ಕಾರ್ಯಕರ್ತನೇ ಬಿಜೆಪಿಯ ಶಕ್ತಿ, ನಾಯಕತ್ವದ ಮೂಲ: ಡಾ. ರವಿ ಸಿ.ಟಿ
ಹುಕ್ಕುಂದದಲ್ಲಿ ನಡೆದ ಕಾರ್ಯಕ್ರಮ .ಚಿಕ್ಕಮಗಳೂರು:“ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷ. ಇಲ್ಲಿ ಕಾರ್ಯಕರ್ತರೇ ಬೆಳೆದು ನಾಯಕತ್ವದ ಹಂತಕ್ಕೇರುತ್ತಾರೆ” ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.ಚಿಕ್ಕಮಗಳೂರು ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ಹುಕ್ಕುಂದದಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಅವರು ಮಾತನಾಡಿದರು. ನಾನು 1988ರಲ್ಲಿ ಬೂತ್ ಕಮಿಟಿ ಅಧ್ಯಕ್ಷನಾಗಿದ್ದೆ. ಪಕ್ಷ ಕೊಟ್ಟ ಜವಾಬ್ದಾರಿಗಳೇ ನನ್ನನ್ನು ಬೆಳೆಸಿವೆ. ಯಡಿಯೂರಪ್ಪ, ನರೇಂದ್ರ ಮೋದಿ, ಎಲ್.ಕೆ. ಅಡ್ವಾಣಿ, ದೇವೇಂದ್ರ ಫಡ್ನವಿಸ್ ಮೊದಲಾದವರು ಕಾರ್ಯಕರ್ತರ ಹಂತದಿಂದಲೇ ಮೇಲಕ್ಕೆ ಬಂದವರು”…

