Headlines

ಕಸ ಶುಲ್ಕ ವಸೂಲಿಯಲ್ಲಿ ಗೋಲ್ ಮಾಲ್..!

ಪಾಲಿಕೆ ಸ್ಥಾಯಿ ಸಮಿತಿ ಸಭೆಯಲ್ಲಿ ಸದ್ದು ಮಾಡಿದ ಕಸ ಶುಲ್ಕ ವಸೂಲಿ ಗೋಲ್ ಮಾಲ್ ದಾಖಲೆ ಸಮೇತ ಹಗರಣ ಪ್ರಸ್ತಾಪಿಸಿದ ಉಪಮೇಯರ್ ವಾಣಿ ಜೋಶಿ. ತನಿಖೆಗೆ ಸಭೆಯಲ್ಲಿ‌ ಅಸ್ತು ಎಂದ ಅಧ್ಯಕ್ಷ ಶ್ರೀಶೈಲ ಕಾಂಬಳೆ ಕಸ ಶುಲ್ಕ ವಸೂಲಾತಿಯಲ್ಲಿ ಗೋಲ್ ಮಾಲ್ ಬೆಳಗಾವಿ. ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹಣೆಯಲ್ಲಿ ನಡೆಯುತ್ತಿರುವ ಹಗರಣವನ್ನು ಪಾಲಿಕೆಯ ಉಪ ಮೇಯರ್ ವಾಣಿ ಜೋಶಿ ಅವರು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿಂದು ಸಾಕ್ಷಾಧಾರದೊಂದಿಗೆ ಬಹಿರಂಗಪಡಿಸಿದರು, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಕಾಂಬಳೆ ಅಧ್ಯಕ್ಷತೆಯಲ್ಲಿ…

Read More

ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲೇಕೆ ಕೈ ನಾಟಕ..!?

`ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲೇಕೆ ನಾಟಕ’ಬೆಳಗಾವಿ. ಪೆಹಲ್ಗಾಂದಲ್ಲಿ ನಡೆದ ಹಿಂದೂಗಳ ನರಮೇಧದ ನಂತರ ಇಡೀ ದೇಶವ್ಯಾಪಿ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಿದ್ದಾರೆ, ಅಂತಹುದರಲ್ಲಿ ಕಾಂಗ್ತೆಸ್ಸಿಗರಿಗೆ ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲಿ ಬಂದು ಈ ರೀತಿ ನಾಟಕ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಪ್ರಶ್ನೆ ಮಾಡಿದ್ದಾರೆ.ನಗರದಲ್ಲಿಂದು ಸಂಜೆ ತುತರ್ು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು, ಅವರೂ ಸಹ ಅಲ್ಲಿ ಹೋಗಿ ಕಲ್ಲು ಹೊಡೆದಿಲ್ಲ. ಬದಲಾಗಿ ಸಿಎಂ ಅವರು ಪಾಕಿಸ್ತಾನ…

Read More

ಮೇಲ್ಸೇತುವೆಗೆ ಬಸವೇಶ್ವರ ಹೆಸರು..!

ಬೆಳಗಾವಿ.ಬಸವ ಜಯಂತಿಯ ಹಿನ್ನೆಲೆಯಲ್ಲಿ ಇಲ್ಲಿನ ರೈಲ್ವೆ ಮೇಲ್ವೇತುವೆಗೆ ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ವೇತುವೆ ಎಂದು ನಾಮಕರಣ ಮಾಡಿ ರವಿವಾರ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಸಂಸದ ಜಗದೀಶ ಶೆಟ್ಟರ, ದಕ್ಷಿಣ ಶಾಸಕ ಅಭಯ ಪಾಟೀಲ, ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರಸೇವಕರಾದ ನುಮಂತ ಕೊಂಗಾಲಿ, ರಾಜಶೇಖರ ಡೋಣಿ, ರತ್ನಪ್ರಭಾ ಬೆಲ್ಲದ, ಎಂ.ಬಿ. ಝೀರಲಿ, ಈರಣ್ಣ ದೇಯನ್ನವರ, ಬಸವರಾಜ್ ರೊಟ್ಟಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಸಕ ಅಭಯ…

Read More

ಸಾಕು ಪ್ರಾಣಿಗಳಿಂದ ಮನಸ್ಸಿಗೆ ನೆಮ್ಮದಿ

ಸೋಲ್ಮೇಟ್ಸ್ ಪೆಟ್ ಹಾಸ್ಪಿಟಲ್’ ಉದ್ಘಾಟನೆ`ಸಾಕು ಪ್ರಾಣಿಗಳಿಂದ ಮಾನಸಿಕ ಶಾಂತಿ‘ಬೆಳಗಾವಿ.ಸಾಕು ಪ್ರಾಣಿಗಳು ಇಂದು ಕೇವಲ ಮನರಂಜನೆಗಾಗಿ ಅಲ್ಲ, ಅವು ಮನೆಯವರಾಗಿ, ಜೀವನದ ಅಗತ್ಯ ಭಾಗವಾಗಿ ರೂಪುಗೊಂಡಿವೆ ಎಂದು ಡಾ ಪಶುವೈದ್ಯ ಡಾ. ಪಿ.ಎಂ. ಪಂಪಪತಿ ಹೇಳಿದರು.ನಗರದಲ್ಲಿ ಭಾನುವಾರ ‘ಸೋಲ್ಮೇಟ್ಸ್ ಪೆಟ್ ಹಾಸ್ಪಿಟಲ್’ ಉದ್ಘಾಟಿಸಿ ಮಾತನಾಡಿದರು.ಆಧುನಿಕ ಜೀವನದ ಒತ್ತಡದಲ್ಲಿ ಇರುವವರಿಗಾಗಿ ಸಾಕು ಪ್ರಾಣಿಗಳು ಪ್ರಮುಖವಾಗಿವೆ ಎಂದರು, ಶ್ವಾನಗಳು ಮಾನವನ ಆತಂಕ ನಿವಾರಕವಾಗಿದ್ದು, ಮಕ್ಕಳಿಂದ ಹಿರಿಯರ ತನಕ ಎಲ್ಲರ ಬದುಕಿಗೆ ಸಂತೋಷ, ಉತ್ಸಾಹ ತುಂಬಿಸುತ್ತಿವೆ. ತಜ್ಞರಾಗಿ, ಉದ್ಯೋಗಸ್ಥರಾಗಿ, ರಾಜಕಾರಣಿಗಳಾಗಿ ಎಲ್ಲರಿಗೂ ಮನೆಯಲ್ಲಿ…

Read More

ಸ್ಮಶಾನ ಅಭಿವೃದ್ಧಿಗೆ ಚಾಲನೆ

ಸ್ಮಶಾನ ಅಭಿವೃದ್ಧಿಗೆ ಚಾಲನೆ ಬೆಳಗಾವಿ. ಅನಗೋಳ ಸ್ಮಶಾನ ಎಂದೇ ಹೆಸರಾದ ಚಿದಂಬರ ನಗರದಲ್ಲಿರುವ ಸ್ಮಶಾನದ ಸಮಗ್ರ ಅಭಿವೃದ್ಧಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು. ಈಗಾಗಲೇ ಹತ್ತು ಲಕ್ಷ ರೂ ವೆಚ್ಚದ ಕಾಮಗಾರಿಗೆ ಪೂಜೆ ಸಲ್ಲಿಸಲಾಯಿತು. ಅಷ್ಟೇ ಅಲ್ಲ ಇನ್ನುಳಿದ ಕಾಮಗಾರಿಗಳನ್ನು ತೆಗೆದುಕೊಳ್ಳಿ. ಅದಕ್ಕೆ ಇನ್ನಷ್ಡು ಅನುದಾನ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಮಹಾನಗರ ಪಾಲಿಕೆಯ ಉಪಮೇಯರ್ ವಾಣಿ ವಿಲಾಸ ಜೋಶಿ, ನಗರಸೇವಕ ಜಯಂತ ಜಾಧವ ಮುಂತಾದವರು ಹಾಜರಿದ್ದರು.

Read More

ಅನುಭವ ಮಂಟಪ-ಬಸವಾದಿ ಶರಣರ ವೈಭವ ಯಾತ್ರೆ

ಅನುಭವ ಮಂಟಪ- ಬಸವಾದಿ ಶರಣರ “ವೈಭವ ರಥಯಾತ್ರೆ” ಬೆಳಗಾವಿ:ಬಸವಣ್ಣನವರ ಭಕ್ತಿಗೀತೆಗಳು ಮತ್ತು ಚಿಂತನೆಗಳನ್ನು ದೇಶಾದ್ಯಾಂತ ಪ್ರಚಾರಪಡಿಸುವ ಉದ್ದೇಶದಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಬಾಗಲಕೋಟೆ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ ಇವರ ಸಹಯೋಗದಲ್ಲಿ “ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆ” ಅನ್ನು ಹಮ್ಮಿಕೊಂಡಿದ್ದವು. ಈ ವೈಭವ ರಥಯಾತ್ರೆ, ಬೆಳಗಾವಿ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಬೆಳಗಾವಿ ಮಹಾ ಪೌರರಾದ ಮಂಗೇಶ್ ಪವಾರ್, ಉಪ…

Read More

ಕೇಂದ್ರದ ವಿರುದ್ಧ ಹೋರಾಟ- ಬೆಳಗಾವಿಯಲ್ಲಿ ಕೈ ಶಕ್ತಿ ಪ್ರದರ್ಶನ

ಬೆಲೆ ಏರಿಕೆಯ ಬೆಳಗಾವಿಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರತಿಭಟನೆ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಆಗಮನ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಿದ್ಧತೆ ಬಲು ಜೋರು ಬೆಳಗಾವಿ,:ಕೇಂದ್ರ ಸರ್ಕಾರದ ಧೋರಣೆಗಳು, ಹಠಾತ್ ಬೆಲೆ ಏರಿಕೆಗಳು, ಮತ್ತು ಜನಸಾಮಾನ್ಯರ ಬದುಕಿನಲ್ಲಿ ಮೂಡಿದ ತೀವ್ರ ಅಸಮಾಧಾನವನ್ನು ಸಂಘಟಿತಗೊಳಿಸಲು ಕಾಂಗ್ರೆಸ್ ಈ ಬಾರಿ ಬೆಳಗಾವಿಯನ್ನು ವೇದಿಕೆಯಾಗಿಸಿಕೊಳ್ಳುತ್ತಿದೆ. ಬೃಹತ್ ಪ್ರತಿಭಟನೆಗೆ ನಾಳೆ (ದಿ.28) ನಗರದ ಸಿಪಿಎಡ್ ಮೈದಾನ ಸಜ್ಜಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿ ವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರನ್ನು…

Read More

ಶ್ರೀಕೃಷ್ಣನ ಜೀವನವೇ ಸರ್ವತ್ಮಕ ನೀತಿಯ ದೀಪಸ್ತಂಭ…!

ಶ್ರೀಕೃಷ್ಣನ ಜೀವನವೇ ಸರ್ವತ್ಮಕ ನೀತಿಯ ದೀಪಸ್ತಂಭ ಬೆಳಗಾವಿ:“ಶ್ರೀಕೃಷ್ಣನು ಕೇವಲ ಪುರಾಣದ ಪಾತ್ರವಲ್ಲ; ಅವನು ಪರಿಪೂರ್ಣ ವ್ಯಕ್ತಿತ್ವದ ಜೀವಂತ ದೀಪ,” ಎಂದು ಶ್ರೀರಾಮಜನ್ಮಭೂಮಿ ನ್ಯಾಸ (ಅಯೋಧ್ಯೆ) ಖಜಾಂಚಿ ಹಾಗೂ ಗೀತಾಪರಿವಾರ ಸಂಸ್ಥಾಪಕರಾದ ಶ್ರೀ ಗೋವಿಂದ ದೇವ ಗಿರಿ ಮಹಾರಾಜ್ ಉಜ್ವಲವಾಗಿ ಹೇಳಿದ್ದಾರೆ. ಎಸಿಪಿಆರ್ ಸಂಸ್ಥೆ ಆಯೋಜಿಸಿದ್ದ ಮೂರು ದಿನಗಳ ಉಪನ್ಯಾಸಮಾಲಿಕೆಯ ಎರಡನೇ ದಿನದಂದು “ಶ್ರೀಕೃಷ್ಣ ನೀತಿ” ವಿಷಯದ ಕುರಿತು ಮಹಾರಾಜ್ ಉಪನ್ಯಾಸ ನೀಡಿದರು. ಅವರು ತಿಳಿಸಿದಂತೆ, “ಶ್ರೀಕೃಷ್ಣ ಪರಿಪೂರ್ಣ ಅವತಾರ. ಅವನ ಗೀತೆ ಕೇವಲ ಓದುವ ಶಾಸ್ತ್ರವಲ್ಲ; ಆತ್ಮಾನುಭವದ…

