ಸ್ವಚ್ಚತೆಗೆ ದಂಡವೇ ಚಾಟಿ..!

*ಒಂದೇ ತಿಂಗಳಲ್ಲಿ 2 ಲಕ್ಷ ದಂಡ ವಸೂಲಿ!ಬೆಳಗಾವಿ ಸ್ವಚ್ಛತೆಗೆ ದಂಡದ ಚಾಟಿ ಬೆಳಗ್ಗೆ 6ರಿಂದ ರಾತ್ರಿ ತನಕ ನಿಗಾಬ್ಲಾಕ್ ಸ್ಪಾಟ್ಗಳಿಗೆ ಬ್ರೇಕ್\ ಬೆಳಗಾವಿ:ಗಡಿನಾಡು ಬೆಳಗಾವಿಯಲ್ಲಿ ಸ್ವಚ್ಛತೆ ವಿಚಾರಕ್ಕೆ ಇನ್ನು ಮಾತಿನ ಮರುಳಿಲ್ಲ. ಮಹಾನಗರ ಪಾಲಿಕೆ ಈಗ ನೇರವಾಗಿ ದಂಡದ ಮಾರ್ಗಕ್ಕೆ ಇಳಿದಿದೆ.ಕಸ ವಿಂಗಡಣೆ ಮಾಡದವರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರು ಹಾಗೂ ಬ್ಲಾಕ್ ಸ್ಪಾಟ್ ಸೃಷ್ಟಿಸುವವರ ವಿರುದ್ಧ ಕೈಗೊಂಡ ಕಠಿಣ ಕ್ರಮದಿಂದ ಕೇವಲ ಒಂದು ತಿಂಗಳಲ್ಲೇ 2 ಲಕ್ಷಕ್ಕೂ ಅಧಿಕ ದಂಡ ವಸೂಲಿಯಾಗಿದೆ. ಈ ದಂಡಾತ್ಮಕ ಕಾಯರ್ಾಚರಣೆ…

Read More

ಪೊಲೀಸರ ಕರ್ತವ್ಯಲೋಪದ ಮೇಲೆ ಮೌನದ ರಾಜಕೀಯ ಛತ್ರ

ಬೆಳಗಾವಿಯಲ್ಲಿ ಹೊಂದಾಣಿಕೆ ರಾಜಕಾರಣ. ಪೊಲೀಸ್ ತಪ್ಪು ಸಾಬೀತಾದರೂ ಶಿಕ್ಷೆ ಇಲ್ಲ!** ಪೊಲೀಸರ ಕರ್ತವ್ಯಲೋಪದ ಮೇಲೆ ಮೌನದ ರಾಜಕೀಯ ಛತ್ರ. ಜನಪ್ರತಿನಿಧಿಗಳ ನಿಶ್ಶಬ್ದ ಒಪ್ಪಿಗೆಗೆ ಜನರು ಬೆಚ್ಚಿಬಿದ್ದಿದ್ದಾರೆ. ಹೈಕೋರ್ಟ ಆದೇಶಕ್ಕೂ ಡೋಂಟಕೇರ್ ಇ ಬೆಳಗಾವಿ ವಿಶೇಷ*ಬೆಳಗಾವಿ:ಬೆಳಗಾವಿಯಲ್ಲಿ ಇಂದು ನಡೆಯುತ್ತಿರುವುದು ರಾಜಕೀಯ ಅಲ್ಲ, ಇದು ಒಂದು ಹೊಂದಾಣಿಕೆಯ ವ್ಯವಸ್ಥೆ. ಮೇಲ್ಮೈಯಲ್ಲಿ ಮಾತ್ರ ವಿರೋಧ, ಒಳಗಿಂದ ಒಳಗೆ ಮೌನ ಒಪ್ಪಂದ. ಪರಿಣಾಮವಾಗಿ ಆಡಳಿತಾತ್ಮಕ ತಪ್ಪುಗಳು, ಪೊಲೀಸ್ ಲೋಪಗಳು, ಮಕ್ಕಳ ಮೇಲಿನ ಅಪರಾಧಗಳೂ ಸಹ ಕ್ರಮವಿಲ್ಲದೇ ಮುಚ್ಚಿಹೋಗುವ ಸ್ಥಿತಿ ನಿರ್ಮಾಣವಾಗಿದೆ.ಇದಕ್ಕೆ ಇತ್ತೀಚಿನ ಎರಡು…

Read More

ವಿಟಿಯು 25ನೇ ಘಟಿಕೋತ್ಸವ (ಭಾಗ–2) 8 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರರಿಗೆ ಪದವಿ ಪ್ರದಾನ

ಫೆ.2ರಂದು ಜ್ಞಾನಸಂಗಮದಲ್ಲಿ ಸಮಾರಂಭರಾಜ್ಯಪಾಲ ಗೆಹ್ಲೋಟ್ ಅಧ್ಯಕ್ಷತೆ – ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮುಖ್ಯ ಅತಿಥಿಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 25ನೇ ವಾರ್ಷಿಕ ಘಟಿಕೋತ್ಸವದ ಭಾಗ–2ರಲ್ಲಿ 8,702 ಸ್ನಾತಕೋತ್ತರ ಹಾಗೂ ಸಂಶೋಧನಾ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಈ ವೇಳೆ 25 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 96 ವಿದ್ಯಾರ್ಥಿಗಳಿಗೆ ವಿವಿಧ ರ್ಯಾಂಕ್‌ಗಳು ಲಭಿಸಲಿವೆ ಎಂದು ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.ಗುರುವಾರ ಘಟಿಕೋತ್ಸವ ಪೂರ್ವಭಾವಿಯಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 2ರಂದು ಬೆಳಗ್ಗೆ 11ಕ್ಕೆ…

Read More

ಬೆಳಗಾವಿ ಕಾರ್ಮಿಕರಿಗೆ ಸರ್ಕಾರದ ಅಭಯ.. ಅಭಯ ಪಾಟೀಲರ ಪ್ರಶ್ನೆಗೆ ಸದನದಲ್ಲಿ ಹೊರಬಿದ್ದ ಅಂಕಿ-ಅಂಶಗಳ ಚಿತ್ರ

ಬೆಂಗಳೂರು:ಬೇಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರು ವಿಧಾನಸಭಾ ಅಧಿವೇಶನದಲ್ಲಿ ಎತ್ತಿದ ಪ್ರಶ್ನೆ, ಬೆಳಗಾವಿ ಜಿಲ್ಲೆಯ ಕಾರ್ಮಿಕರ ಬದುಕಿನ ಒಳನೋಟವನ್ನು ಸದನದ ಮುಂದಿಟ್ಟಿದೆ. ಕಾರ್ಮಿಕ ಸಚಿವರ ಲಿಖಿತ ಉತ್ತರದಂತೆ, ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕರು ನೋಂದಾಯಿತರಾಗಿದ್ದು, ವಿವಾಹ ನೆರವು, ಆರೋಗ್ಯ ಸೇವೆ, ಶಿಕ್ಷಣ ಸಹಾಯ ಸೇರಿ ಕೋಟ್ಯಂತರ ರೂಪಾಯಿ ಮೌಲ್ಯದ ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ.ಕಾರ್ಮಿಕ ಕಲ್ಯಾಣ ಮಂಡಳಿಗಳ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡಲಾಗುತ್ತಿರುವ ನೆರವುಗಳ ಅಂಕಿ-ಅಂಶಗಳು, ಸರ್ಕಾರದ ಹೊಣೆಗಾರಿಕೆಯನ್ನು ಬಿಚ್ಚಿಟ್ಟಂತಿವೆ.₹21 ಸಾವಿರ ವಿವಾಹ ನೆರವು – ಸಾವಿರಾರು ಕುಟುಂಬಗಳಿಗೆ…

Read More

2028 ಕ್ಕೆ ಸತೀಶ ಜಾರಕಿಹೊಳಿ ಸಿಎಂ ಆಗಲಿ- ಸ್ವಾಮೀಜಿ ಆಶಯ

ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಆಶಯಯಮಕನಮರಡಿ.(ಬೆಳಗಾವಿ ಜಿಲ್ಲೆ)2028ಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹತ್ತರಗಿಯ ಸುಕ್ಷೇತ್ರ ಕಾರಿಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದಾರೆ.ಹತ್ತರಗಿಯಲ್ಲಿ ನಿರ್ಮಾಣಗೊಂಡ ನೂತನ ಗ್ರಾಮ ಸ್ವರಾಜ್ ಸೌಧ (ಗ್ರಾಮ ಪಂಚಾಯತ್ ಕಟ್ಟಡ) ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯವನ್ನು ಮುನ್ನಡೆಸುವ ಎಲ್ಲ ಅರ್ಹತೆ, ಅನುಭವ ಮತ್ತು ದೃಢ ನಿಲುವು ಹೊಂದಿರುವ ಸತೀಶ ಜಾರಕಿಹೊಳಿ ಅವರು 2028ರಲ್ಲಿ ಮುಖ್ಯಮಂತ್ರಿಯಾಗಲಿ ಎಂಬುದು ಈ ಭಾಗದ ಜನರ ಆಶಯವೂ ಹೌದು…

Read More

ಪದ್ಮಶ್ರೀ ಗೌರವಕ್ಕೆ ಹರಿದು ಬಂದ ಅಭಿಮಾನ ಮಹಾಪೂರ

ಡಾ. ಪ್ರಭಾಕರ ಕೋರೆ ಅವರಿಗೆ ಬೆಳಗಾವಿಯ ಹೃದಯಪೂರ್ವಕ ಅಭಿನಂದನೆಬೆಳಗಾವಿ:ಪದ್ಮಶ್ರೀ ಪ್ರಶಸ್ತಿಯ ಘೋಷಣೆಯೊಂದಿಗೆ ಸಮಾಜಸೇವೆಯ ದೀರ್ಘ ಪಯಣಕ್ಕೆ ರಾಷ್ಟ್ರ ಮಟ್ಟದ ಗೌರವ ಲಭಿಸಿದ ಕ್ಷಣದಿಂದಲೇ, ಬೆಳಗಾವಿಯ ಪ್ರತಿಯೊಂದು ವಲಯದಲ್ಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಶಿಕ್ಷಣ, ಆರೋಗ್ಯ ಹಾಗೂ ಸಾರ್ವಜನಿಕ ಸೇವೆಯ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದ ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರಿಗೆ ಶುಭಾಶಯಗಳ ಸರಮಾಲೆಯೇ ನಿರ್ಮಾಣವಾಗಿದೆ. ಈ ಸಂಭ್ರಮದ ಭಾಗವಾಗಿ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ…

Read More

ಚೋರ್ಲಾ ಘಾಟ್ ₹400 ಕೋಟಿ ಪ್ರಕರಣ: ಅಪರಾಧಕ್ಕಿಂತ ಅನುಮಾನವೇ ಹೆಚ್ಚು

ಸೋಮವಾರದ ಇ ಬೆಳಗಾವಿ ವಿಶೇಷ ಒಂದು ಸಂಖ್ಯೆ ದೇಶವನ್ನು ನಡುಗಿಸಿತು – ₹400 ಕೋಟಿ. ಸಾಮಾನ್ಯವಾಗಿ ಭಾರೀ ಅಪರಾಧಗಳು ಸಾಕ್ಷ್ಯಗಳಿಂದ ಮಾತನಾಡುತ್ತವೆ. ಆದರೆ ಚೋರ್ಲಾ ಘಾಟ್‌ನ ‘₹400 ಕೋಟಿ ದರೋಡೆ’ ಪ್ರಕರಣದಲ್ಲಿ ಮಾತನಾಡುತ್ತಿರುವುದು ಸಾಕ್ಷ್ಯವಲ್ಲ, ಅನುಮಾನ. ಅಪರಾಧವಲ್ಲ, ಅಸಂಗತತೆ. ತನಿಖೆಯ ದಿಕ್ಕು ಅಲ್ಲ, ಗೊಂದಲ.:ಇದು ನಿಜವಾದ ದರೋಡೆ ಪ್ರಕರಣವೇ, ಅಥವಾ ದಾರಿ ತಪ್ಪಿಸುವ ಕಥೆಯೊಂದು ಜಾಣ್ಮೆಯಿಂದ ಹೆಣೆದಿದೆಯೇ?—ದೂರು: ಪ್ರಕರಣದ ಅಡಿಪಾಯವೇ ಅಸ್ಥಿರ 2026ರ ಜನವರಿ 1ರಂದು ನಾಸಿಕ್ ಪೊಲೀಸ್ ಠಾಣೆಗೆ ಸಲ್ಲಿಸಲಾದ ದೂರು ಈ ಪ್ರಕರಣದ ಏಕೈಕ…

