‘ ಸಂಭ್ರಮದಲ್ಲಿ ಮೇಘಾ ಪ್ರದರ್ಶನದ ಉದ್ಘಾಟನೆ:
ಮೊದಲನೆ ದಿನ ಬೆಳಗಾವಿಯಲ್ಲಿಯ ವಿವಿಧ ಶಾಲಾ ಮಹಾವಿದ್ಯಾಲಯಗಳಿಂದ ಐದು ಸಾವಿರ ವಿದ್ಯಾರ್ಥಿಗಳು ಭೇಟಿ ಕೊಟ್ಟರು.
ಬೆಳಗಾವಿ
ಪ್ರದರ್ಶನಗಳು ಜಾತ್ರೆಯಂತಿರುತ್ತವೆ. ಹೊಸದನ್ನು ನೋಡಲು ಜನರು ಮುಗಿಬೀಳುತ್ತಾರೆ. ಆದರೆ, ನಾವು ದಿಲ್ಲಿಯಲ್ಲಿಯ ‘ಪ್ರಯಾಶ ಎಕ್ಸಿಬಿಷನ್ ಆ್ಯಂಡ್ ಪ್ರಮೋಶನ’ ಇವರ ಸಹಕಾರದಿಂದ ಹಮ್ಮಿಕೊಂಡ ಈ ‘ವಿಜನ್ ಕರ್ನಾಟಕ 2025’ಪ್ರದರ್ಶನ ಎಂದರೆ ಜ್ಞಾನದ ಜಾತ್ರೆಯಾಗಿದೆ ಎಂದು ಸಂಸದರಾದ ಜಗದೀಶ ಶೆಟ್ಟರರು ಅಭಿಪ್ರಾಯಪಟ್ಟರು.

ಇಲ್ಲಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಕನ್ವೆನ್ನನ ಸೆಂಟರನಲ್ಲಿ ಆಯೋಜಿಸಲಾಗಿದ್ದ ವಿಜನ್ ಕರ್ನಾಟಕ 2025 ರ ಮಹಾ ಪ್ರದರ್ಶನದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸದರು ಹೀಗೆ ಹೇಳಿದರು. ಈ ಸಂದರ್ಭದಲ್ಲಿ ಕೆ. ಎಲ್.ಇ. ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀಯುತ ಪ್ರಭಾಕರ ಕೋರೆ, ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ.ಅಭಯ ಪಾಟೀಲ, ಧಾರವಾಡ- ಹುಬ್ಬಳ್ಳಿ ಪಶ್ಚಿಮ ವಿಧಾನಸಭೆ ಮತಕ್ಷೇತ್ರದ ಶಾಸಕರಾದ ಶ್ರೀ.ಅರವಿಂದ ಬೆಲ್ಲದ, ಮಾಜಿ ಸಂಸದರಾದ ಶ್ರೀಮತಿ.ಮಂಗಳಾ ಅಂಗಡಿ, ಉಪಮಹಾಪೌರರಾದ ಶ್ರೀಮತಿ.ವಾಣಿ ವಿಲಾಸ ಜೋಶಿ, ಮಾಜಿ ಶಾಸಕರಾದ ಶ್ರೀ.ಎಂ. ಎಲ್ ಮುತ್ತೆನ್ನವರ, ಮಾಜಿ ಶಾಸಕರಾದ ಶ್ರೀ.ಸಂಜಯ ಪಾಟೀಲ, ಮಾಜಿ ಶಾಸಕರಾದ ಶ್ರೀ.ವಿ. ಐ. ಪಾಟೀಲ, ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಶ್ರೀ.ಸುಭಾಷ ಪಾಟೀಲ, ನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ.ಗೀತಾ ಸುತಾರ, ನಗರಸೇವಕರಾದ ಶ್ರೀ.ಹನುಮಂತ ಕೊಂಗಾಲಿ, ಬೆಳಗಾವಿ ಬಿಜೆಪಿ ಮಹಾನಗರ ಜಿಲ್ಲೆಯ ಕಾರ್ಯದರ್ಶಿ ಶ್ರೀ. ನಾಗರಾಜ ಪಾಟೀಲ, ನಗರ ಸೇವಕ ಶ್ರೀ.ರಾಜಶೇಖರ ದೋಗಿ, ಆರ್.ಬಿ.ಐ ಉಪ ಪ್ರಧಾನರಾದ ಶ್ರೀ.ಅಗ್ರವಾಲ, ಜಿಐಎಸ್ ಡೆಪ್ಯುಟಿ ಡೈರೆಕ್ಟರ ಡಾ. ನಂದಗೋಪಾಲ ಮತ್ತು ಪ್ರಯಾಸ ಎಕ್ಸಿಬಿಷನ್ನಿನ ಅಧ್ಯಕ್ಷರಾದ ಶ್ರೀ.ವನೀಶ ಗುಪ್ತಾ ಇವರು ವೇದಿಕೆಯ ಮೇಲೆ ಪ್ರಮುಖ ಅತಿಥಿಗಳಾಗಿ ಉಪಸ್ಥಿತರಿದ್ದರು.

ಮೊದಲಿಗೆ ಸಂಸದರಾದ ಜಗದೀಶ ಶೆಟ್ಟರ್ ಅವರು ತಮ್ಮ ಅಮೃತ ಹಸ್ತದಿಂದ ಭವ್ಯಪ್ರದರ್ಶನದ ದೀಪ ಪ್ರಜ್ವಲನೆ ಮಾಡಿ ಪ್ರದರ್ಶನವನ್ನು ಉದ್ಘಾಟಿಸಿದರು. ಮೂರು ದಿನಗಳವರೆಗೆ ನಡೆಯುವ ಈ ಪ್ರದರ್ಶನದ ಮೊದಲನೆ ದಿನ ಬೆಳಗಾವಿ ನಗರದಲ್ಲಿಯ ವಿವಿಧ ಶಾಲಾ ಕಾಲೇಜುಗಳಿಂದ ಐದು ಸಾವಿರ ವಿದ್ಯಾರ್ಥಿಗಳು ಭೇಟಿ ಕೊಟ್ಟರು. ಡಿ.ಆರ್.ಡಿ.ಎ.ಯ ಸ್ಟಾಲ್ ನಲ್ಲಿ ಇಡಲಾದ ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲ್ಪಟ್ಟ ಶಸ್ತ್ರಾಸ್ತ್ರ ಮತ್ತು ಹೆಲಿಕಾಪ್ಟರಗಳನ್ನು ನೋಡಿ ವಿದ್ಯಾರ್ಥಿಗಳು ಬೆರಗಾದರು. ಬಿ.ಐ.ಎಸ್ ಅಧಿಕಾರಿಗಳು ವಸ್ತುಗಳನ್ನು ಖರೀದಿಸುವಾಗ ಹೇಗೆ ಜಾಗರೂಕರಾಗಿರಬೇಕೆಂದು ಮಾಹಿತಿ ಕೊಟ್ಟರೆ, ಆರ್.ಬಿ.ಐನ ಅಧಿಕಾರಿಗಳು ಸೈಬರ್ ಫ್ರಾಡ್ ದಿಂದ ಸುರಕ್ಷಿತವಾಗಿರಲು ಸೂಚಿಸಿದರು. ಹೀಗೆ 60ಕ್ಕೂ ಹೆಚ್ಚು ವಿವಿಧ ಕೇಂದ್ರೀಯ ಖಾತೆಯ ವಿದ್ಯಾರ್ಥಿಗಳು ಮಾಹಿತಿ ಪಡೆದರು. ಈ ಪ್ರದರ್ಶನದ ಮೊದಲ ದಿನ ಅಭೂತಪೂರ್ವ ಯಶಸ್ಸು ಪಡೆಯಿತು.ಈ ಪ್ರದರ್ಶನ 13ನೇ ತಾರೀಖಿನವರೆಗೆ ನಡೆಯಲಿದೆ.

ಈ ಸಮಯದಲ್ಲಿ ಮಾತನಾಡುವಾಗಿ ಕೆ.ಎಲ್.ಇ. ಸಂಸ್ಥೆಯ ಶ್ರೀ.ಪ್ರಭಾಕರ್ ಕೋರೆಯವರು ಈ ರೀತಿಯ ಜ್ಞಾನ ಭಂಡಾರದ ಪ್ರದರ್ಶನವನ್ನು ಬೆಳಗಾವಿಯಲ್ಲಿ ಆಯೋಜಿಸಿದ್ದಕ್ಕಾಗಿ ಶೆಟ್ಟರ್ ರವರಿಗೆ ಮತ್ತು ಪ್ರಯಾಸ್ ಎಕ್ಸಿಬಿಷನ್ನಿನ ಶ್ರೀ.ವನೀಶ್ ಗುಪ್ತಾರವನ್ನು ಶ್ಲಾಘಿಸಿ ಗೌರವಿಸಿದರು. ಇದರ ಹೊರತಾಗಿ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾದಿಂದ ಭಾರತವು ಸರ್ವಾಂಗೀಣವಾಗಿ ವಿಕಸಿತಗೊಳ್ಳುತ್ತಿದೆ ಎಂದು ಹೇಳಿದರು. ಅದರಂತೆಯೇ, ಶಾಸಕರಾದ ಶ್ರೀ.ಅಭಯ ಪಾಟೀಲರು ಈ ಪ್ರದರ್ಶನವು ನಮ್ಮ ನಗರದ ವಿದ್ಯಾರ್ಥಿಗಳ ಜ್ಞಾನಭಂಡಾರಕ್ಕೆ ಅಮೂಲ್ಯ ಪ್ರೋತ್ಸಾಹನ ಕೊಟ್ಟಂತಾಗಿದೆ ಎಂದು ಹೇಳಿದರು.
ಮೊದಲಿಗೆ ದಿಶಾ ಶೆಟ್ಟಿ ಇವರು ಭರತನಾಟ್ಯಂ ಮೂಲಕ ಮನಮೋಹಕವಾಗಿ ಶ್ರೀ ಗಣೇಶನಿಗೆ ವಂದಿಸುತ್ತ ನರ್ತನ ಮಾಡಿದರು. ಡಾ. ರಾಜೇಶ್ವರಿ ಹಿರೇಮಠ ಇವರ ‘ಬೆಳ್ಳಿಚುಕ್ಕಿ’ ತಂಡವು ಕರ್ನಾಟಕದ ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಸುನಿತಾ ದೇಸಾಯಿ ಅವರು ಸೂತ್ರ ಸಂಚಾಲನೆ ಮಾಡಿದರೆ, ಪ್ರಯಾಸನ ಜ್ಯೋತಿಕಾ ಇವರು ವಂದನಾರ್ಪಣೆ ತಿಳಿಸಿದರು.