
ಪೊಲೀಸ್ ಠಾಣೆ ಮುಂದೆ ಭಜರಂಗದಳ ಧರಣಿ
ಪೊಲೀಸ್ ಠಾಣೆ ಮುಂದೆ ಧರಣಿಬೆಳಗಾವಿ.ಗಡಿನಾಡ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ಎದುರು ಭಜರಂಗದಳ ಮತ್ತು ಹಿಂದೂಪರ ಸಂಘಟನೆ ಗಳ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರನ್ನೇ ಗುರಿಯಾಗಿಟ್ಟುಕೊಂಡು ಪೊಲೀಸರು ಗಡಿ ಪಾರು ಮಾಡುತ್ತಿದ್ದಾರೆ.ಅನಗತ್ಯವಾಗಿ ಯಾರದ್ದೋ ಮಾತಿಗೆ ಒಳಗಾಗಿ ಹಿಂದೂ ಗಳನ್ನೆ ಹದ್ದುಪಾರು ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ಸುಮಾರು ನೂರಕ್ಕೂ ಹೆಚ್ಚು ಜನ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಕಾವೇರಿದೆ.