆ ಕೈ ಕೊಡಿಸಿದ ಅಣ್ಣಾಸಾಹೇಬ..

ಬೆಳಗಾವಿ. ಗಡಿನಾಡ ಬೆಳಗಾವಿ ರಾಜಕಾರಣವೇ ವಿಚಿತ್ರ. ಇಲ್ಲಿ ಯಾರು ಯಾರಿಗೂ ಶತ್ರುನೂ ಅಲ್ಲ..ಮಿತ್ರನೂ ಅಲ್ಲ. ಅಂದರೆ ಕಾಲಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗುವುದು. ಇದರ ಜೊತೆಗೆ ಇಲ್ಲಿನಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆಗೆ ಹೆಚ್ಚಿನ ಮಹತ್ವ ಇದೆ. ಹೀಗಾಗಿ ಕೆಲವೊಂದು ಸಂದರ್ಭದಲ್ಲಿ ಹೈಕಮಾಂಡ ಮಾತುಗಳು ನಗಣ್ಯವಾಗುತ್ತವೆ. ಅವರೂ ಅಸಹಾಯಕರಾಗಿ ಬಿಡುತ್ತಾರೆ. ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ರಾಜಕಾರಣದಲ್ಲಿ ಸೇಡಿಗೆ ಸೇಡು ಎನ್ನುವುದು ನಡೆದಿದೆ. ಸಿಂಪಲ್ ಆಗಿ ಹೇಳಬೇಕೆಂದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೊಡಿಯಿಂದ ಸ್ಪರ್ಧಿಸಿದ್ದ ಅಣ್ಣಾಸಾಹೇಬ ಜೊಲ್ಲೆ ಪರಾಭವಗೊಳ್ಳಲು ಮಾಜಿ…

Read More

ವಾಲ್ಮೀಕಿ ಸಮಾಜ‌ ಆರ್ಥಿಕ, ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಲಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ

ವಾಲ್ಮೀಕಿ ಸಮಾಜ‌ ಆರ್ಥಿಕ, ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಲಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ ವಾಲ್ಮೀಕಿ ಸಮಾಜದ ಸಮ್ಮೇಳನದಲ್ಲಿ ನೂತನ ಲೋಕಸಭಾ ಸದಸ್ಯೆ ಪ್ರಿಯಂಕಾ ಜಾರಕಿಹೊಳಿ ಸನ್ಮಾನ ಬೆಳಗಾವಿ: ವಾಲ್ಮೀಕಿ ಸಮಾಜ ಬಾಂಧವರು ಸರ್ಕಾರದ ಯೋಜನೆಗಳನ್ನು ಸದ್ಬಳಿಕೆ ಮಾಡಿಕೊಳ್ಳುವ ಮೂಲಕ ಸಮಾಜವನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಬೇಕು ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು. ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ‌ ಭಾನುವಾರ ಬೆಳಗಾವಿ ಜಿಲ್ಲೆ ವಾಲ್ಮೀಕಿ ಸಮಾಜ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲ್ಮೀಕಿ ಸಮಾಜದ ಸಮ್ಮೇಳನ ಹಾಗೂ…

Read More

ನಂದಾ ಬಾಪುಗೌಡ ಪಾಟೀಲ ನಿಧನ

ಹುದಲಿ ಗ್ರಾಮದ ನಂದಾ ಬಾಪುಗೌಡಾ ಪಾಟೀಲ (೫೩) ಅವರು ಇಂದು ಶನಿವಾರ ಹೃದಯಘಾತದಿಂದ ನಿಧನರಾದರು. ಮೃತರು ಹುದಲಿ ಗ್ರಾಮದ ಖ್ಯಾತ ಗರದಿ ಗಮ್ಮತ್ ಸಾಮಾಜಿಕ ಜಾಲ ತಾಣದ ಪ್ರಧಾನ ಸಂಪಾದಕ ಬಾಪುಗೌಡಾ ಪಾಟೀಲ ಅವರ ಪತ್ನಿಯಾಗಿದ್ದರು. ಇವರ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ನಿವೃತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ಮಹಾಂತೇಶ ಕವಟಗಿಮಠ ಇನ್ನುಳಿದವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೃತರು ಪತಿ, ಓರ್ವ ಪುತ್ರ, ಸೇರಿದಂತೆ ಅಪಾರ ಬಳಗ ಅಗಲಿದ್ದಾರೆ.

Read More

ಗಾಯತ್ರಿ ಭವನಕ್ಕೊಂದು ಸುಸಜ್ಜಿತ ಸಭಾಂಗಣ

ಗಾಯತ್ರಿ ಭವನಕ್ಕೊಂದು ಸುಸಜ್ಜಿತ ಸಭಾಂಗಣ ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ಭಾನುವಾರ ಉದ್ಘಾಟನೆಗೊಳ್ಳಲಿರುವ ಹೊ.ನಾ.ಹಿರಿಯಣ್ಣಸ್ವಾಮಿ ನೂತನ ಸಭಾ ಭವನ ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು ಸುಸಜ್ಜಿತವಾಗಿದೆ. ಇದರ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್ ಸಿಎಸ್ ಆರ್ ನಿಧಿಯಿಂದ10ಲಕ್ಷ ನೆರವು ನೀಡಿದ್ದು,ಮಹಾ ಸಭಾದಿಂದಅಂದಾಜು 65 ರಿಂದ 70ಸಾವಿರ ರೂ.ಗಳನ್ನುಖರ್ಚು ಮಾಡಲಾಗಿದೆ. ಮೂರು,ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿರುವುದು ಹೆಗ್ಗಳಿಕೆ.ಮುಂದಿನ ದಿನಗಳಲ್ಲಿ ಈ ಸಭಾಂಗಣಕ್ಕೆ ಸುಸಜ್ಜಿತ ಪೀಠೋಪಕರಣಗಳನ್ನು ಅಳವಡಿಸಲಿದ್ದು ಸಾರ್ವಜನಿಕ ಬಳಕೆಗೂ ನೀಡುವ ಉದ್ದೇಶ ಇದೆ ಎನ್ನುತ್ತಾರೆ…

Read More
error: Content is protected !!