“ಬಿಡಿಸಿಸಿ ಬ್ಯಾಂಕ್… ರೈತರ ಕೈಯಲ್ಲಿ ಅಧಿಕಾರ!”
ಬಾಲಚಂದ್ರ ಜಾರಕಿಹೊಳಿ ಗಂಭೀರ ಎಚ್ಚರಿಕೆ: ‘ಇದು ಕೇವಲ ಚುನಾವಣೆ ಅಲ್ಲ, ರೈತರ ಆತ್ಮಗೌರವದ ಹೋರಾಟ!’
ಬೆಳಗಾವಿ:
“ಡಿಸಿಸಿ ಬ್ಯಾಂಕ್ ಚುನಾವಣೆಯು ಯಾವ ರಾಜಕೀಯ ಪಕ್ಷದದ್ದಲ್ಲ. ಇದು ರೈತರ ನಂಬಿಕೆಯ ತಾಣ, ಅವರ ಕನಸುಗಳನ್ನು ನೆರವೇರಿಸುವ ಹೋರಾಟ. ಈ ಬಾರಿ ಅಧಿಕಾರ ರೈತರ ಕೈಗೆ ಹೋಗಬೇಕು. ರೈತರ ಬ್ಯಾಂಕ್ ಆಗಿ ಹುಟ್ಟುಹಾಕುತ್ತಿದ್ದೇವೆ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು..
ಬೆಳಗಾವಿ ನಗರದ ಧರ್ಮನಾಥ ಭವನದಲ್ಲಿ ಬೆಳಗಾವಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಶಾಖಾ ಪ್ರತಿನಿಧಿಗಳ ಸಮ್ಮುಖದಲ್ಲಿ ಶುಕ್ರವಾರ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.
ಅಕ್ಟೋಬರ್ 19ರಂದು ನಡೆಯುವ ಬಿಡಿಸಿಸಿ ಚುನಾವಣೆಗೆ ನಾನಾ ಪಕ್ಷದ ರೈತಪರ ನಾಯಕರು ಒಂದಾಗಿ ಮುಂದೆ ಬರುತ್ತಿದ್ದಾರೆ ಎನ್ನುವ ಸುದ್ದಿ ಈಗ ಪ್ರಜ್ಞಾವಂತರಲ್ಲಿ ಭಾರೀ ಸ್ಪಂದನೆ ಹುಟ್ಟಿಸಿದೆ.

ಜಾರಕಿಹೊಳಿ ಭಾಷಣ ಹೈಲೈಟ್
“₹6000 ಕೋಟಿ ಠೇವಣಿ ಈಗಾಗಲೇ ನೋಂದಾಯಿತ. ಗುರಿ: ₹8000 ಕೋಟಿ.”
“ನಬಾರ್ಡ್ ಜೊತೆ ಮಾತುಕತೆ… ರೈತರಿಗೆ ಹೆಚ್ಚುವರಿ ಬಡ್ಡಿ ನೀಡುವ ಯೋಜನೆ.
“₹3400 ಕೋಟಿ ಶೂನ್ಯ ಬಡ್ಡಿದರದ ಬೆಳೆಸಾಲ ಈಗಾಗಲೇ ಬಿಡುಗಡೆ – ರಾಜ್ಯದಲ್ಲೇ ಮೇಳನದ ಪ್ರಮಾಣ.”
“ಟ್ರ್ಯಾಕ್ಟರ್, ಗೃಹ, ವಾಹನ ಸಾಲ ಮುಂದಿನ ಟಾರ್ಗೆಟ್.”

“ರಾಜಕೀಯ ಪಕ್ಷದ ಹೆಸರಿಲ್ಲ… ಆದರೆ ಪ್ಯಾನಲ್ ಹಿಂದೆ ಎಲ್ಲರ ಒಗ್ಗಟ್ಟು ಇದೆ!”
“ಬಿಡಿಸಿಸಿ ಬ್ಯಾಂಕ್ ಈಗ ರೈತರ ತಮ್ಮ ಬ್ಯಾಂಕ್ ಆಗಬೇಕು. ನಮ್ಮ ಗೆಲುವು, ರೈತರ ಗೆಲುವು. ಇದು ಕೇವಲ ಚುನಾವಣೆ ಅಲ್ಲ – ಇದು ರೈತರ ಧ್ವನಿಗೆ ಸ್ಥಿರತೆ ಕೊಡುವ ಹೋರಾಟ!”
– ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಬೆಮುಲ್ ಅಧ್ಯಕ್ಷ
“ಅಪ್ಪಾಸಾಹೇಬ ಕುಲಗೋಡೆ ಅಧ್ಯಕ್ಷರಾಗಿ ಬಂದ ಬಳಿಕವೇ ₹280 ಕೋಟಿ ಠೇವಣಿ ಹೆಚ್ಚಾಗಿದೆ. ನಂಬಿಕೆಗೆ ಹೊಸ ಭಾಷ್ಯ ಇದಾಗಿದೆ. ಈಗ ರೈತರ ಸಾಲ ಮರುಪಾವತಿ, ಠೇವಣಿ ಮೇಲ್ವಿಚಾರಣೆ, ನವೀಕೃತ ಯೋಜನೆಗಳೊಂದಿಗೆ ಬಿಡಿಸಿಸಿ ಬ್ಯಾಂಕ್ ಇನ್ನಷ್ಟು ಬಲಿಷ್ಠವಾಗುತ್ತಿದೆ. ಎಂದರು.

ಅಪ್ಪಾಸಾಹೇಬ ಕುಲಗೋಡೆ, ಮಾಜಿ ಶಾಸಕ ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ, ಶಿವಾಜಿ ಸುಂಠಕರ, ರಾಹುಲ್ ಸತೀಶ ಜಾರಕಿಹೊಳಿ, ರಾಜೇಂದ್ರ ಅಂಕಲಗಿ, ವಿಕ್ರಮ ಇನಾಂದಾರ, ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು..