ಹಳೆಯ ಪ್ರಕರಣ- ನಾಲ್ವರ ಬಂಧನ
ಬೆಳಗಾವಿ.
ಸಂತಿಬಸ್ತವಾಡ ಗ್ರಾಮದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಲಕ್ಷ್ಮಣ ಯಲ್ಲಪ್ಪ ಉಚವಾಡೆ (30), ಮುತ್ತಪ್ಪಾ ಭರಮಾ ಉಚವಾಡೆರ (26), ಲಕ್ಚ್ಮಣ ನಾಗಪ್ಪ ನಾಯಿಕ (30) ಮತ್ತು ಶಿವರಾಜ ಯಲ್ಲಪ್ಪ ಗುದ್ಲಿ (29) ಎಂಬುವರೇ ಬಂಧಿತರು ಎಂದು ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.

ಕಳೆದ ಎಪ್ರಿಲ್ 13ರಂದು ಮುಸ್ಲೀಂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಿನ್ನೆಲೆಯಲ್ಲಿ ಸಂತಿಬಸ್ತವಾಡ ಈದ್ಗಾದ ನಾಲ್ಕು ಮಿನಾರ ಮತ್ತು ಗುಮ್ಮಜಗಳನ್ನು ಧ್ವಂಸ ಮಾಡಿದ್ದರು ಎಂದು ಮಹಮ್ಮದ ಗೌಸಸಾಬ ತಾಹಶೀಲ್ದಾರ ಎಂಬುವರು ದೂರು ನೀಡಿದ್ದರು,
ಈ ಹಿನ್ನೆಲೆಯಲ್ಲಿ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.