ಪಾಲಿಕೆಯಲ್ಲಿ ಹಮ್ ಭಿ ಚುಪ್.. ತುಮ್ ಭಿ ಚುಪ್..!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಏನು ಪ್ರಶ್ನೆ ಮಾಡಬೇಕು ಅದನ್ನು ಮಾಡಲ್ಲ.ಉಳಿದ ವಿಚಾರ ತಮಗೆ ಬಿಟ್ಟಿದ್ದು..! ಸಧ್ಯ ಹೇಗಾಗಿದೆ ಎಂದರೆ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿಯೂ ಕೂಡ ಎರಡು ಬಗೆಯ ನ್ಯಾಯ ಮಾಡಿದಂತಿದೆ. ಸಣ್ಣವರು ತಪ್ಪು ಮಾಡಿದರೆ ಕಠಿಣ ಕ್ರಮ. ಅದೇ ದೊಡ್ಡವರು ದೊಡ್ಡ ದೊಡ್ಡ ತಪ್ಪು ಮಾಡಿದರೂ ಬರೀ ಒಂದು ನೋಟೀಸ್.‌! ಮುಖ್ಯವಾದ ಸಂಗತಿ ಎಂದರೆ, ಸಿಬ್ಬಂದಿಯವರೇ ಪಾಲಿಕೆಗೆ ದ್ರೋಹ ಬಗೆಯುವದು ಎಂದರೆ ಅದು ಉಂಡ ಮನೆಗೆ ದ್ರೋಹ…

Read More

ಭರತನಾಟ್ಯ- ರಾಜ್ಯಮಟ್ಟಕ್ಕೆ ವಿಜಯಲಕ್ಷ್ಮೀ

.ಬೆಳಗಾವಿ:- ಸ್ಥಳೀಯ ಬಿ.ಇ. ಎಜುಕೇಶನ್ ಸೊಸೈಟಿಯ ಬಿ.ಕೆ.ಮಾಡೇಲ್ ಆಂಗ್ಲ ಮಾಧ್ಯಮ ಶಾಲೆಯ 10ನೇಯ ತರಗತಿಯ ವಿಧ್ಯಾರ್ಥಿನಿಯಾದ ವಿಜಯಲಕ್ಷ್ಮಿ ರವಿಕುಮಾರ ಪೂಜಾರಿ ಇವಳು ಪ್ರಸಕ್ತ ಸಾಲಿನ ಜನೇವರಿ 10ರಂದು ನಗರದ ಮಹಾಂತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭರತನಾಟ್ಯ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ. ಪ್ರಥಮ ಸ್ಥಾನಗಳಿಸುವುದರ ಜೊತೆಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ… ಈ ಪ್ರತಿಭೆಗೆ ಹಾಗೂ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕವೃಂದ ವಿಧ್ಯಾರ್ಥಿಬಳಗ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ…

Read More

6 ಕೋಟಿ ಲಾಭದತ್ತ ಬಾಲಚಂದ್ರ ಚಿತ್ತ…!

ಬೆಳಗಾವಿ. ಒಂದಾನೊಂದು ಕಾಲದಲ್ಲಿ ಬರೀ ವಿವಾದದಿಂದಲೇ ಹೆಸರು ಮಾಡಿದ್ದ ಬೆಳಗಾವಿ ಹಾಲು ಒಕ್ಕೂಟದ ಚಿತ್ರಣವನ್ನು ಸಂಪೂರ್ಣ ಬದಲಾಯಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಅರಭಾವಿ ಕ್ಷೇತ್ರದ ಶಾಸಕರೂ ಆಗಿರುವ ಪ್ರಸಕ್ತ ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಇಂತಹ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಒಕ್ಕೂಟದ ಅಧ್ಯಕ್ಷರಾದ ನಂತರ ಕೆಎಂಎಫ್ ಉತ್ಪನ್ನಗಳ ಮಾರಾಟದಲ್ಲೂ ಸೈ ಎನಿಸಿಕೊಳ್ಳುವಂತೆ ಮಾಡಿದ್ದಾರೆ. ಅಷ್ಟೆ ಉಳಿದ ಖಾಸಗಿ ಹಾಲು ಕಂಪನಿಗಳಿಗೆ ಪ್ರಭಲ ಪೈಪೋಟೊಯನ್ನು ಅವರು ನೀಡುವಂತೆ ‌ಮಾಡಿದ್ದಾರೆ. ಈಗಿನ ಮಾಹಿತಿ ಪ್ರಕಾರ…

Read More

ಸಂ ಕ ನೌಕರ ಸಂಘದ ಅಧ್ಯಕ್ಷರಾಗಿ ಜೋಶಿ ಅವಿರೋಧ ಆಯ್ಕೆ.

ಸಂ ಕ ನೌಕರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ. ಹುಬ್ಬಳ್ಳಿಹುಬ್ಬಳ್ಳಿ, ದಾವಣಗೆರೆ ಮತ್ತು ಕಲಬುರ್ಗಿ ಆವೃತ್ತಿಯ ಸಂಯುಕ್ತ ಕರ್ನಾಟಕ ನೌಕರ ಸಂಘದ ಅಧ್ಯಕ್ಷರಾಗಿ ಬೆಳಗಾವಿಯ ಮುಖ್ಯವರದಿಗಾರ ವಿಲಾಸ ಜೋಶಿ ಅವಿರೋಧ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಇಬ್ಬರ ನಾಮಪತ್ರ ತಿರಸ್ಕೃತವಾಯಿತು. ಕಣದಲ್ಲಿದ್ದ ಓರ್ವರು ತಮ್ಮ ನಾಮಪತ್ರವನ್ನು ವಾಪಸ್ಸು ತೆಗೆದುಕೊಂಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿ ವಿದ್ಯಾ ಕೂಡ್ಲಕೆರಿ ಅವರು ಈ ಘೋಷಣೆ ಮಾಡಿದರು.ನಂತರ ಗೌರವಾಧ್ಯಕ್ಷರಾಗಿ ಸುಧೀಂದ್ರ ಹುಲಗೂರ ಮತ್ತು ಪ್ರಧಾನ…

Read More

ಮಹಾರಾಜರ ಮೂರ್ತಿಗಳಿಗೆ ಡಬಲ್ ಪೂಜಾ ಧಮಾಕಾ

ಬೆಳಗಾವಿಯಲ್ಲಿ ಮಹಾರಾಜರ ಮೂರ್ತಿ ಅನಾವರಣ ರಾಜಕಾರಣ. ಯಳ್ಳೂರಗಡದಲ್ಲಿ ಶಿವಾಜಿ ಪ್ರತಿಮೆ ಅನಾವರಣ ಎರಡು ಸಲ ನಡೆದಿತ್ತು. ಸಿಎಂ ಬಸವರಾಜ ಬೊಮ್ಮಾಯಿ ನಂತರ ಕಾಂಗ್ರೆಸ್ ನಡೆಸಿತ್ತು. ಆಗ ಓಕೆ ಅಂದವರು ಈಗ ವಿರೋಧ ಮಾಡುತ್ತಿದ್ದಾರೆ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲು ಬಿಜೆಪಿಯವರು ಅನಾವರಣ ಮಾಡಿದರು. ಇನ್ನು ಸರ್ಕಾರದ ಸರದಿ. ಶಿಷ್ಟಾಚಾರ ಪಾಲಿಸಬೇಕಿದ್ದವರು ಯಾರು? ಮೇಯರ್ಗೆ ಕೊಟ್ಟ ಉತ್ತರದಿಂದ ಹೆಚ್ಚಿದ ಜಿದ್ದು. ಬೆಳಗಾವಿ. ಗಡಿನಾಡ ಬೆಳಗಾವಿ ರಾಜಕಾರಣವೇ ವಿಚಿತ್ರ. ಇಲ್ಲಿ ಏನೇ ರಾಜಕೀಯ ಜಿದ್ದು ಇದ್ದರೆ ಅದನ್ನು ಅವರೊಂದಿಗೆ ನೇರಾ…

Read More

ಔರಂಗಜೇಬನಿಗೆ ಹೆದರಿಲ್ಲ- ಶಿವೇಂದ್ರ. ಇದು ಶಿವಭಕ್ತರ ಶಕ್ತಿ- ಅಭಯ

ಇದು ಬೆಳಗಾವಿಅನಗೋಳ ವೃತ್ತದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಬೃಹತ್ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಛತ್ರಪತಿ ಶಿವಾಜಿ ಮಹಾರಾಜರ ಹದಿಮೂರನೇ ವಂಶಸ್ಥರಾದ ಛತ್ರಪತಿ ಶಿವೇಂದ್ರ ರಾಜೇಭೋಸಲೆಯವರು, ಈ ಭವ್ಯ ಹಾಗೂ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ತುಂಬ ಖುಷಿಯಾಗಿದೆ. ಇಂತಹ ವಿಶಿಷ್ಟವಾದ ಕಾರ್ಯಕ್ರಮಕ್ಕೆ ಇಲ್ಲಿ ಅಡೆತಡೆಯಾದ ಬಗ್ಗೆ ಕೇಳಿದೆ. ಶಾಸಕ ಅಭಯ ಪಾಟೀಲ ಹಾಗೂ ಧನಂಜಯ ಜಾಧವ ಅವರು ಈ ಬಗ್ಗೆ ನನ್ನ ಗಮನಕ್ಕೆ ತಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ನಮ್ಮ ವಂಶ ಔರಂಗಜೇಬನಿಗೇ ಹೆದರಿಲ್ಲ. ಇನ್ನು ಇದಕ್ಕೆಲ್ಲಾ…

Read More

ಅಭಯ ಚಾಣಾಕ್ಷ ನಡೆಗೆ ಜನ ಫುಲ್ ಫಿದಾ..!

ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ. ಸರ್ಕಾರ ಪ್ರತಿಮೆ ಅನಾವರಣಕ್ಕೆ ನೀಡಿರಲಿಲ್ಲ. ಆದರೆ ಜನರ ಭಾವನೆಗಳಿಗೆ ಮನ್ನಣೆ ನೀಡಿದ ಅಭಯ. ಒಂದೇ ತಾಸಿನಲ್ಲಿ ಪ್ರತಿಮೆ ಅನಾವರಣ ಅಲಂಕಾರ ರೆಡಿ. ಪೊಲೀಸ್, ಆಡಳಿತ ಮಧ್ಯೆಯೇ ಎಲ್ಲವನ್ನು ಸಿದ್ಧಮಾಡಿದ ಸಂಭಾಜಿಮಹಾರಾಜ ಭಕ್ತರು. ಬೆಳಗಾವಿ. ಮಾಡೇ ತೀರಬೇಕು ಎನ್ನುವ ಛಲವೊಂದಿದ್ದರೆ ಎಷ್ಟೇ ಅಡ್ಡಿಗಳು ಬಂದರೂ ಅದನ್ನು ಎದುರಿಸಿ ಗೆಲ್ಲಬಹುದು ಎನ್ನುವುದಕ್ಕೆ ನಿನ್ನೆ ಬೆಳಗಾವಿಯಲ್ಲಿ ನಡೆದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣವೇ ಸಾಕ್ಷಿ. ಈ ರೀತಿ ಅಂದಿದ್ದನ್ನು ಮಾಡಿ ತೋರಿಸಿ ಗೆಲುವಿನ‌ ನಗೆಬೀರಿದವರು…

Read More

ಧಿಕ್ಕಾರ ಅಂದವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಸಿಪಿ ಶೇಖರ

ಬೆಳಗಾವಿ.ಛತ್ರಪತಿ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಆಗಮಿಸಿದ್ದರಿಗೆ ಧಿಕ್ಕಾರ ಘೋಷಣೆ ಕೂಗು್ತಿದ್ದವರಿಗೆ ಎಸಿಪಿ ಶೇಖರಪ್ಪ ಖಡಕ್ ಎಚ್ಚರಿಕೆ ಕೊಟ್ಡು ಕಳಿಸಿದರು. ಶಾಸಕ ಅಭಯ ಪಾಟೀಲರು ಸಿದ್ಧತೆ ಪರಿಶೀಲನೆಗೆ ಆಗಮಿಸಿ ವಾಪಸ್ಸು ಹೋಗುವ ಸಂದರ್ಭದಲ್ಲಿ ಭಜಂತ್ರಿ ಗಲ್ಲಿಯ ಬಳಿ ನಿಂತಿದ್ದ ಕೆಲವರು ಧಿಕ್ಕಾರ ಘೋಷಣೆ ಕೂಗಿದರು. ಅಷ್ಟೆ ಅಲ್ಲ ಕುಂಭ ತೆಗೆದುಕೊಂಡು ಹೋಗುತ್ತಿದ್ದವರಿಗೂ ಘೋಷಣೆ ಕೂಗುತ್ತಿದ್ದರು. ಇದನ್ನು ಗಮನಿಸಿದ ಎಸಿಪಿ ಶೇಖರಪ್ಪ ಅವರು ಘೋಷಣೆ ಕೂಗುತ್ತಿದ್ದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ವಾಪಸ್ಸು ಕಳಿಸಿದರು. ನಂತರ ಪೊಲೀಸ್ ಆಯುಕ್ತ ಇಡಾ…

