
ವಿವಾದದ ನಡುವೆಯೇ ಇಂದು ಸಿಎಂ ಲೋಕಾರ್ಪಣೆ
ಕಲಾಮಂದಿರ ಉದ್ಘಾಟನೆ
ಮುನ್ನವೇ 10 ಕೋಟಿ ಹಗರಣ..!
ಬೆಳಗಾವಿ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಳೆ ರವಿವಾರ ಬೆಳಗಾವಿಯಲ್ಲಿ ಬಹುಕೋಟಿ ವೆಚ್ಚದ ‘ಕಲಾಮಂದಿರ’ವನ್ನು ಉದ್ಘಾಟಿಸಲು ಸಜ್ಜಾಗಿದ್ದಾರೆ. ಆದರೆ ಈ ಸಂಭ್ರಮದ ಮುನ್ನವೇ ಬೆಳಗಾವಿ ಲೋಕಾಯುಕ್ತದ ಕಚೇರಿಗೆ ತಲಪಿರುವ ಗಂಭೀರ ದೂರು ಒಂದು ಈಗ ಭಾರೀ ಚಚರ್ೆಗೆ ಎಡೆಮಾಡಿಕೊಟ್ಟಿದೆ.

ಇದು ಸ್ಮಾಟರ್್ ಸಿಟಿ ಯೋಜನೆಯಡಿ ನಿಮರ್ಿಸಲಾದ ಕಲಾಮಂದಿರ ನಿಮರ್ಾನದಲ್ಲಿ ಸುಮಾರು 10 ಕೋಟಿಗೂ ಅಧಿಕ ಹಣದ ದುರ್ಬಳಕೆಯ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರ ಮಂಜುನಾಥ ಬನಶಂಕರಿ ಅವರ ಈ ಬಗ್ಗೆ ಲೋಕಾಯುಕ್ತರಿಗೆ ದೂರೊಂದನ್ನು ನೀಡಿದ್ದಾರೆ,

ಸ್ಮಾರ್ಟ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಸೈದಾ ಅಫ್ರಿನ್ ಬಾನು ಎಸ್. ಬೆಳ್ಳಾರಿ,
ತಾಂತ್ರಿಕ ಮಹಾಪ್ರಬಂಧಕ ವೀರೇಂದ್ರ ಹಿರೇಮಠ, ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ಅಭಿಷೇಕ್ ಮೀಂಡಿಗೇರಿ, ಸಹಾಯಕ ಇಂಜಿನಿಯರ್ ಅಭಿಜೀತ್ ನಾಯಕ ಇವರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
ಅಷ್ಟೇ ಅಲ್ಲ ಇವರನ್ನು ಸೇವೆಯಿಂದ ಅಮಾನತ್ ಮಾಡಬೇಕೆಂದು ಮಂಜುನಾಥ ಬನಶಂಕರಿ ಅವರು ಮನವಿ ಮಾಡಿದ್ದಾರೆ.,

47 ಕೋಟಿ 57 ಕೋಟಿ ಹೇಗಾಯಿತು?
47 ಕೋಟಿಗೆ ರೂಪಿಸಿದ್ದ ಡಿಪಿಆರ್ಗೆ ಯಾವುದೇ ಕಾನೂನಾತ್ಮಕ ಅನುಮೋದನೆ ಇಲ್ಲದೆ 57 ಕೋಟಿಗೆ ವೆಚ್ಚ ಹೆಚ್ಚಳ ಮಾಡಲಾಗಿದೆ. ಈ ಶೇ 21 ರಷ್ಟು ಹೆಚ್ಚುವರಿ ವೆಚ್ಚಕ್ಕೆ ಯಾವುದೇ ಹೆಚ್ಚುವರಿ ಒಪ್ಪಂದ, ಆಡಳಿತಾತ್ಮಕ ಸಮ್ಮತಿ ಅಥವಾ ಸಚಿವ ಸಂಪುಟದ ಪರಿಶೀಲನೆ ಇಲ್ಲ. ಇದು ಕೆಟಿಪಿಪಿ ನಿಯಮ 18ರ ನೇರ ಉಲ್ಲಂಘನೆ. ಎಂದು ಅವರು ತಿಳಿಸಿದ್ದಾರೆ,
ಅಷ್ಟೇ ಅಲ್ಲ ಹೆಚ್ಚುವರಿ ಕೆಲಸಗಳಿಗೆ ಅನುಮೋದಿತ ಇಂಜಿನಿಯರ್ಗಳ ಸಹಿಗಳಿಲ್ಲ, ಅಂದರೆ ಕೆಪಿಡಬ್ಲುಡಿ ನಿಯಮ 82 ಮತ್ತು 96 ಕೂಡ ಉಲ್ಲಂಘಿಸಲಾಗಿದೆ ಎಂದೂ ಅವರು ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನಲ್ಲಿ ವಿವರಿಸಿದ್ದಾರೆ.