ಚವ್ಹಾಟ್ ಗಲ್ಲಿಯಲ್ಲಿ ಚರಂಡಿ ನೀರಿನ ಪೂರೈಕೆ: ನಿವಾಸಿಗಳ ಆಕ್ರೋಶ

ಬೆಳಗಾವಿ, ಮೇ 9:
ಚವ್ಹಾಟ್ ಗಲ್ಲಿಯ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿಗಿಂತ ಚರಂಡಿಯ ಕೊಳಚೆ ನೀರೇ ಹೆಚ್ಚು “ಸಿಗುತ್ತಿದೆ” ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಪೈಪ್ಲೈನ್ ಮೂಲಕ ಬರುವ ಕುಡಿಯುವ ನೀರಿನಲ್ಲಿ ಗಾಳಿಯ ದುರ್ಗಂಧ ಮತ್ತು ಕಲುಷಿತ ಸ್ಥಿತಿಯ ನೀರು ತಲುಪುತ್ತಿದೆ. ಇದರ ವಿರುದ್ಧ ಶುಕ್ರವಾರ ಸ್ಥಳೀಯರು ತೀವ್ರ ಅಸಹನೆ ವ್ಯಕ್ತಪಡಿಸಿದರು.

24 ಗಂಟೆಗಳ ನೀರು ಪೂರೈಕೆ ಯೋಜನೆ ವೈಫಲ್ಯ
ಮಹಾನಗರ ಪಾಲಿಕೆ ಹಾಗೂ ಎಲ್ & ಟಿ ಕಂಪನಿಯ ಸಹಯೋಗದಲ್ಲಿ ಹಲವು ವರ್ಷಗಳಿಂದ ‘24×7 ನೀರು ಪೂರೈಕೆ ಯೋಜನೆ’ ಜಾರಿಯಲ್ಲಿದೆ. ಆದರೆ ಯೋಜನೆಯು ಕೇವಲ ಹೆಸರಿಗೇ ಸೀಮಿತವಾಗಿದ್ದು, ನ್ಯಾಯಸಮ್ಮತ ಪೂರೈಕೆ ಇಲ್ಲದಿರುವುದೇ ಅಲ್ಲದೆ, ಈಗ ಕೊಳಚೆ ನೀರಿನ ಮಿಶ್ರಣ ಮತ್ತಷ್ಟು ಆತಂಕ ಉಂಟುಮಾಡಿದೆ.
ಪಾಲಿಕೆ ಹಾಗೂ ಎಲ್ & ಟಿ ವಿರುದ್ಧ ತೀವ್ರ ಆಕ್ರೋಶ
“ಪೈಪ್ಲೈನ್ ಹಾಕಿದ್ರು, ಬಿಲ್ ಕಲೆಕ್ಟ್ ಮಾಡ್ತಾರೆ. ಆದರೆ ಬರುವ ನೀರಿನಲ್ಲಿ ದುರಗುಂಧ. ಮಕ್ಕಳಿಗೆ ಅಸ್ವಸ್ಥತೆ, ವೃದ್ಧರಿಗೆ ಆರೋಗ್ಯ ಸಮಸ್ಯೆ. ಪೂರ್ತಿ ಜವಾಬ್ದಾರಿಯ ಕೊರತೆ ಇದೆ,” ಎಂದು ನಿವಾಸಿಗಳು ಸ್ಪಷ್ಟ ಆರೋಪ ಮಾಡಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಎಲ್ & ಟಿಗೆ ಜನರ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನೀಡಿದರೋ, ಹೆಚ್ಚಿಸುವ ಜವಾಬ್ದಾರಿ ನೀಡಿದರೋ ಎಂದು ಪ್ರಶ್ನೆ ಕೇಳುತ್ತಿದ್ದಾರೆ.

ಮೂರು ಪ್ರಮುಖ ಬೇಡಿಕೆಗಳು:
- ತಕ್ಷಣ ಕಲುಷಿತ ನೀರಿನ ಪೂರೈಕೆಯನ್ನು ನಿಲ್ಲಿಸಬೇಕು.
- ಶುದ್ಧ, ನಿರಂತರ ನೀರಿನ ವ್ಯವಸ್ಥೆ ಕಲ್ಪಿಸಬೇಕು.
- ಪಾಲಿಕೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ನಿವಾಸಿಗಳ ಎಚ್ಚರಿಕೆ:
ಸಮಸ್ಯೆ ಮುಂದುವರೆದರೆ ವ್ಯಾಪಕ ಪ್ರತಿಭಟನೆ ಕೈಗೆತ್ತಿಕೊಳ್ಳಲಾಗುವುದು ಎಂದು ಚವ್ಹಾಟ್ ಗಲ್ಲಿಯ ಜನರು ಎಚ್ಚರಿಸಿದ್ದಾರೆ.