Read More

ಸಂಭಾಜಿ ಮೂರ್ತಿ ಅನಾವರಣ-ಗೆದ್ದ ಶಾಸಕರ ತಂಡ

ಬೆಳಗಾವಿ.ಕೊನೆಗೂ ಅನಗೋಳ‌ ನಾಕಾ ಬಳಿ ಪ್ರತಿಷ್ಠಾಪುಸಲಾಗಿದ್ದ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣ ಪೊಲೀಸ್ ಬಂದೋಬಸ್ತಿ‌ ನಡುವೆಯೇ ನಡೆಯಿತು. ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ, ನಗರಸೇವಕರಾದ ವಾಣಿ ಜೋಶಿ, ಅಭಿಜಿತ್ ಜವಳಕರ, ನಿತಿನ್ ಜಾಧವ ಗಿರೀಶ ಧೋಂಗಡಿ ಮುಂತಾದವರ ಸಮ್ಮುಖದಲ್ಲಿ ಮೂರ್ತಿ ಮೇಲಿನ ಬಟ್ಟೆ ತೆರವು ಮಾಡಲಾಯಿತು. ಆರಂಭದಲ್ಲಿ ಮೇಯರ್ ಸೇರಿದಂತೆ ಮುಂತಾದವರು ಪಾಲಿಕೆ ಸಿಬ್ಬಂದಿ ಕಡೆಯಿಂದ ಮಧ್ಯದಲ್ಲಿ ಹಾಕಲಾಗಿದ್ದ ತಗಡು ಸೇರಿದಂತೆ ಸ್ವಚ್ಚತೆ ಮಾಡಬೇಕು ಎಂದು ಸೂಚನೆ ನೀಡಿದರು. ಆದರೆ ಅಲ್ಲಿ ಹಾಜರಿದ್ದ ಪಾಲಿಕೆ…

Read More

ಸಂಭಾಜಿ ಮಹಾರಾಜರ ಪ್ರತಿಮೆ ವಿವಾದ- ಪೂಜಾ+ ಬಂದೋಬಸ್ತ್

ಬೆಳಗಾವಿ. ಅನಗೋಳ ನಾಕಾದಲ್ಲಿ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣದ ಸಿದ್ಧತೆ ಒಂದು ಕಡೆ ನಡೆದಿದ್ದರೆ, ಮತ್ತೊಂದು ಕಡೆಗೆ ಪೊಲೀಸ್ ಬಂದೋಬಸ್ತ್ ಲೆಕ್ಕಾಚಾರಗಳು ಜೋರಾಗಿ‌ ನಡೆದಿವೆ ಹೀಗಾಗಿ ಅನಗೋಳ ಪರಿಸರದ ವಾರಾವರಣ ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಮೂರ್ತಿ ಅನಾವರಣ ಮಾಡೇ ತೀರಬೇಕು ಎನ್ನುವ ಉದ್ದೇಶದಿಂದ ಅಲ್ಲಿ ಕೆಲವರು ಪೂಜಾ ಸಿದ್ಧತೆಯನ್ನು ಮಾಡುತ್ತಿದ್ದಾರೆ. ಆದರೆ ಮತ್ತೊಂದು ಕಡೆಗೆ ಕ್ಷಣ ಕ್ಷಣಕ್ಕೂ ಪೊಲೀಸ್ ಬಂದೋಬಸ್ತಿಯ ಲೆಕ್ಕಾಚಾರಗಳು ಬದಲಾಗುತ್ತಿವೆ. ಈಗಾಗಲೇ ಸ್ಥಳದಲ್ಲಿ ನಾಲ್ಕೈದು ಜನ ಪೊಲೀಸ್ ಇನ್ಸಪೆಕ್ಟರಗಳು…

Read More
error: Content is protected !!