ಇಂದು ʻನೀರಿನ ಪಾಠʼ ನಾಳೆ ʻಚುನಾವಣೆಯ ಪಾಠ…!

45 ಮಿಲಿಯನ್ ಲೀಟರ್ ನೀರು.
ರೂ.3೦೦ ಕೋಟಿ ಮೌಲ್ಯದ ಯೋಜನೆ. ಗುರಿ –


ಧಾರವಾಡ ಕೈಗಾರಿಕಾ ವಲಯ.
ಮೂಲ – ಬೆಳಗಾವಿಯ ಹೃದಯದ ಜೀವನಾಡಿ ಹಿಡಕಲ್ ಜಲಾಶಯ.

ಈ ಯೋಜನೆಯ ಬಗ್ಗೆ ಬೆಳಗಾವಿಯಲ್ಲಿ ಈಗ ಕಾಡುತ್ತಿರುವ ಪ್ರಶ್ನೆ ಒಂದೇ – ಈ ನೀರು ಯಾರ ಓಲೈಕೆಗೆ? ರಾಜ್ಯದ ಕೈಗಾರಿಕೋದ್ದೇಶಗಳಿಗೆ ಬೆಳಗಾವಿಯ ಹೊಟ್ಟೆ ಬಿಸಿ ಮಾಡಬೇಕೆ?

ಯಾರ ಒತ್ತಡದಿಂದ ಕಾಮಗಾರಿ?
ರಾಜ್ಯದ ಕಾಂಗ್ರೆಸ್‌ ಸರ್ಕಾರದ ಒಳಗೇ ಗೊಂದಲಗಳು ಮನೆ ಮಾಡಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒತ್ತಡದಿಂದ ಈ ಯೋಜನೆ ಆರಂಭವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಅಷ್ಟೇ ಅಲ್ಲ ರ‍್ಚೆಗೂ ಕಾರಣವಾಗಿವೆ. ಇಲ್ಲಿ ನೈಜ ಅಭಿವೃದ್ಧಿ ಯೋಜನೆ ಇಲ್ಲದೆ ರಾಜಕೀಯ ಲೆಕ್ಕಾಚಾರ ಮೇಲುಗೈ ಸಾಧಿಸಿದೆ ಎನ್ನುವ ಅನುಮಾನ ಎಲ್ಲರಲ್ಲಿದೆ.


ಇದೆಲ್ಲದರ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿ, “ಈ ಯೋಜನೆ ಬಗ್ಗೆ ನನಗೆ ಪೂರ್ಣ ಮಾಹಿತಿ ಕೊಟ್ಟಿಲ್ಲ, ಮುಖ್ಯಮಂತ್ರಿಯವರೊAದಿಗೆ ಚರ್ಚೆ ಮಾಡುತ್ತೇನೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಆದರೆ, ಬೆಳಗಾವಿಯ ಮತ್ತೊಬ್ಬ ಸಚಿವರು ಮಾತ್ರ ಈ ವಿಷಯದ ಬಗ್ಗೆ ಮೌನವಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗುತ್ತಿದೆ.

ಬೆಳಗಾವಿಗರ ಹಕ್ಕಿಗೆ ಧಕ್ಕೆ
ಹಿಡಕಲ್ ಜಲಾಶಯದಿಂದ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು, ಕೃಷಿಗಾಗಿ ನೀರು, ಮಾವಿನ ತೋಟಗಳಿಗೆ ಜೀವಾಳವಿತ್ತು. ಈಗ ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ಆ ನೀರು ಪೂರೈಕೆ ಮಾಡುವುದು ಈ ಭಾಗದ ಜನರ ಬಾಯಿಗೆ ಮಣ್ಣು ಹಾಕಿದಂತೆ ಎನ್ನುವ ಖಾರ ಮಾತುಗಳು ಕೇಳಿ ಬರುತ್ತಿವೆ.

