ಚಳಿಯ ಚಿತ್ತಾರದಲ್ಲಿ ನಡುಗಿದ ಬೆಳಗಾವಿ.

ಬೆಳಗಾವಿ: ಡಿಸೆಂಬರ್ ಚಳಿಯ ಕವಿತೆ ಬರೆಯುವಂತೆ, ಬೆಳಗಾವಿಯ ಮೇಲೆ ತಣ್ಣನೆಯ ಮಂಜಿನ ಹಾಸು ಹಾಸಾಗಿದೆ. ರಾತ್ರಿಯಾಗುತ್ತಿದ್ದಂತೆ ಬೀದಿಗಳ ಮೇಲೆ ಮೌನದ ಚಳಿ ಹರಡಿದ್ದು, ಕೇವಲ 7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಗಡಿನಾಡು ಜಿಲ್ಲೆಯನ್ನು ರಾಜ್ಯದ ಅತ್ಯಂತ ಚಳಿಯಾದ ಪ್ರದೇಶಗಳ ಸಾಲಿನಲ್ಲಿ ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ.ಬೆಳಗಿನ ಜಾವ… ಸೂರ್ಯನ ಕಿರಣಗಳು ಕಾಣುವ ಮುನ್ನವೇ, ಬೆಳಗಾವಿಯ ರಸ್ತೆಗಳು ಹೊಗೆಯಂತೆ ಮಂಜಿನಲ್ಲಿ ಮುಚ್ಚಿಕೊಳ್ಳುತ್ತವೆ. ಕೈಕಾಲು ಗಟ್ಟಿಯಾಗಿ ಮಡಚಿಕೊಳ್ಳುವ ಚಳಿ, ಚಹಾ ಅಂಗಡಿಗಳ ಬಳಿ ಗುಂಪುಗೂಡುವ ಜನ, ಉಸಿರಿನಲ್ಲೇ ಕಾಣುವ…

Read More

ಸಚಿವೆ ಹೆಬ್ಬಾಳಕರಗೆ‌ ಬಗಲ್ಮೆ ದುಶ್ಮನ್..!?

ಸಚಿವೆ ಹೆಬ್ಬಾ:ಳಕರ ಇಲಾಖೆಯದಾಖಲೆಗಳು ಮಾಧ್ಯಮಗಳಿಗೆ ಹೇಗೆ ತಲುಪುತ್ತಿವೆ? ಸಚಿವರಿಗೆ ಬಗಲ್ಮೆ ದುಶ್ಮನ್ ಯಾರು ಗೊತ್ತಾ? (ಇ ಬೆಳಗಾವಿ ವಿಶೇಷ) ಹಗರಣಗಳ ಇಲಾಖೆ ಎಂದೇ ಹೆಸರಾಗಿರುವ ಮಹಿಳಾ ಮತ್ತು‌ ಮಕ್ಕಳ‌ ಕಲ್ಯಾಣ‌ ಇಲಾಖೆಯ ದಾಖಲೆಗಳನ್ನು‌ ಕೆದಕುತ್ತ ಹೋದರೆ ಬ್ರಹ್ಮಾಂಡ ಭ್ರಷ್ಟಾಚಾರದ ಹೂರಣವೇ ಹೊರಬರುತ್ತದೆ. ಬಿಜೆಪಿ ಸರ್ಕಾರದಲ್ಲೂ ಕೂಡ ಈ ಇಲಾಖೆ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಇಲಾಖೆಯ ಹಗರಣದ ದಾಖಲೆಗಳನ್ನು ಶೋಧಿಸಲು ಅಷ್ಟೊಂದು ಹರಸಾಹಸ ಮಾಡಬೇಕಾದ ಅಗತ್ಯವೇ ಬರಲ್ಲ. ಏಕೆಂದರೆ ಸಚಿವರ‌ ಹಿಂದೆ,…

