ಕಿತ್ತೂರು ಬಳಿ ಕಾರು ಅಡ್ಡಗಟ್ಟಿ ದರೋಡೆ; 2 ಲಕ್ಷ ಮೌಲ್ಯದ ಸರ ಲೂಟಿ.
ಮಾಹಿತಿ ಕೊಡದ ಪೊಲೀಸರು.

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿತ್ತೂರು ಸಮೀಪ ಕುಲವಳ್ಳಿ ಕ್ರಾಸ್ ಬಳಿ ಮಧ್ಯರಾತ್ರಿ ಕಾರು ಅಡ್ಡಗಟ್ಟಿ ಎಂಟು ಜನರ ಗುಂಪು ದರೋಡೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮುಂಬೈ ಮೂಲದ ಇಂಜಿನಿಯರ್ ವೈಭವ ಮೋಹನ್ ವ್ಯವಹಾರೆ (30) ಅವರ ಕಾರಿನ ಮುಂಭಾಗಕ್ಕೆ ಕಲ್ಲು ಎಸೆದು ನಿಲ್ಲಿಸಿ, ಅಂದಾಜು ₹2 ಲಕ್ಷ ಮೌಲ್ಯದ 15 ಗ್ರಾಂ ಬಂಗಾರದ ಸರವನ್ನು ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.

