ಸೀಟ್ ಮುಟ್ಟಲಿಲ್ಲ, ಆದರೆ ಮನಸ್ಸುಗಳ ತಾಕಲಾಟ ಗೆದ್ದವರು – ಭಾನುಪ್ರಕಾಶ

ಸೀಟ್ ಮುಟ್ಟಲಿಲ್ಲ, ಆದರೆ ಮನಸ್ಸುಗಳ ತಾಕಲಾಟ ಗೆದ್ದವರು – ಭಾನುಪ್ರಕಾಶ ಶರ್ಮಾ”
ಎಕೆಬಿಎಂಎಸ್ ಚುನಾವಣೆಯ ಮೌನ ವಿಜೇತ ಬಗ್ಗೆ ಒಂದು ವಿಶ್ಲೇಷಣಾತ್ಮಕ ಲೇಖನ

ಚುನಾವಣೆಯ ಫಲಿತಾಂಶ ಪಟ್ಟಿಯಲ್ಲಿ ಅವರ ಹೆಸರು ಮೇಲಿಲ್ಲ. ವಿಜೇತ ಪಟ್ಟಿಯಲ್ಲಿ ಸ್ಥಾನವಿಲ್ಲ. ಆದರೆ, ಸಭಾಭವನದ ಹೊರಗೆ, ಮತದಾರರ ಮನಸ್ಸಿನ ಒಳಗೆ, ಸಾಮಾಜಿಕ ಮಾಧ್ಯಮದ ಚರ್ಚೆಯಲ್ಲಿ ಮಾತ್ರ “ಭಾನುಪ್ರಕಾಶ ಶರ್ಮಾ” ಎಂಬ ಹೆಸರು ಹೆಚ್ಚು ಪ್ರಸಂಗವಾಗುತ್ತಿದೆ.

ಅವರು ಸೋತಿದ್ದಾರೆ ಎನಿಸುವಂತಿಲ್ಲ – ಅವರು ಒಂದು ನಿರೀಕ್ಷೆಯ ಸಂಕೇತ ಆಗಿದ್ದಾರೆ.

ಈ ಬಾರಿಯ ಎಕೆಬಿಎಂಎಸ್ ಅಧ್ಯಕ್ಷೀಯ ಚುನಾವಣೆ ಕೇವಲ ಸಂಘಟನೆಯ ಅಧಿಕಾರಕ್ಕೆ ಮಾತ್ರ ಸೀಮಿತವಲ್ಲ. ಇದು, ನೈತಿಕತೆ ವಿರುದ್ಧ ಹಣದ ಪೈಪೋಟಿಯ ಪರೀಕ್ಷೆಯಿತ್ತು. ಪ್ರಾಮಾಣಿಕ ಪ್ರತಿನಿಧನೆಯ ನಿರೀಕ್ಷೆಯೆದುರಿನದು – ಅಕ್ರಮ ಪ್ರಯತ್ನಗಳ ಅಟ್ಟಹಾಸದ ಎದಿರಾಟ. ಈ ಸಮರದಲ್ಲಿ ಭಾನು ಶರ್ಮಾ ಸೋತಿದ್ದಾರೆಂದರೆ, ಅದು ಮತಗಳಲ್ಲ. ಅವರು ಸೋತಿದ್ದು ಮಾತ್ರ ಒಂದು ‘ಸೀಟ್’ಗೆ. ಆದರೆ ಅವರು ಗೆದ್ದಿದ್ದು – ನೂರಾರು ಮನಸ್ಸುಗಳಿಗೆ.

ಮತದಾರರು ಅವರ ನಡತೆ, ಅಭಿಯಾನದ ಸೌಜನ್ಯತೆ, ಯಾವುದೇ ಕಳಂಕವಿಲ್ಲದ ಭಾಷಣಗಳನ್ನು ಮೆಚ್ಚಿದರು. ಅವರು ರಾಜಕೀಯದ ಭಾಷೆಯಲ್ಲ, ಸಂಘಟನೆಯ ಭವಿಷ್ಯದ ಭಾಷೆಯಲ್ಲಿ ಮಾತನಾಡಿದರು. ಯಾವುದೇ ಪಕ್ಷೀಯತೆ ಇಲ್ಲದೆ, ‘ಒಗ್ಗಟ್ಟು ಬೇಕು’ ಎಂಬ ದಿಟ್ಟ ಸಂಕೇತವಾಗಿ ಭಾನು ಶರ್ಮಾ ತೆರೆದ ನಡಿಗೆಯೂ ಮಾತೂ ಭರವಸೆಯ ಬೆಳಕು ಬೀರುವಂಥವು.

ಮೆಜಾರಿಟಿ ಇಲ್ಲದಿರಬಹುದು, ಆದರೆ ಮಾರ್ಗದರ್ಶಕ ರೂಪದಲ್ಲಿ ಮುಂದುವರಿಯುವ ಸಾಮರ್ಥ್ಯ ಭಾನು ಶರ್ಮಾ ಅವರದಲ್ಲದೇ ಇನ್ನಾರದು?” ಎಂಬ ಪ್ರಶ್ನೆ ಇಂದು ಸಮಾಜದೊಳಗೆ ಬೀಜಾರೋಪಣೆಯಾಗುತ್ತಿದೆ.

ಅವರ ಸೋಲು, ಭವಿಷ್ಯದ ಅಸ್ಥಿತ್ವಕ್ಕೆ ನೆಲೆ ಹಾಕುವ ಬಲಿಷ್ಠ ನೆಲೆಯಾದೀತು. ಕಾರಣ, ಬಹುಮತ ಪಡೆದು ಅಧಿಕಾರಕ್ಕೆ ಬಂದವರಿಗೆ ಕಾಲಬದಲಾಗುತ್ತಾ ಬರುತ್ತದೆ. ಆದರೆ –
ಮನಸ್ಸುಗಳ ಬಹುಮತ ಪಡೆದವರು ಎಂದಿಗೂ ಮರೆಯಲಾಗದು.

Leave a Reply

Your email address will not be published. Required fields are marked *

error: Content is protected !!