Read More

ಗ್ರಾಮೀಣ ಕನಸಿನಿಂದ ರಾಷ್ಟ್ರದ ಮನ್ನಣೆ: ಡಾ. ಪ್ರಭಾಕರ ಕೋರೆಗೆ ಪದ್ಮಶ್ರೀ ಪ್ರಶಸ್ತಿ

ಈ ಗೌರವ ನನ್ನೊಬ್ಬನದು ಅಲ್ಲ; KLE ಸಂಸ್ಥೆಯ ಎಲ್ಲಾ ಸಿಬ್ಬಂದಿ, ಶಿಕ್ಷಕರು, ವೈದ್ಯರು ಮತ್ತು ಸಮಾಜದ ಸಹಕಾರಿಯರ ಶ್ರಮಕ್ಕೆ ಸಲ್ಲುತ್ತದೆ.”– ಡಾ. ಪ್ರಭಾಕರ ಕೋರೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಕೇವಲ ಸಂಸ್ಥೆಗಳಷ್ಟೇ ಅಲ್ಲ, ಒಂದು ಸಾಮಾಜಿಕ ಬದಲಾವಣೆಯ ಚಳವಳಿಯಾಗಿ ರೂಪಿಸಿದ ಧೈರ್ಯಶಾಲಿ ನಾಯಕ. ಗ್ರಾಮೀಣ ಕನಸಿನಿಂದ ರಾಷ್ಟ್ರದ ಮನ್ನಣೆ: ಉತ್ತರ ಕರ್ನಾಟಕದ ಶಿಕ್ಷಣ–ಆರೋಗ್ಯ ಕ್ರಾಂತಿಗೆ ರಾಷ್ಟ್ರದ ಒಪ್ಪಿಗೆ” ಬೆಳಗಾವಿ.ಶಿಕ್ಷಣ ಮತ್ತು ಆರೋಗ್ಯ ಕೇವಲ ಸಂಸ್ಥೆಗಳಷ್ಟೇ ಅಲ್ಲ, ಸಮಗ್ರ ಸಾಮಾಜಿಕ ಬದಲಾವಣೆಯ ಚಿಹ್ನೆಯಾಗಬೇಕು ಎಂಬ ದೃಢ ನಂಬಿಕೆಯಿಂದ…

Read More

ಕಾಂಗ್ರೆಸ್ ನಡೆ ‘ಅಸಂವಿಧಾನಿಕ

ಬೆಳಗಾವಿ ಅಕ್ರಮಗಳ ಬಗ್ಗೆ ಬಿಜೆಪಿ ಮೌನ ಪ್ರಶ್ನಾರ್ಹ ಗಂಭೀರ ಪರಿಗಣನೆ ಎಂದ ರಾಜ್ಯಸಭಾ ಸದಸ್ಯ ಬೆಳಗಾವಿ:ರಾಜ್ಯಪಾಲರು ಭಾಷಣ ಮುಗಿಸಿ ಸದನದಿಂದ ಹೊರಡುವ ವೇಳೆ ಅವರನ್ನು ತಡೆಯಲು ಕಾಂಗ್ರೆಸ್ ಶಾಸಕರು ಯತ್ನಿಸಿದ ಘಟನೆ ಅಸಂವಿಧಾನಿಕ ಹಾಗೂ ದುರುದ್ದೇಶಪೂರಿತ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಟುವಾಗಿ ಟೀಕಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನವು ರಾಜಕೀಯ ಗಲಾಟೆಗೆ ಸೀಮಿತವಾಗದೇ ರಾಜ್ಯದ ಅಭಿವೃದ್ಧಿ ವಿಚಾರಗಳತ್ತ ಕೇಂದ್ರೀಕರಿಸಬೇಕಿತ್ತು ಎಂದು ಹೇಳಿದರು.ರಾಜ್ಯಪಾಲರು ಭಾಷಣದ ವೇಳೆ ಸಂಪೂರ್ಣ ಪಠ್ಯವನ್ನು ಓದದೇ ಇರುವ ಕುರಿತು…

Read More

ಕೆಎಲ್‌ಇ ಸೊಸೈಟಿ ಪದಾಧಿಕಾರಿಗಳ ಆಯ್ಕೆ ಅವಿರೋಧ

ಫೆ. 7–8ರಂದು ನಿಗದಿಯಾಗಿದ್ದ ಮತದಾನ ರದ್ದುಬೆಳಗಾವಿ: ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸೈಟಿಯ (ಕೆಎಲ್‌ಇ) ಮುಂದಿನ ಅವಧಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೊಸೈಟಿಯ ಚುನಾವಣಾಧಿಕಾರಿಗಳು ಬುಧವಾರ ಅಧಿಕೃತ ಪ್ರಕಟಣೆ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ. ಪ್ರಕಟಣೆಯ ಪ್ರಕಾರ, ಕೌಜಲಗಿ ಮಹಾಂತೇಶ ಶಿವಾನಂದ ಅವರು ಅಧ್ಯಕ್ಷರಾಗಿ, ತಟವಟಿ ಬಸವರಾಜ ಶಿವಲಿಂಗಪ್ಪ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಆಡಳಿತ ಮಂಡಳಿಯ ಸದಸ್ಯರಾಗಿ ಕೋರೆ ಅಮಿತ ಪ್ರಭಾಕರ, ಬಾಗೇವಾಡಿ ಪ್ರವೀಣ ಅಶೋಕ, ದೊಡವಾಡ ಪ್ರೀತಿ ಕರಣ,…

Read More
error: Content is protected !!