ಸರ್ಕಾರ- ರಾಜ್ಯಪಾಲರ ಭಾಷಣದೊಳಗಿನ ಸಂಘರ್ಷ:
ಸರ್ಕಾರ–ರಾಜ್ಯಪಾಲರ ನಡುವೆ ಸಂವಿಧಾನಾತ್ಮಕ ಗಡಿ ರೇಖೆ ಮತ್ತೆ ಪ್ರಶ್ನೆ ಬೆಂಗಳೂರು:ವಿಧಾನಸಭೆಯ ಪವಿತ್ರ ವೇದಿಕೆಯಲ್ಲಿ ಓದಲಾದ ಭಾಷಣವೇ ಈಗ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ರಾಜಕೀಯ–ಸಂವಿಧಾನಾತ್ಮಕ ಸಂಘರ್ಷಕ್ಕೆ ಕೇಂದ್ರಬಿಂದು ಆಗಿದೆ. ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ತಿದ್ದುಪಡಿ, ಆಕ್ಷೇಪ ಮತ್ತು ಕೆಲ ಅಂಶಗಳ ಕೈಬಿಡುವಿಕೆ — ಈ ಎಲ್ಲವು ರಾಜ್ಯಪಾಲರ ಅಧಿಕಾರದ ಮಿತಿ ಮತ್ತು ಆಯ್ಕೆಯಾದ ಸರ್ಕಾರದ ಪ್ರಾಮುಖ್ಯತೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ರಾಜ್ಯಪಾಲರ ಭಾಷಣವೆಂದರೆ ಸರ್ಕಾರದ ನೀತಿ–ದಿಕ್ಕುಗಳ ಅಧಿಕೃತ ಪ್ರತಿಬಿಂಬ. ಆದರೆ ಇತ್ತೀಚಿನ ಬೆಳವಣಿಗೆಗಳು, “ಭಾಷಣ ಸರ್ಕಾರದ್ದೇ,…

