ಬೆಳಗಾವೀಲಿ ರಾಗ ಭರಿತ ರಾತ್ರಿ..!
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ “ಕನ್ನಡ ನುಡಿ ಹಬ್ಬ”ದ ಯಶಸ್ಸಿನ ಹಿಂದೆ ನಿಂತಿದ್ದ ಪ್ರಮುಖ ಶಕ್ತಿಯೆಂದರೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್. ವೇದಿಕೆಯಲ್ಲಿ ಮಿಂಚಿದ್ದು ಗಾಯಕರಾದರೆ, ವೇದಿಕೆಯ ಹಿಂದೆ ಮೌನವಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮಕ್ಕೆ ರೂಪ ಕೊಟ್ಟಿದ್ದವರು ಡಿಸಿ ಮೊಹಮ್ಮದ ರೋಷನ್. ಸಾಮಾನ್ಯ ಸರ್ಕಾರಿ ಕಾರ್ಯಕ್ರಮದ ಚೌಕಟ್ಟನ್ನು ಮೀರಿ, ಒಂದು ಸಾಂಸ್ಕೃತಿಕ ಉತ್ಸವದ ಭಾವವನ್ನು ಮೂಡಿಸುವಂತೆ ಅವರು ರೂಪುರೇಷೆ ಹಾಕಿದ್ದರು. ಕಾರ್ಯಕ್ರಮದ ಸಮಯನಿಷ್ಠತೆ, ಧ್ವನಿ ವ್ಯವಸ್ಥೆಯ ಗುಣಮಟ್ಟ, ಭದ್ರತಾ ಕ್ರಮಗಳ ಸಮರ್ಪಕ ಜಾರಿಗೆ ನೀಡಿದ ಆದ್ಯತೆ—ಇವೆಲ್ಲವೂ ಅವರ ಯೋಜನಾ ಶೈಲಿಯನ್ನು…

