ಫ್ರಾನ್ಸ ತಂಡದೊಂದಿಗೆ ಮೇಯರ್, ಉಪ ಮೇಯರ್ ಚರ್ಚೆ

ಬೆಳಗಾವಿ ಸ್ಮಾರ್ಟ್ ಸಿಟಿ: ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ವಿಲಾಸ ಜೋಶಿ ಹಾಗೂ ಆಯುಕ್ತೆ ಶುಭಾ ಬಿ. ಅವರೊಂದಿಗೆ ಫ್ರಾನ್ಸ್ ತಂಡದ ಸುದೀರ್ಘ ಚರ್ಚೆ

ಬೆಳಗಾವಿ.
ಬೆಳಗಾವಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ತಾಂತ್ರಿಕತೆ ಹಾಗೂ ಜಾರಿಯ ಮಟ್ಟವನ್ನು ಅರಿಯಲು ಆಗಮಿಸಿದ್ದ ಫ್ರಾನ್ಸ್‌ನ ತಜ್ಞರ ನಿಯೋಗ ಅಭಿವೃದ್ಧಿಗೆ ನವಚೇತನ ತುಂಬುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಿತು.

ಸ್ಮಾರ್ಟ ಸಿಟಿ ಕಚೇರಿಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ವಿಲಾಸ ಜೋಶಿ ಹಾಗೂ ಪಾಲಿಕೆಯ ಆಯುಕ್ತೆ ಶುಭಾ ಬಿ., ಸ್ಮಾರ್ಟ ಸಿಟಿ ಎಂಡಿ ಅಫ್ರಿದಾ ಬಾನು ಉಪಸ್ಥಿತರಿದ್ದರು.

ಸಭೆಯಲ್ಲಿ ನಗರದಲ್ಲಿ ನಡೆಯುತ್ತಿರುವ ಪ್ರಮುಖ ಸ್ಮಾರ್ಟ್ ಸಿಟಿ ಯೋಜನೆಗಳ ವಿವರಗಳನ್ನು ಆಯುಕ್ತೆ ಶುಭಾ ಬಿ. ಪ್ರಸ್ತುತಪಡಿಸಿದರು. ರಸ್ತೆ ಅಗಲಿಕೆ, ಡ್ರೈನೇಜ್ ಸುಧಾರಣೆ, ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ ಯೋಜನೆ ತಂತ್ರಜ್ಞಾನಗಳ ಜಾರಿಯ ಕುರಿತು ತಾಂತ್ರಿಕ ಮಾಹಿತಿ ನೀಡಿದರು.

ಮೇಯರ್ ಮಂಗೇಶ ಪವಾರ ಮಾತನಾಡುತ್ತಾ, “ನಗರದ ಸಮಗ್ರ ಅಭಿವೃದ್ಧಿಗೆ ಈ ಯೋಜನೆ ಬಹುಮುಖ್ಯ ಎಂದರು.

ಉಪಮೇಯರ್ ವಾಣಿ ವಿಲಾಸ ಜೋಶಿ ಅವರು ಮಾತನಾಡಿದರು.
ಫ್ರಾನ್ಸ್ ತಂಡದ ಮುಖ್ಯಸ್ಥ ಮಾತನಾಡಿ,, “ಬೆಳಗಾವಿಯ ಭೌಗೋಳಿಕ ಸ್ಥಿತಿಗೆ ತಕ್ಕಂತೆ, ಪರಿಸರ ಸ್ನೇಹಿ ಹಾಗೂ ದೀರ್ಘಕಾಲೀನ ಶಾಶ್ವತ ಯೋಜನೆಗಳ ಅನುಷ್ಠಾನಕ್ಕೆ ನಾವು ಸಲಹೆ ನೀಡುತ್ತೇವೆ. ಸುಸೂತ್ರ ಸಂಯೋಜನೆ ಮೂಲಕ ನಗರ ಅಭಿವೃದ್ಧಿ ಸಾಧ್ಯ,” ಎಂದರು.

ಸಭೆಯ ಅಂತ್ಯದಲ್ಲಿ ಪ್ರಮುಖ ಯೋಜನೆಗಳ ಪ್ರಗತಿ ಕುರಿತು ನಿಯಮಿತ ವರದಿಗಳನ್ನು ಶೇರ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು. ಇದರ ಜತೆಗೆ ಸಾರ್ವಜನಿಕ ಜಾಗೃತಿಗಾಗಿ ವಿಶೇಷ ಅಭಿಯಾನಗಳನ್ನು ಕೈಗೊಳ್ಳುವ ನಿರ್ಧಾರ ಮಾಡಲಾಯಿತು.
ಸಭೆಯ ನಂತರ ಪ್ರಾನ್ಸ್ ತಂಡವು ತುರಮರಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೆಟ್ಟಿ ನೀಡಿತು..‌ಪಾಲಿಕೆ ಅಧಿಕಾರಿ ಕಲಾದಗಿ ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!