Read More

ಪೊಲೀಸ್ ವಿರುದ್ಧ ಕ್ರಮಕ್ಕೆ ಆಯೋಗ ಸೂಚನೆ

ಇದು Ebelagavi ಡಿಜಿಟಲ್ ಮಿಡಿಯಾ ಎಫೆಕ್ಟ್. ಒಂದೇ ತಿಂಗಳಲ್ಲಿ ನಾಲ್ಕು ಕೇಸ್. ಪೊಲೀಸ ವಿರುದ್ಧ ಕರ್ತವ್ಯ ಲೋಪದ ಆರೋಪ. ಮಕ್ಕಳ ರಕ್ಷಣಾ ಆಯೋಗದಿಂದ ಸ್ವಯಂ ಪ್ರಢರಿತ ದೂರು. ಬೆಳಗಾವಿ: ಡಿಸೆಂಬರ್ ತಿಂಗಳಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಪೊಕ್ಕೊ (ಮಕ್ಕಳ ಲೈಂಗಿಕ ದೌರ್ಜನ್ಯ) ಪ್ರಕರಣಗಳು ದಾಖಲಾಗಿದ್ದರೂ, ಅವುಗಳಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗಳು ದೂರು ನಿರ್ಲಕ್ಷ್ಯ ತೋರಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಗನ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಂಯುಕ್ತ ಕರ್ನಾಟಕ* ಮತ್ತು *ಇ…

Read More

ಬೆಳಗಾವೀಲಿ ಮಕ್ಕಳ ಸುರಕ್ಷತೆ ‘ಲಾಕ್‌ಡೌನ್’!

ಡಿಸೆಂಬರ್‌ನಲ್ಲಿ ನಾಲ್ಕು ಪೊಕ್ಸೊ ಪ್ರಕರಣಗಳುಗಡಿನಾಡ ಬೆಳಗಾವಿ:ಡಿಸೆಂಬರ್ ತಿಂಗಳು ಬೆಳಗಾವಿಗೆ ಕೇವಲ ಚಳಿಯನ್ನಲ್ಲ, ಮಕ್ಕಳ ಮೇಲಿನ ದೌರ್ಜನ್ಯದ ಭೀತಿಯನ್ನೂ ತಂದಿದೆ. ಒಂದೇ ತಿಂಗಳಲ್ಲಿ ನಾಲ್ಕು ಪೊಕ್ಸೊ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮೂರು ಪ್ರಕರಣಗಳು ನಗರ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ, ಇನ್ನೊಂದು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಪ್ರಕರಣಗಳ ಸಂಖ್ಯೆ ಏರಿದಂತೆ ಕಾನೂನು ವ್ಯವಸ್ಥೆ ಚುರುಕಾಗಬೇಕಿದ್ದರೆ, ಇಲ್ಲಿ ಮೌನವೇ ಮೇಲುಗೈ ಸಾಧಿಸಿದೆ. ಮಕ್ಕಳ ರಕ್ಷಣೆಗೆ ರೂಪಿಸಿದ ಕಾನೂನುಗಳು ಕಡತಗಳಲ್ಲಿ ಸೀಮಿತವಾಗಿದ್ದಾವೇ? ಎಂಬ ಪ್ರಶ್ನೆ ಇಂದು ಬೆಳಗಾವಿಯ ಪ್ರತಿಯೊಬ್ಬ…

Read More

ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆ ಉತ್ತೇಜನಕ್ಕೆ ಒತ್ತು: ಸಚಿವ ದರ್ಶನಾಪುರ

ಬೆಳಗಾವಿ:ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗಳನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ ಭೇಟಿ ನೀಡಿ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದ ಅವರು, ರಾಜ್ಯದ ಜಿಡಿಪಿ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆ ಕೈಗಾರಿಕೋದ್ಯಮಿಗಳಿಗೆ ಅಗತ್ಯವಿರುವ ಮೂಲಸೌಕರ್ಯ ಹಾಗೂ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ‘ಬಿಯಾಂಡ್ ಬೆಂಗಳೂರು’ ಎನ್ನುವ ದೃಷ್ಟಿಕೋನದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ಕೇಂದ್ರಿತ ಅಭಿವೃದ್ಧಿಯನ್ನು ಮೀರಿ…

Read More

ರೇಡ್ ಹೆಸರಿನಲ್ಲಿ ದೌರ್ಜನ್ಯ?

