ನರೇಗಾ” ಕತ್ತಿಗೇ ಹಗ್ಗ – ಹೆಬ್ಬಾಳ್ಕರ್ VS ಶೆಟ್ಟರ್ ಸಮರ


ಕಾಮಗಾರಿ ಅನ್ನೋದು ಕೇವಲ ಬರಿ ಕಾಮಗಾರಿ ಅಲ್ಲ – ಇವೆಲ್ಲವೂ ಭವಿಷ್ಯದ “ಹೆಬ್ಬಾಳ್ಕರ್ Vs ಶೆಟ್ಟರ್” ರಾಜಕೀಯ ಯುದ್ಧದ ರಿಹರ್ಸಲ್

ನರೇಗಾ” ಕತ್ತಿಗೇ ಹಗ್ಗ – ಹೆಬ್ಬಾಳ್ಕರ್ VS ಶೆಟ್ಟರ್ ತೀವ್ರ ಘರ್ಷಣೆ
ರಥೋತ್ಸವದ ಹಿನ್ನಲೆಯಲ್ಲಿ ಬೆಳಗಾವಿ ಗ್ರಾಮೀಣದಲ್ಲಿ ಭಾರೀ ರಾಜಕೀಯ ಬಿರುಕು


ಬೆಳಗಾವಿಯ ಹೊಸ ರಾಜಕೀಯ ಮ್ಯಾಚ್ – ಕೇಂದ್ರ Vs ರಾಜ್ಯ ನಾಯಕರು

ಬೆಳಗಾವಿಯ ಶಿಂದೊಳ್ಳಿ ಗ್ರಾಮ. ಜಾತ್ರೆ ಪ್ರಯುಕ್ತ 4.62 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ. ಯೋಜನೆ ನಡೆಯಬೇಕಿತ್ತು ನರೇಗಾ ಅನುದಾನದಿಂದ. ಗ್ರಾಮಪಂಚಾಯತ್, ತಾಲೂಕು ಪಂಚಾಯತ್, ಜಿಪಂ ಗ್ರೀನ್ ಸಿಗ್ನಲ್. ಆದರೆ, ಸ್ಥಳದ ಶಾಸಕಿ ಸಹಜವಾಗಿಯೇ ಪ್ರಶ್ನೆ ಎಳೆದಿದ್ದಾರೆ – “ನನ್ನ ಗಮನಕ್ಕೆ ತರದೆ ನನ್ನ ಕ್ಷೇತ್ರದಲ್ಲಿ ಕಾಮಗಾರಿ ಹೇಗೆ?”


ಸಚಿವೆ ಹೆಬ್ಬಾಳ್ಕರ್ ಆಕ್ಷೇಪ:
“ಅಭಿವೃದ್ಧಿ ನನಗೂ ಬೇಕು, ಆದರೆ ವಿಧಾನಬದ್ಧತೆ ಉಳಿತಾಯವಾಗಬೇಕು.”

ಹೆಬ್ಬಾಳ್ಕರ್ ಅಭಿಪ್ರಾಯ – ಯಾರ developmental stunt ಇದನ್ನಾಗಿ ಮಾಡಬಾರದು. ಆದಕಾರಣ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾಮಗಾರಿ ತಡೆ. ಆದರೆ ಈ ತಡೆಕಥೆ ರಾಜಕೀಯವಾಗಿ ದೊಡ್ಡ ವ್ಯಾಖ್ಯಾನ ಪಡೆದಿದೆ.


ಶೆಟ್ಟರ್ ಮಾತು – ಕೇಂದ್ರ ಸಚಿವರ ಬಳಿ ನೇರ ದೂರು:
“ಅನುದಾನ ತಡೆದು ಜನರ ಕೆಲಸಕ್ಕೆ ಬ್ರೇಕ್ ಹಾಕ್ತಿದ್ದಾರೆ
.”

ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ಸಿಂಗ್ ಚಹ್ವಾನ್ ಅವರಿಗೆ ನೇರ ಪತ್ರ. ಕೇಂದ್ರದ ಹಣದ ಮೇಲೆ ರಾಜ್ಯದ ಮಂತ್ರಿಗೊಬ್ಬ ಕಲ್ಲು ಹಾಕ್ತಿದ್ದಾರೆ ಎಂದು ಗಂಭೀರ ಆರೋಪ.


ಇದಕ್ಕೆ ಹೆಬ್ಬಾಳ್ಕರ್ ಪ್ರತಿಕ್ರಿಯೆ ನಿರೀಕ್ಷೆ – ಆದರೆ ಕಚೇರಿಯಲ್ಲಿ ಮೌನ!

ಈ ವಿವಾದದ ನಡುವೆ ಸಚಿವೆ ಹೆಬ್ಬಾಳ್ಕರ್ ಬಹಿರಂಗವಾಗಿ ಯಾವುದೇ ತೀಕ್ಷ್ಣ ಪ್ರತಿಕ್ರಿಯೆ ನೀಡಿಲ್ಲ. ಆದರೆ ಒಳಗಡೆ ಅಧಿಕಾರಿಗಳ ತುರ್ತು ಸಭೆ, ಜಿಲ್ಲಾ ಮಟ್ಟದ ಚರ್ಚೆಗಳು ಜೋರಾಗಿ ನಡೆದಿರುವ ಗುಟ್ಟಿನ ಮಾಹಿತಿಗಳು ಲೀಕ್ ಆಗಿವೆ.


: ಬೆಳಗಾವಿ ಅಭಿವೃದ್ಧಿ ರಾಜಕೀಯಕ್ಕೆ ಸಿಡಿಲು? ಅಥವಾ ಚುನಾವಣೆಯ ಸಿಡುಕು ಆರಂಭ?

ಇದು ಕೇವಲ ಒಂದು ರಸ್ತೆ ಕಾಮಗಾರಿಯ ವಿಚಾರವಲ್ಲ. ಬೆಳಗಾವಿ ಗ್ರಾಮೀಣದಲ್ಲಿ ಹೆಬ್ಬಾಳ್ಕರ್ ಎಂಬ ಹೆಸರು ಅಥವಾ ಶೆಟ್ಟರ್ ಎಂಬ ನಂಬಿಕೆ – ಯಾರು ಮುಂದಿನ ದಿನಗಳಲ್ಲಿ ನಿಲ್ದಾಣದಲ್ಲಿ ಇಳಿಯುತ್ತಾರೆ ಎಂಬ ನಿರ್ಧಾರಕ್ಕೆ ಮೊದಲ ಸುಳಿವು.


:

ಶೆಟ್ಟರ್ ಬೆಳಗಾವಿಗೆ ನೂತನ ಸಂಸದರಾದರೂ, ಬಿಜೆಪಿ ಪಾಳಯದ ಹಳೆಯ ಆಟಗಾರ


Leave a Reply

Your email address will not be published. Required fields are marked *

error: Content is protected !!