ಎಲ್ಅಂಡ್ಟಿ ಕಚೇರಿಯಲ್ಲಿ ಶಾಸಕರ ಪ್ರತಿಭಟನೆೆ!
ಬೆಳಗಾವಿ:ಅಭಿವೃದ್ಧಿ ಹೆಸರಿನಲ್ಲಿ ಆರಂಭವಾದ ಕಾಮಗಾರಿಗಳೇ ಇಂದು ಬೆಳಗಾವಿಗರಿಗೆ ತಲೆನೋವಾಗಿ ಪರಿಣಮಿಸಿವೆ.ಆಮೆಗತಿ, ವಿಳಂಬ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳ ವಿರುದ್ಧ ಎಲ್ಅಂಡ್ಟಿ ಕಂಪನಿಯ ನೀತಿಗೆ ಬೇಸತ್ತು, ನಗರದ ವಿವಿಧ ಬಡಾವಣೆಗಳ ನಾಗರಿಕರು ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಎಲ್ಅಂಡ್ಟಿ ಮುಖ್ಯ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರಸ್ತೆಗಳು ತಿಂಗಳುಗಟ್ಟಲೆ ಅಗೆಯಲ್ಪಟ್ಟು ಮರುಸ್ಥಾಪನೆ ಕಾಣದ ಸ್ಥಿತಿ, ಗುಂಡಿಗಳ ರಸ್ತೆಯಲ್ಲಿ ಸಂಚಾರವೇ ಅಪಾಯ, ಕುಡಿಯುವ ನೀರಿಗೆ ದಿನಗಟ್ಟಲೆ ಪರದಾಟ ಈ ಎಲ್ಲಕ್ಕೂ ಎಲ್ಅಂಡ್ಟಿಯ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಕಿಡಿಕಾರಿದರು….

