ಬೆಳಗಾವಿ:
“ಹಾನಿಯಾಗುವ ಮುನ್ನ ಎಚ್ಚೆತ್ತು ಕಾರ್ಯಾಚರಿಸೋಣ” ಎಂಬ ಸಂಕಲ್ಪದೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಳೆಗಾಲ ಮುಂಜಾಗೃತಾ ಸಭೆ ಜರುಗಿತು.
ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಯುಕ್ತೆ ಶುಭ ಬಿ ಮತ್ತು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ ಹಾಗೂ ಮರ ಕತ್ತರಿಸುವ ಗುತ್ತಿಗೆದಾರರೊಂದಿಗೆ ಜಂಟಿಯಾಗಿ ಈ ಸಭೆ ಮಂಗಳವಾರ ಪಾಲಿಕೆ ಸಭಾಂಗಣದಲ್ಲಿ ನಡೆಯಿತು
ಅಪಾಯಕಾರಿ ಮರಗಳ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮಹಾಪೌರ ಮಂಗೇಶ್ ಪವಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

. ಮಳೆಯ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಮತ್ತು ಬೀಳುವ ಸಾಧ್ಯತೆಯಿರುವ ಮರಗಳ ಸರ್ವೆ ನಡೆಸಿ, ಅವುಗಳನ್ನು ಎಚ್ಚರಿಕೆಯಿಂದ ತೆರವುಗೊಳಿಸಬೇಕೆಂದು ಮಹಾಪೌರರು ಹೇಳಿದರು.
ಅಪಾಯದ ಮರಗಳ ABC ಶ್ರೇಣಿ ವಿಭಾಗ ಅಪಾಯದ ಮರಗಳನ್ನು ಗುರುತಿಸಲು ABC ವರ್ಗೀಕರಣ ಮಾಡಿ ತ್ವರಿತ ಕಾರ್ಯಾಚರಣೆಗೆ ಮುಂದಾಗಬೇಕೆಂದು ಸೂಚಿಸಿದರು. .
ಆಯುಕ್ತರ ಸೂಚನೆ
ಮಹಾನಗರ ಪಾಲಿಕೆಯ ಆಯುಕ್ತ ಶುಭಾ ಬಿ. ಮಾತನಾಡಿ “ನಗರದಲ್ಲಿನ ಅಪಾಯದ ಮರಗಳ -ಕೊಂಬೆಗಳನ್ನು ಕತ್ತರಿಸಿ, ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ವಿಶೇಷ ತಂಡ ರಚಿಸಲಾಗಿದೆ. ಸಹಾಯವಾಣಿ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ” ಎಂದರು.
ಇದೇ ವೇಳೆ, 15000 ಮೀಟರ್ನಷ್ಟು ನಾಲೆಗಳ ಹೂಳೆತ್ತುವ ಕೆಲಸ ಮುಕ್ತಾಯವಾಗಿದ್ದು, ನೂತನ ಯಂತ್ರೋಪಕರಣಗಳು – ಯುಜಿಡಿ ಮಷೀನ್, ಜೆಟ್ಟಿಂಗ್ ಹಾಗೂ ಸಕ್ಕೀಂಗ್ ವಾಹನಗಳು ಕಾರ್ಯಾಚರಣೆಗೆ ಸಜ್ಜಾಗಿವೆ. ಮಳೆಹಾನಿ ಹಾಗೂ ಜಾನುವಾರುಗಳ ಸಾವು-ನಷ್ಟದ ವರದಿಗಾಗಿ ವಿಶೇಷ ತಂಡವನ್ನು ರೂಪಿಸಲಾಗಿದೆ ಎಂದರು.
ಕೋವಿಡ್ ಮುಂಜಾಗೃತಾ ಕ್ರಮಗಳು
ಕೊವಿಡ್ ಸಂಬಂಧಿತ ಎಚ್ಚರಿಕೆ ಕ್ರಮಗಳ ಬಗ್ಗೆ ಅವರು ವಿವರಿಸಿದರು: “ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಎಂದು ಆಯುಕ್ತರು ಹೇಳಿದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿ ಪುರುಷೋತ್ತಮ, ಉಪ ಅರಣ್ಯಾಧಿಕಾರಿ ವಿನಯ ಗೌಡರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶ್ವೀನ್ ಶಿಂಧೆ ಹಾಗೂ ಇತರ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.