ಅನುಭವ ಮಂಟಪ- ಬಸವಾದಿ ಶರಣರ “ವೈಭವ ರಥಯಾತ್ರೆ”
ಬೆಳಗಾವಿ:
ಬಸವಣ್ಣನವರ ಭಕ್ತಿಗೀತೆಗಳು ಮತ್ತು ಚಿಂತನೆಗಳನ್ನು ದೇಶಾದ್ಯಾಂತ ಪ್ರಚಾರಪಡಿಸುವ ಉದ್ದೇಶದಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಬಾಗಲಕೋಟೆ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ ಇವರ ಸಹಯೋಗದಲ್ಲಿ “ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆ” ಅನ್ನು ಹಮ್ಮಿಕೊಂಡಿದ್ದವು.

ಈ ವೈಭವ ರಥಯಾತ್ರೆ, ಬೆಳಗಾವಿ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಬೆಳಗಾವಿ ಮಹಾ ಪೌರರಾದ ಮಂಗೇಶ್ ಪವಾರ್, ಉಪ ಮಹಾಪೌರ ವಾಣಿವಿಲಾಸ ಜೋಶಿ, ಅಪಾರ ಜಿಲ್ಲಾಧಿಕಾರಿ ವಿಜಯ್ ಕುಮಾರ್ ಹೊನಕೇರಿ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಭಾಗವಹಿಸಿದರು.

ಅನೇಕ ಲಿಂಗಾಯತ ಸಂಘಟನೆಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿನಿಧಿಗಳು ಮೆರವಣಿಗೆಯಲ್ಲಿ ತಮ್ಮ ಹಾಜರಾತಿಯನ್ನು ಇಟ್ಟುಕೊಂಡು ಬಸವಣ್ಣನವರ ಸಂದೇಶವನ್ನು ಬೆಂಬಲಿಸಿದರು.
ಈ ರಥಯಾತ್ರೆಯ ಮೂಲಕ, ಬಸವಣ್ಣನವರ ತಾತ್ತ್ವಿಕ ಮತ್ತು ಸಾಂಸ್ಕೃತಿಕ ಘನತೆ ಹಾಗೂ ಶರಣಕವಿಗಳ ಕಲೆಯ ವೈಭವವನ್ನು ಪ್ರತಿಬಿಂಬಿಸುವ ಪ್ರೇರಣೆಯಾದ ಅನುಭವ ಮಂಟಪ ಕಾರ್ಯಕ್ರಮವನ್ನು ಪ್ರದರ್ಶಿಸಲಾಗಿದ್ದು, ಭಾಗವಹಿಸಿದ ಪ್ರಜೆಗಳು ತಾವು ಅನುಭವಿಸಿದ ನವಚೇತನಕ್ಕಾಗಿ ಹರ್ಷ ವ್ಯಕ್ತಪಡಿಸಿದರು.

