ಧಾರಾಕಾರ ಮಳೆಯ ಮಧ್ಯೆಯೇ ವಾರ್ಡ ಭೆಟ್ಟಿ

Oplus_16777216

ಸಮಸ್ಯೆ ಆಲಿಸಿದ ಉಪಮೇಯರ್
ಧಾರಾಕಾರ ಮಳೆಯ ಮಧ್ಯೆಯೇ ವಾರ್ಡ ಭೆಟ್ಟಿ

ಬೆಳಗಾವಿ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಮಧ್ಯೆಯೇ ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ವಾಣಿ ಜೋಶಿ ಅವರು ದ್ವಿಚಕ್ರ ವಾಹನದಲ್ಲಿ ವಾರ್ಡ ಸಂಚಾರ ನಡೆಸಿದರು.

ಬೆಳ್ಳಂ ಬೆಳಿಗ್ಗೆಯೇ ವಾಡರ್ಿನಲ್ಲಿ ದೊಡ್ಡ ಮರವೊಂದು ಬಿದ್ದಿದೆ ಎನ್ನುವ ಸುದ್ದಿ ತಿಳಿದ ತಕ್ಷಣ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಭೆಟ್ಟಿ ನೀಡಿ ಅದನ್ನು ತಕ್ಷಣ ತೆರವುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಧಾರಾಕಾರದ ಮಳೆಯ ನಡುವೆಯೇ ದ್ವಿಚಕ್ರ ವಾಹನದ ಮೇಲೆ ವಾರ್ಡನ ಭಾಗ್ಯನಗರ, ಮತ್ಯುಂಜಯ ನಗರ, ಎಸ್ವಿ ರೋಡ್ ಸೇರಿದಂತೆ ಮತ್ತಿತರ ಕಡೆಗೆ ಸಂಚರಿಸಿದರು.
ಈ ಸಂದರ್ಭದಲ್ಲಿ ಎಸ್ವಿ ರಸ್ತೆ ಮೇಲೆ ಧರೆಗುರುಳಿದ್ದ ಮರವನ್ನು ಸಂಬಂಧಪಟ್ಟವರಿಂದ ತೆರವುಗೊಳಿಸಿ ವಾಹನ ಸಂಚಾರ ಸುಗಮವಾಗಿಸುವಂತೆ ನೋಡಿಕೊಂಡರು.

ಈ ಸಂದರ್ಭದಲ್ಲಿ ನಗರಸೇವಕ ಅಭಿಜಿತ್ ಜವಳಕರ ಕೂಡ ಉಪಮೇಯರ್ ಜತೆಗಿದ್ದು, ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಸಮರ್ಪಕವಾಗಿ ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!