Read More

ಭದ್ರತಾ ಕಾರ್ಯಾಚರಣೆಗಳ ನೇರಪ್ರಸಾರ ನಿಷೇಧಿಸಲು ಕೇಂದ್ರದ ಮಹತ್ವದ ಸಲಹೆ

ಭದ್ರತಾ ಕಾರ್ಯಾಚರಣೆಗಳ ನೇರಪ್ರಸಾರ ನಿಷೇಧಿಸಲು ಕೇಂದ್ರದ ಮಹತ್ವದ ಸಲಹೆ — ವರದಿ: ಚಟುವಟಿಕೆಗಳಿಗೆ ಮೀರುನುಡಿ ಹಾಕಿದ ಮಾಹಿತಿ ಮತ್ತು ಪ್ರಸಾರ ತಡೆಯುವ ಸೂಚನೆ ನವದೆಹಲಿ: ರಾಷ್ಟ್ರ ಭದ್ರತೆ ಬಗ್ಗೆ ಗಂಭೀರ ತಾಕೀತು ನಡೆಸಿದ ಕೇಂದ್ರ ಸರ್ಕಾರ, ದೇಶದ ಎಲ್ಲಾ ಮಾಧ್ಯಮ ಚಾನಲ್‌ಗಳು, ಸುದ್ದಿಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ರಕ್ಷಣಾ ಕಾರ್ಯಾಚರಣೆಗಳು ಹಾಗೂ ಭದ್ರತಾ ಪಡೆಗಳ ಚಟುವಟಿಕೆಗಳ ನೇರ ಪ್ರಸಾರವನ್ನು ತಕ್ಷಣ ತಡೆಯಲು ಕಟ್ಟುನಿಟ್ಟಾದ ಸಲಹೆ ನೀಡಿದೆ. ಮಾಹಿತಿಯ ಮತ್ತು ಪ್ರಸಾರ ಸಚಿವಾಲಯದಿಂದ ಜಾರಿ ಮಾಡಲಾದ ಈ…

Read More

ಯಳ್ಳೂರು ಹೋರಾಟದ ಭೂಮಿ- ಪವಾರ್

ಬೆಳಗಾವಿ“ಯಳ್ಳೂರು’ ಕೇವಲ ಒಂದು ಗ್ರಾಮವಲ್ಲ, ಇದು ಹೋರಾಟದ ಭೂಮಿ, ಶೈಕ್ಷಣಿಕ ಕ್ರಾಂತಿಯ ಪುಟಗಳನ್ನು ಬರೆದ ಸ್ಥಳ ಎಂದು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹೇಳಿದರು. ಯಳ್ಳೂರಿನ ಸರ್ಕಾರಿ ಮರಾಠಿ ಮಾದರಿ ಶಾಲೆಯ ಶತಕೋತ್ತರ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.“ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಈ ಗ್ರಾಮಕ್ಕೆ ವಿಶೇಷ ಮಹತ್ವವಿತ್ತು. ಇಲ್ಲಿ ಜನರು ಅನ್ಯಾಯದ ವಿರುದ್ಧ ಧೈರ್ಯದಿಂದ ಎದ್ದು ನಿಂತರು. ಈ ಹೋರಾಟದ ಆತ್ಮವನ್ನೇ ಶಾಲೆಯು ತಮ್ಮ ಮಕ್ಕಳಿಗೆ ಶಿಕ್ಷಣ ರೂಪದಲ್ಲಿ ನೀಡಿತು ಎಂದರು. ಯಳ್ಳೂರಿನ…

Read More
error: Content is protected !!