Headlines

ಬೆಳಗಾವಿಯಲ್ಲಿ ‘ಪಂಚ ಗ್ಯಾರಂಟಿ’ಗಳ ಪ್ರಭಾವ: ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕರ್ಾರದ ‘ಪಂಚ ಗ್ಯಾರಂಟಿ’ ಯೋಜನೆಯಡಿ ಜಿಲ್ಲೆಯಲ್ಲಿ ಈ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೆ ಬರಲಿವೆ ಎಂದು ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು,.
ನಗರದಲ್ಲಿಂದು ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘ ಆಯೋಜನೆ ಮಾಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು,

ಪಂಚ ಗ್ಯಾರಂಟಿಗಳಿಂದ ಈ ಪ್ರಗತಿಪಥ ಬೆಳಗಾವಿಗೆ ರಾಜಕೀಯವಾಗಿ ಮಾತ್ರವಲ್ಲ ಸಾಮಾಜಿಕವಾಗಿ ಹೊಸ ಹಾದಿ ತೋರಿಸುತ್ತಿದೆ. ಶಾಸನಸಭಾ ಅಧಿವೇಶನದ ಹೊರತಾಗಿಯೂ ಜನಸಂಪರ್ಕದ ಮಟ್ಟದಲ್ಲಿ ಈ ಮಾಹಿತಿಯು ಜನರಿಗೆ ತಲುಪುವುದು ಅಗತ್ಯ ಎಂದರು.
ಸಕರ್ಾರದ ಸಾಧನೆಗಳನ್ನು ಸಮಗ್ರವಾಗಿ ವಿವರಿಸಿದ ಸಚಿವ ಜಾರಕಿಹೊಳಿಯವರು, ಬೆಳಗಾವಿಯ ಅಭಿವೃದ್ಧಿಗೆ ನಾವು ಬದ್ಧ ಎಂದು ಸ್ಪಷ್ಟಪಡಿಸಿದರು. ಈ ಗ್ಯಾರಂಟಿ ಯೋಜನೆಗಳ ಪರಿಣಾಮ ಈಗಾಗಲೇ ಗ್ರಾಮೀಣ ಜನ ಜೀವನದಲ್ಲಿ ಬದಲಾಗುತ್ತಿದೆ. ಈ ರೀತಿಯ ಯೋಜನೆಗಳು ಶಾಶ್ವತ ಬದಲಾವಣೆಗೆ ದಾರಿ ಮಾಡಿಕೊಡುತ್ತವೆ. ಎಂದು ಅವರು ಹೇಳಿದರು,


ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 36.26 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯಡಿಯಲ್ಲಿ 1025.49 ಕೋಟಿ ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ದಿನಕ್ಕೆ ಸರಾಸರಿ 5.40 ಲಕ್ಷ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದು, 784.45 ಕೋಟಿ ಖಚರ್ು ಮಾಡಲಾಗಿದೆ ಎಂದರು.

ಗೃಹಜ್ಯೋತಿ ಯೋಜನೆಯಡಿಯಲ್ಲಿ 10.16 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಲಭಿಸಿದ್ದು, 804.37 ಕೋಟಿ ವೆಚ್ಚವಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ 11.32 ಲಕ್ಷ ಮಹಿಳೆಯರಿಗೆ ನೇರ ಹಣಕಾಸು ಸಹಾಯ ಲಭಿಸಿದ್ದು, ಇದುವರೆಗೆ 4092.58 ಕೋಟಿ ಅನುದಾನ ವಿತರಿಸಲಾಗಿದೆ. ಯುವನಿಧಿ ಯೋಜನೆಯಲ್ಲಿ 96,859 ಯುವಕರಿಗೆ ನೇರ ಹಣ ವಗರ್ಾವಣೆಯ ಮೂಲಕ 28.93 ಕೋಟಿ ನೀಡಲಾಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು,

ಸಾಮಾಜಿಕ ಪ್ರತಿಬಿಂಬ
“ಪಂಚ ಗ್ಯಾರಂಟಿ ಯೋಜನೆಗಳು ಸಕರ್ಾರದ ನಿಜವಾದ ಸಾಮಾಜಿಕ ಬದ್ಧತೆಯ ಪ್ರತಿಬಿಂಬ ಎಂದ ಸಚಿವ ಸತೀಶ ಜಾರಕಿಹೊಳಿ, ಬೆಳಗಾವಿಯಲ್ಲಿ ಈ ಯೋಜನೆಗಳಿಂದ ಬಡವರಲ್ಲಿ ಆತ್ಮವಿಶ್ವಾಸ ಬೆಳೆದಿದೆ. ಈ ಯೋಜನೆಗಳು ರಾಜಕೀಯ ಆಯ್ದವರಿಗೆ ಮಾತ್ರವಲ್ಲ, ಎಲ್ಲರಿಗೂ ಸಮಾನವಾಗಿ ತಲುಪಿವೆ ಎಂಬುದು ಮುಖ್ಯವಲ್ಲವೆಎಂದು ಪ್ತಶ್ನಿಸಿದರು,”
ಅಮೃತ ಸರೋವರ ಯೋಜನೆ ಅಡಿಯಲ್ಲಿ 228 ಕೆರೆ ಅಭಿವೃದ್ಧಿಮಾಡಲಾಗಿದೆ.


383 ಶಿಶುಪಾಲನಾ ಕೇಂದ್ರಗಳು, 515 ಗ್ರಾಮೀಣ ರಸ್ತೆ ಅಭಿವೃದ್ಧಿ, 232.28 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿ. ಕುಡಿಯುವ ನೀರು 963 ಕೋಟಿ ಮೌಲ್ಯದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಮಾಡಲಾಗಿದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಸಚಿವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಶೇಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!