
ಮೇ 2ರಿಂದ ಡಾ. ಸತೀಶ್ ಜಾರಕಿಹೊಳಿ ಆಲ್ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ
ಸುದ್ದಿಗೋಷ್ಠಿಯಲ್ಲಿ ತಿಳಿಸಿದ ವಾಲ್ಮೀಕಿ ಮುಖಂಡ ರಾಜಶೇಖರ ತಳವಾರ
ಬೆಳಗಾವಿ: ಡಾ. ಸತೀಶ್ ಜಾರಕಿಹೊಳಿ ಅವರ ಸಹಕಾರದಲ್ಲಿ, ಭಾತಕಾಂಡೆ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಬೆಳಗಾವಿ ಜಿಲ್ಲೆಯ ವಾಲ್ಮೀಕಿ ಸಮಾಜದ ಸಹಯೋಗದಲ್ಲಿ ಆಲ್ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ತಿಳಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು,
ಪಂದ್ಯಾವಳಿ:ಮೇ 2ರಿಂದ, ಸರದಾರ್ಸ್ ಮೈದಾನ, ಬೆಳಗಾವಿ

ಪಂದ್ಯ ಶೈಲಿ: ನಾಕೌಟ್ ಮೆಥಡ್, 10 ದಿನಗಳ ಕಾಲ
ಒಟ್ಟು 40 ತಂಡಗಳು ಕರ್ನಾಟಕದ ವಿವಿಧೆಡೆಯಿಂದ ಭಾಗವಹಿಸಲಿವೆ
ಬಹುಮಾನಗಳು:
ವಿಜೇತರಿಗೆ: ₹3.5 ಲಕ್ಷ ನಗದು + ಟ್ರೋಫಿ
ರನ್ನರ್ ಅಪ್ ಗೆ: ₹2 ಲಕ್ಷ ನಗದು + ಟ್ರೋಫಿ
ಸರಣಿ ಶ್ರೇಷ್ಠ, ಅತ್ಯುತ್ತಮ ಬ್ಯಾಟ್ಸ್ಮನ್ ಮತ್ತು ಬಾಲರ್ಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಗುವುದು ಎಂದು ರಾಜಶೇಖರ ತಳವಾರ ಮಾತನಾಡುತ್ತಾ ಹೇಳಿದರು:

ಸಚಿವ ಸತೀಶ್ ಜಾರಕಿಹೊಳಿ ಅವರು ಕ್ರೀಡೆಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಕ್ರಿಕೆಟ್ ಮೂಲಕ ಅವರ ಪ್ರತಿಭೆ ರಾಷ್ಟ್ರ ಮಟ್ಟಕ್ಕೆ ಬೆಳೆಯಲಿ ಎಂಬುದೇ ಉದ್ದೇಶ. ಈ ಸ್ಪರ್ಧೆ ಯುವಕರಿಗೆ ಸ್ಫೂರ್ತಿದಾಯಕವಾಗಲಿದೆ.”
ಪಾಂಡುರಂಗ ನಾಯಿಕ, ಮಿಲಿಂದ ಭಾತಕಾಂಡೆ, ಸಂಜು ನಾಯಿಕ, ರೂಪೇಶ್ ಪಾವಲೆ, ಪ್ರಸಾದ್ ಶಿರ್ವಾಲ್ಕರ್, ನಾಸೀರ್ ಪಠಾಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು..