ಜನಧ್ವನಿಗೆ ಸ್ಪಂದಿಸುವ ಆಡಳಿತಕ್ಕೆ ದಾರಿ ಮಾಡಿದ ಡಾ.ಶಾಲಿನಿ ರಜನೀಶ್
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಿಕರ್ತವ್ಯನಿಷ್ಠೆಗೆ ಮತ್ತೊಮ್ಮೆ ಮುದ್ರೆ ಹಾಕಿದ ಮುಖ್ಯ ಕಾರ್ಯದರ್ಶಿ ಬೆಂಗಳೂರು:ಸಾರ್ವಜನಿಕರ ಸಮಸ್ಯೆಗಳು ಆಡಳಿತದ ಮೇಜುಗಳಲ್ಲೇ ನಿಲ್ಲಬಾರದು, ಜನಪ್ರತಿನಿಧಿಗಳ ಧ್ವನಿಗೆ ತಕ್ಷಣ ಸ್ಪಂದನೆ ದೊರಕಬೇಕು ಎಂಬ ಆಡಳಿತಾತ್ಮಕ ಮೌಲ್ಯವನ್ನು ಮತ್ತೊಮ್ಮೆ ಸ್ಪಷ್ಟವಾಗಿ ಪ್ರತಿಪಾದಿಸಿದವರು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್..!ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ನಿರ್ಲಕ್ಷ್ಯಿಸುವ ಪ್ರವೃತ್ತಿಗೆ ತೆರೆ ಎಳೆಯುವ ಉದ್ದೇಶದಿಂದ, ಎಲ್ಲಾ ಅಧಿಕಾರಿಗಳು ಶಾಸಕರು, ವಿಧಾನಪರಿಷತ್ ಸದಸ್ಯರು, ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರ ಕರೆಗಳಿಗೆ ಕಡ್ಡಾಯವಾಗಿ ಸ್ಪಂದಿಸಬೇಕು ಎಂಬ ಕಟ್ಟುನಿಟ್ಟಿನ ಸುತ್ತೋಲೆಯನ್ನು ಅವರು ಹೊರಡಿಸಿದ್ದಾರೆ….

