ತೆಗ್ಗು ಮುಚ್ಚದಿದ್ದರೆ ಕ್ರಿಮಿನಲ್ ಕೇಸ್ – ಶಾಸಕ ಅಭಯ
ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕರ ಕಿಡಿಕಾರಾಟ, ಎಲ್ಅಂಡ್ಟಿ ಮತ್ತು ಮೆಘಾ ಗ್ಯಾಸ ಅಧಿಕಾರಿಗಳ ವಿರುದ್ಧ ಆಕ್ರೋಶ ಬೆಳಗಾವಿ, ಜೂನ್ 17:ಮಳೆಗಾಲದ ಮುನ್ನೋಟದಲ್ಲೇ ನಗರ ರಸ್ತೆಗಳ ಮಧ್ಯೆ ಬಿದ್ದಿರುವ ತೆಗ್ಗುಗಳು ಪ್ರಾಣಹಾನಿಗೆ ಆಹ್ವಾನ ನೀಡುತ್ತಿವೆ ಎಂಬ ಕಾರಣದಿಂದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿಗ್ರಹದ ಶಬ್ದಗಳಲ್ಲಿ ಅಧಿಕಾರಿಗಳ ವಿರುದ್ಧ ಗುಡುಗಿದರು. “ತೆಗ್ಗು ಮುಚ್ಚದಿದ್ದರೆ, ಸಾರ್ವಜನಿಕರ ಜೀವಕ್ಕೆ ಏನೇನಾದರೂ ಆದರೆ ತಕ್ಷಣ ಎಂಜಿನಿಯರ್ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು…