
ಮಳೆಯಲ್ಲೇ ಆಯುಕ್ತರ ಸಿಟಿ ರೌಂಡ್..!
ಬೆಳಗಾವಿ, ಗಡಿನಾಡ ಬೆಳಗಾವಿಯಲ್ಲಿ ಮಳೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ, ಮಹಾನಗರ ಪಾಲಿಕೆಯ ಆಯುಕ್ತೆ ಶುಭಾ ಬಿ ಅವರ ಕಾರ್ಯಶೈಲಿ ಸಾರ್ವಜನಿಕ ಶ್ಲಾಘೆಗೆ ಪಾತ್ರವಾಗುತ್ತಿದೆ. ಆಯುಕ್ತರು ರೇನಕೋಟ್ ಧರಿಸಿ ಮಳೆಯಲ್ಲಿಯೇ ಶಾಂತಿನಗರದಿಂದ ಶಹಾಪುರದವರೆಗೆ ವಿವಿಧ ತಗ್ಗು ಪ್ರದೇಶಗಳಲ್ಲಿ ಭೇಟಿ ನೀಡಿ ವೈಯಕ್ತಿಕವಾಗಿ ವೀಕ್ಷಣೆ ನಡೆಸಿದರು. ಭಾರೀ ಮಳೆಯಿಂದಾಗಿ ಹಲವೆಡೆ ಚರಂಡಿಗಳು ಹರಿದೋಡದೆ ನೀರು ನಿಂತಿದ್ದು, ಕೆಲ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಾಂತಿನಗರ, ಮರಾಠಾ ಕಾಲೋನಿ, ನಾನಾವಾಡಿ, ಕೊನವಾಳ ಗಲ್ಲಿ ಮುಂತಾದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ…