ಹತ್ತು ದಿನಗಳ ಕಬ್ಬು ಹೋರಾಟ ರಾಜ್ಯವನ್ನೇ ಕದಡಿದ ಕಥೆ
“ಗುರ್ಲಾಪುರದಿಂದ ಸರ್ಕಾರ ನಡುಗಿತು!”ಹತ್ತು ದಿನಗಳ ಕಬ್ಬು ಹೋರಾಟ ರಾಜ್ಯವನ್ನೇ ಕದಡಿದ ಕಥೆ ಬೆಳಗಾವಿ: ಮೂಡಲಗಿ ತಾಲೂಕಿನ ಚಿಕ್ಕದಾದ ಗುರ್ಲಾಪುರ ಕ್ರಾಸ್ ಈಗ ರಾಜ್ಯದ ರಾಜಕೀಯ ನಕ್ಷೆಯಲ್ಲಿ ಅತಿದೊಡ್ಡ ಶೀರ್ಷಿಕೆಯಾಗಿದೆ. ಹತ್ತು ದಿನಗಳ ಕಾಲ ಕಬ್ಬಿನ ಸಿಹಿಯ ಹೋರಾಟ ರಾಜ್ಯ ಸರ್ಕಾರದ ನರನಾಡಿ ಕಂಪಿಸುವ ಮಟ್ಟಕ್ಕೆ ತಲುಪಿತು. ರೈತರ ಧ್ವನಿ ಇಷ್ಟು ಗಟ್ಟಿಯಾಗಿ ಮೊಳಗುತ್ತದೆ ಎಂದು ಯಾರೂ ಊಹಿಸಲಿಲ್ಲ. ಗುರ್ಲಾಪುರದ ಹೋರಾಟ ಹೇಗೆ ಹುಟ್ಟಿತು? ಕಬ್ಬಿಗೆ ₹3,500 ದರ ನೀಡಬೇಕು ಎಂಬ ಸರಳ ಆಗ್ರಹದಿಂದ ಪ್ರಾರಂಭವಾದ ಹೋರಾಟ, ದಿನಗಳು…