ಈ ಯೋಜನೆಗೆ ವಿರೋಧಿಸುವ ಪ್ರಥಮ ಧ್ವನಿ ಎತ್ತಿದವರು – ರೈತರು. ಅವರ ಬೆಂಬಲಕ್ಕೆ ಪರಿಸರ ಪರ ಸಂಘಟನೆಗಳು ಬಂದಿವೆ. ಕರ್ನಾಟಕ ರಕ್ಷಣಾ ವೇದಿಕೆಯಿಂದ ಡಿಸಿ ಕಚೇರಿ ಮುತ್ತಿಗೆ ಹೋರಾಟದ ಕರೆ ನೀಡಲಾಗಿದೆ. “ನಮ್ಮ ಹಕ್ಕಿನ ನೀರು, ನಮ್ಮ ಪ್ರಾಣದ ನೀರು – ಇದು ಕೇವಲ ಯೋಜನೆ ಅಲ್ಲ, ನಮ್ಮ ಭವಿಷ್ಯದ ಘೋಷÀಣೆಗಳು ಈಗ ಬೀದಿಗಳಿಂದ ವಿಧಾನಸೌಧದವರೆಗೆ ಕೇಳಿಸುತ್ತಿವೆ.
ಜಾರಕಿಹೊಳಿಗೆ ಪ್ರಭಾವ ಕುಗ್ಗಿಸಲು ಯತ್ನ?

ಈ ಯೋಜನೆಯ ಹಿಂದೆ ಮತ್ತೊಂದು ರಾಜಕೀಯ ಷಡ್ಯಂತ್ರವಿದೆಯೆ? ಎಂಬ ಶಂಕೆ ಸಹ ಏಳುತ್ತಿದೆ.
ಡಿಕೆಶಿ ಅವರು, ಸತೀಶ್ ಜಾರಕಿಹೊಳಿ ಕುಟುಂಬದ ಬೆಳಗಾವಿ ಪ್ರಭಾವಕ್ಕೆ ತಡೆ ಹಾಕುವ ನಿಟ್ಟಿನಲ್ಲಿ – ಲಕ್ಮಿ ಹೆಬ್ಬಾಳಕರ್ ಅವರನ್ನು ಮುನ್ನೆಲೆಗೆ ತರುತ್ತಿರುವುದು ಈಗ ಗುಟ್ಟಿನ ವಿಷಯವಾಗಿ ಉಳಿದಿಲ್ಲ. . ಇದಕ್ಕೆ ಈ ಯೋಜನೆ ರಾಜಕೀಯ ಬಳಕೆಯಾದರೂ ಅಚ್ಚರಿಯಿಲ್ಲ.
ಬೆಳಗಾವಿ ಜಿಲ್ಲೆ, ಶತಮಾನಗಳಿಂದ ಕೃಷಿ ಆಧಾರಿತ ಜೀವನವನ್ನು ನಡೆಸುತ್ತಾ ಬಂದಿದೆ. ಇಲ್ಲಿ ಜೀವಿಸುವ ಜನತೆಗೆ ತಮ್ಮ ನದಿಗಳೂ, ಜಲಾಶಯಗಳೂ ಅವರಿಗಾಗಿಯೇ ಎಂಬ ಭರವಸೆ ಇದೆ. ಆದರೆ, ಈಗ ಅವರ ಹೃದಯದ ನೀರು ರಾಜಕೀಯದ ರಾಜಮಾರ್ಗದಲ್ಲಿ ಹರಿಯುತ್ತಿದೆ.
ನೀರಿಗಾಗಿ ನುಗ್ಗಿದ ರಾಜಕೀಯದ ಈ ಹೊಡೆತಕ್ಕೆ – ಪ್ರಜಾಪ್ರತಿನಿಧಿಗಳಿಂದ ಪ್ರಾಮಾಣಿಕ ಉತ್ತರ ಬೇಕಿದೆ. ಬೆಳಗಾವಿಗೆ ನ್ಯಾಯ ಬೇಕಿದೆ. ಇಲ್ಲವಾದರೆ, ಇಂದಿನ “ನೀರಿನ ಪಾಠ” ನಾಳೆ “ಚುನಾವಣೆಯ ಪಾಠ” ಆಗಿ ಬದಲಾದರೂ ಆಶ್ಚರ್ಯವಿಲ್ಲ.

Leave a Reply

Your email address will not be published. Required fields are marked *

error: Content is protected !!