ಬೆಳಗಾವಿ ಗ್ರಾಮೀಣ ಪೊಲೀಸರ ಗ್ಯಾಬ್ಲಿಂಗ್ ರೇಡ್ ಪ್ರಕರಣ. ದೂರು ನೀಡಿದರೂ ವಿಚಾರಣೆ ನಡೆಸದ ಗ್ರಾಮೀಣ ಎಸಿಪಿ. ತನಿಖೆಗೆ ಡಿಸಿಪಿ ಆದೇಶ; ಆದರೂ ಎಸಿಪಿ‌ ದಿವ್ಯ ಮೌನ. ದಂಧೆಕೋರರನ್ನು ಹೆಡಮುರಿ ಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರ ಕಟ್ಟು ನಿಟ್ಟಿನ ಸೂಚನೆಗೂ ಕ್ಯಾರೆ ಎನ್ನದ ಎಸಿಪಿ ರೂರಲ್..? ತಪ್ಪಿತಸ್ಥರ ರಕ್ಚಣೆಗೆ ನಿಂತ ಎಸಿಪಿ. ಬೆಳಗಾವಿ ಕಾಪಾಡೋಕೆ ಪರಮೇಶ್ವರನೇ‌ ಬರಬೇಕು? ಬೆನ್ನಾಳಿಯಲ್ಲಿ PSI ನೇತೃತ್ವದಲ್ಲಿ ಪೊಲೀಸರಿಂದ ಹಲ್ಲೆ–ಹಣ ಕಸಿದು ಆರೋಪ* *ಬೆತ್ತಲೆ ಮಾಡಿ ಥಳಿಸಿದರೆಂಬ ದೂರು |…

Read More

ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ರದ್ದು

ಬೆಳಗಾವಿ:ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ಕಿವಡಸನ್ನವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಹಾಗೂ ಅದರ ಆಧಾರದಲ್ಲಿ ಕೈಗೊಂಡಿದ್ದ ಚುನಾವಣಾ ಪ್ರಕ್ರಿಯೆಯನ್ನು ಕನರ್ಾಟಕ ಹೈಕೋರ್ಟ್ ಧಾರವಾಡ ಪೀಠ ರದ್ದುಗೊಳಿಸಿದೆ. ಈ ಮೂಲಕ ಕಿವಡಸನ್ನವರ ಅವರು ಅಧ್ಯಕ್ಷ ಸ್ಥಾನದಲ್ಲೇ ಕಾರ್ಯನಿರ್ವಹಿಸಲು ಅವಕಾಶ ದೊರೆತಿದೆ.ಸೆಪ್ಟೆಂಬರ್ 20 ರಂದು ಹೊಸ ಪದಾಧಿಕಾರಿಗಳ ಆಯ್ಕೆಗಾಗಿ ಕೈಗೊಳ್ಳಲಾಗಿದ್ದ ಪ್ರಕ್ರಿಯೆ ಸಂಘದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ನಡೆದ ಎಲ್ಲ ಕ್ರಮಗಳನ್ನು ನ್ಯಾಯಾಲಯ ಅಮಾನ್ಯಗೊಳಿಸಿದೆ.ಈ ಕುರಿತು ಮಂಗಳವಾರ…

Read More

ಜ್ಞಾನಮಂದಿರದ ದಾರಿಗೆ ಕಸದ ದುರ್ನಾತ ವರದಿಗೆ ಎಚ್ಚರಗೊಂಡ ಪಿಡಿಓ. ನಿರ್ಲಕ್ಷ್ಯಕ್ಕೆ ಕ್ರಮ ಯಾವಾಗ? ..

ರಾಜೀ ಇಲ್ಲದ e belagavi ಡಿಜಿಟಲ್ ಧ್ವನಿಗೆ ಕದಲಿದ ಆಡಳಿತ: ಜ್ಞಾನಮಂದಿರದ ದಾರಿಯ ಕಸದ ದುರ್ನಾತ ಬಯಲು ಇ–ಬೆಳಗಾವಿ ವರದಿ ಫಲಶೃತಿ — ತಿಂಗಳುಗಳ ನಿರ್ಲಕ್ಷ್ಯಕ್ಕೆ ತೆರೆ; ನಿಯಮ ಉಲ್ಲಂಘಿಸಿದ ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಕ್ರಮಕ್ಕೆ ಜೋರಾದ ಒತ್ತಾಯ ಬೆಳಗಾವಿ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ತೆರಳುವ ಜ್ಞಾನಮಂದಿರದ ರಸ್ತೆಯಲ್ಲೇ ಕಾನೂನು ಬಾಹಿರವಾಗಿ ಕಸದ ರಾಶಿ ಹಾಕಿ ರೈತಾಪಿ ವರ್ಗಕ್ಕೆ ತೊಂದರೆ ನೀಡಿದ ಪ್ರಕರಣ ಇದೀಗ ಆಡಳಿತಾತ್ಮಕ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿ ಹೊರಹೊಮ್ಮಿದೆ. ಗ್ರಾಮಸ್ಥರು ಈ ಸಂಬಂಧ ನೀಡಿದ…

Read More

ಎಫ್‌ಐಆರ್‌ಗೆ ನಾಲ್ಕು ದಿನ… ಡಿಸಿಆರ್‌ಇ ಮೌನ!

ಈ ಪ್ರಶ್ನೆಗಳಿಗೆ ಉತ್ತರಿಸೋರು ಯಾರು… ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಕಾಗದಕ್ಕೆ ಮಾತ್ರವೇ?. ಅಧಿಕಾರಿಗಳ ಅನುಮತಿ ಕಾನೂನಿಗಿಂತ ಮೇಲಾಗಿದೆಯೇ?. ಪ್ರಭಾವಿಗಳ ವಿರುದ್ಧ ದೂರು ಬಂದರೆ ಡಿಸಿಆರ್‌ಇ ಕೈಕಟ್ಟಿ ಕುಳಿತುಕೊಳ್ಳಬೇಕೇ?. ಎಸ್‌ಸಿ/ಎಸ್‌ಟಿ ದೌರ್ಜನ್ಯ ದೂರು ಕೈಗೆತ್ತಿಕೊಂಡರೂ ‘ಅನುಮತಿ’ ನೆಪದಲ್ಲಿ ಕಾಲಹರಣ ಆರ್‌ಸಿಯು ಪಿಎಚ್‌ಡಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಟೀಕೆ ಬೆಳಗಾವಿ:ಪರಿಶಿಷ್ಟ ಜಾತಿ–ಜನಾಂಗದ ಮೇಲಿನ ದೌರ್ಜನ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿಕೊಂಡರೂ, ಅದನ್ನೇ ಜಾರಿ ಮಾಡಬೇಕಾದ ಅಧಿಕಾರಿಗಳ ನಿರ್ಲಕ್ಷ್ಯವೇ ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗುತ್ತಿದೆ.ರಾಣಿ…

Read More

ತಿರುವನಂತಪುರಂನಲ್ಲಿ ‘ಕಮ್ಯುನಿಸ್ಟ್ ಕೋಟೆ’ ಕುಸಿತ.

*ತಿರುವನಂತಪುರಂನಲ್ಲಿ ‘ಕಮ್ಯುನಿಸ್ಟ್ ಕೋಟೆ’ ಕುಸಿತ!ಕೇರಳ ರಾಜಧಾನಿಯಲ್ಲಿ ಬಿಜೆಪಿ ಇತಿಹಾಸ – ಮೊದಲ ಬಾರಿಗೆ ಮೇಯರ್ ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯ 101 ವಾರ್ಡ್‌ಗಳಲ್ಲಿ 50 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಹೊಸ ಇತಿಹಾಸ ಬರೆದಿದೆ. ಇದು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಗೆ…

Read More
error: Content is protected !!