ರಾಯಬಾಗಕ್ಕೆ ಹೊಸ ಕ್ರೀಡಾಂಗಣದ ಭರವಸೆ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಧೃಡ ನಿಲುವು
– 25 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ; ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಹೊಸ ವೇದಿಕೆ
ರಾಯಬಾಗ:
“ಕೇವಲ ಒಂದು ವರ್ಷದಲ್ಲಿ ಅಭಿವೃದ್ಧಿಗೆ ನಂಬಿಕೆ ತುಂಬಿದ ಪ್ರಥಮ ಹೆಜ್ಜೆಗಳು ಇಡಲಾಗಿದೆ. ಮುಂದಿನ ಹಂತಗಳಲ್ಲಿ ಇದು ಬಹುಮುಖ್ಯ ಮಾದರಿಯ ಪ್ರಗತಿಪಥವಾಗಲಿದೆ,” ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮಂಗಳವಾರ ರಾಯಬಾಗ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಹೇಳಿದರು.

ಎಸ್ಸಿ ಕಾಲೋನಿಗಳಲ್ಲಿನ ರಸ್ತೆಗಳ ಅಭಿವೃದ್ಧಿಗೆ ಎಸಿಪಿ, ಟಿಎಸ್ಪಿ ಯೋಜನೆ ಅಡಿಯಲ್ಲಿ ಸುಮಾರು ₹8 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಸಂಸದೆ, ಗ್ರಾಮೀಣ ಕ್ರೀಡಾಪಟುಗಳಿಗೆ ಸಮರ್ಪಿತವಾಗಿ ಶೀಘ್ರವೇ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುವ ಯೋಜನೆಯನ್ನೂ ಘೋಷಿಸಿದರು.
ಗ್ರಾಮೀಣ ಪ್ರತಿಭೆಗೂ ವೇದಿಕೆ ಬೇಕು?

“ಇಲ್ಲಿನ ಮಕ್ಕಳು ಕ್ರೀಡೆ, ಶಿಕ್ಷಣ ಕ್ಷೇತ್ರಗಳಲ್ಲಿ ಮೆರೆವ ಶಕ್ತಿಯುಳ್ಳವರು. ಆದರೆ ಅವಕಾಶವಿಲ್ಲ. ಈ ಹಿನ್ನೆಲೆ, ರಾಯಬಾಗ ಕ್ಷೇತ್ರದೊಳಗೆ ಸಮಗ್ರ ಕ್ರೀಡಾ ತಾಣವೊಂದನ್ನು ನಿರ್ಮಿಸುತ್ತೇವೆ. ಇದರಿಂದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸ್ಫೂರ್ತಿ ತೋರಬಹುದು,” ಎಂದು ಭರವಸೆ ನೀಡಿದ ಸಂಸದೆ ಪ್ರಿಯಂಕಾ, ಈ ಯೋಜನೆಗೆ ಹಿರಿಯರ ಮಾರ್ಗದರ್ಶನವೂ ಪಡೆಯಲಾಗುವುದು ಎಂದು ತಿಳಿಸಿದರು.
ಅನುದಾನ, ಕಾಮಗಾರಿ, ಆಶಯಗಳ ದಿಕ್ಕು
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಈವರೆಗೆ ₹25 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವ ಸಂಸದೆ, ರಸ್ತೆ ಅಭಿವೃದ್ಧಿ, ಮೂಲಸೌಕರ್ಯ ಹಮ್ಮಿಕೊಳ್ಳುವಿಕೆ, ಗ್ರಾಮೀಣ ಸಸಕ್ತೀಕರಣವೆಂಬ ದಿಕ್ಕಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ

ನಸಲಾಪುರ, ಬಾವನ-ಸವದತ್ತಿ, ಕರೋಶಿ ಬಂಬಲವಾಡ, ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಸಂಪರ್ಕ ವೃದ್ಧಿ ಇತ್ಯಾದಿ ಗ್ರಾಮೀಣ ಬಡಾವಣೆಗಳಲ್ಲಿನ ಯೋಜನೆಗಳಿಗೆ ತಲಾ ₹1 ಕೋಟಿಯಿಂದ ₹3 ಕೋಟಿ ರೂ. ಅನುದಾನ ಮೀಸಲಾಗಿದೆ.
” ಇದು ನನ್ನ ಮನೆ ಕ್ಷೇತ್ರ –

“ಚಿಕ್ಕೋಡಿ ಲೋಕಸಭಾ ಕ್ಷೇತ್ರ ನನ್ನ ಹುಟ್ಟೂರಿನ ಭಾಗ. ಈ ಭಾಗದ ಮನೆಮಗಳು ಎಂಬ ನಿಭಾಯಿಸುವ ಜವಾಬ್ದಾರಿಯ ಅರಿವಿದೆ. ನಿಮ್ಮ ಆಶೀರ್ವಾದದಿಂದ ಸಂಸದೆ ಆಗಿರುವೆ. ಅದಕ್ಕೆ ತಕ್ಕಂತೆ ಕ್ರಿಯಾಶೀಲವಾಗಿರುವೆ. ಕ್ರೀಡಾ, ಶಿಕ್ಷಣ ಕ್ಷೇತ್ರಗಳನ್ನು ನವೀಕರಿಸಲು ನಿರಂತರ ಶ್ರಮಿಸುತ್ತೇನೆ,” ಎಂದ ಅವರು, ಕ್ಷೇತ್ರದ ಮತದಾರರ ನಂಬಿಕೆಗೆ ಕೃತಜ್ಞತೆ ಸಲ್ಲಿಸಿದರು.
ಸಾಮೂಹಿಕ ಪೂರಕ ಶಕ್ತಿಯು ಕಾರ್ಯಕ್ರಮದ ಶಕ್ತಿಕೇಂದ್ರ
ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮಹಾವೀರ ಮೋಹಿತೆ, ಮುಖಂಡರಾದ ರಾಮಪ್ಪ ಪೂಜಾರಿ, ಸುರೇಶ ಶಾಮ್ ರೇವಡೆ, ಶಂಕರ್ ಪಾಟೀಲ, ವೃಷಭ ಪಾಟೀಲ, ವಿನಯ ಕುಂಬಾರ ಸೇರಿದಂತೆ ಅನೇಕ ಪ್ರಭಾವಿ ಸ್ಥಳೀಯರು ಉಪಸ್ಥಿತರಿದ್ದರು. ಗ್ರಾಮಸ್ಥರ ಸಹಭಾಗಿತ್ವವೂ ಉತ್ಸಾಹಭರಿತವಾಗಿತ್ತು.